ಪೆರೋಲ್ ಅವಧಿಗೂ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಮರಳಿದ ಶಶಿಕಲಾ

Public TV
1 Min Read
ANE SHAHSIKALA

ಬೆಂಗಳೂರು: ಪತಿಯ ನಿಧನದ ಹಿನ್ನೆಲೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಸಲುವಾಗಿ 15 ದಿನಗಳ ಪೆರೋಲ್ ಪಡೆದಿದ್ದ ಎಐಎಂಡಿಕೆ ನಾಯಕಿ ಶಶಿಕಲಾ ಮೂರು ದಿನಗಳ ಮುಂಚೆಯೇ ಜೈಲಿಗೆ ವಾಪಸ್ ಆಗಿದ್ದಾರೆ.

ANE SHAHSIKALA 4

ಇದೇ ಮಾರ್ಚ್ 20 ರ ಮಧ್ಯರಾತ್ರಿ ಶಶಿಕಲಾ ಪತಿ ನಟರಾಜನ್ ಅನಾರೋಗ್ಯದ ಹಿನ್ನೆಲೆ ಮೃತಪಟ್ಟಿದ್ದರು. ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಹಿನ್ನೆಲೆ 15 ದಿನಗಳ ತುರ್ತು ಪೆರೋಲ್ ಪಡೆದು ಮಾರ್ಚ್ 21 ರಂದು ತಂಜಾವೂರಿಗೆ ತೆರಳಿದ್ದರು. ಆದರೆ ಇನ್ನೂ 5 ದಿನಗಳ ಪೆರೋಲ್ ಅವಧಿ ಇರುವಂತೆಯೇ ಶಶಿಕಲಾ ಪರಪ್ಪನ ಆಗ್ರಹಾರಕ್ಕೆ ಅಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ಶಶಿಕಲಾ ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವೈಮಸ್ಸು ಮೂಡಿದ್ದು, ಈ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಶಶಿಕಲಾ ಜೈಲಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶಶಿಕಲಾ ಜೈಲಿಗೆ ವಾಪಸ್ಸಾಗುವ ವೇಳೆ ತಂಜಾವೂರಿನಿಂದ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗು ಬೆಂಬಲಿಗರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್, ಶಶಿಕಲಾ ಅವರಿಗೆ ಕಳೆದ ಹತ್ತು ದಿನಗಳಿಂದಲೂ ಡೆಂಗ್ಯು ಜ್ವರ ಬಾಧಿಸಿದ್ದು, ಮನೆಯಲ್ಲೆ ವೈದ್ಯರಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು ಎಂದು ತಿಳಿಸಿದರು. ಶಶಿಕಲಾರ ಪತಿಯ ಎಲ್ಲಾ ಅಂತಿಮ ಕಾರ್ಯಗಳು ಶುಕ್ರವಾರವೇ ಮುಗಿದ ಕಾರಣ ಇಂದು ಪರಪ್ಪನ ಅಗ್ರಹಾರಕ್ಕೆ ಮರಳಿದರು ಎಂದರು.

ANE SHAHSIKALA 1

Share This Article
Leave a Comment

Leave a Reply

Your email address will not be published. Required fields are marked *