ಬೆಂಗಳೂರು: ಗೃಹ ಸಚಿವರು ಹೋಗುವ ಮುನ್ನವೇ ಗುಜರಾತ್ಗೆ ಸ್ಯಾಂಟ್ರೋ ರವಿ (Santro Ravi) ಜಂಪ್ ಆಗಿದ್ನಾ? ಕೈ ಕಾಲು ಹಿಡಿದು ಬಚಾವ್ ಆಗುವ ಪ್ರಯತ್ನಕ್ಕೆ ಮುಂದಾಗಿದ್ನಾ ರವಿ? ಎಂಬ ಚರ್ಚೆಗಳು ಶುರುವಾಗಿವೆ. ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಗುಜರಾತ್ ಟೂರ್ನಿಂದ ರಾಜ್ಯಕ್ಕೆ ಬಂದ ಮಾರನೇ ದಿನವೇ ಸ್ಯಾಂಟ್ರೋ ಆರೆಸ್ಟ್ ಅಸಲಿಯತ್ತೇನು? ಗುಜರಾತ್ ಮಾಡೆಲ್ ಗುಮಾನಿ. ಏನಿದು ಆರೆಸ್ಟ್ ಅಸಲಿ ಕಹಾನಿ? ಅಂತಾ ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಸಂಶಯ ವ್ಯಕ್ತಪಡಿಸಿವೆ.
ಅಂದಹಾಗೆ ಕಾಕತಾಳಿಯೋ? ಸ್ಯಾಂಟ್ರೋ ರವಿ ಪ್ರಯತ್ನವೋ? ಗುಜರಾತ್ನಲ್ಲಿ ಕಳ್ಳ-ಪೊಲೀಸ್ ಆಟದ ಬಗ್ಗೆ ನಾನಾ ದೃಷ್ಟಿಕೋನದಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರಶ್ನೆಗಳನ್ನು ಕೇಳ್ತಿವೆ. ಮೂರು ದಿನಗಳ ಹಿಂದೆಯಷ್ಟೇ ಗುಜರಾತ್ ಟೂರ್ಗೆ ಆರಗ ಜ್ಞಾನೇಂದ್ರ ತೆರಳಿದ್ರು. ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟಂತೆ ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಭೇಟಿಯಾಗಿ ಸೌಹಾರ್ದಯುತವಾದ ಮಾತುಕತೆ ನಡೆಸಿದ್ರು ಅಹಮದಾಬಾದ್ನಿಂದ ಆರಗ ಜ್ಞಾನೇಂದ್ರ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇದೇ ಸಂಧರ್ಭದಲ್ಲಿ ಅಹಮದಾಬಾದ್ನಲ್ಲೇ ಸ್ಯಾಂಟ್ರೋ ರವಿ ಬಂಧನ ಆಗಿರುವುದಕ್ಕೆ ಕಾಂಗ್ರೆಸ್ ಗುಮಾನಿ ವ್ಯಕ್ತಪಡಿಸಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumarswamy) ಸಹ ಗೃಹ ಸಚಿವರ ಮೇಲೆ ಅನುಮಾನವ್ಯಕ್ತಪಡಿಸಿ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ 1995 ರಿಂದಲೂ ಕೇಸ್ಗಳನ್ನು ಜಾಲಾಡ್ತಿರೋ ಪೊಲೀಸರು
ಕಡೇ ಕ್ಷಣದ ತನಕವೂ ಬಂಧನದಿಂದ ತಪ್ಪಿಸಿಕೊಳ್ಳಲು ಸ್ಯಾಂಟ್ರೋ ರವಿ ಗೃಹ ಸಚಿವರ ಭೇಟಿಗೆ ಯತ್ನಿಸುತ್ತಿದ್ದ ಎಂಬ ಗುಸುಗುಸು ನಡೆಯುತ್ತಿದೆ. ಆದ್ರೆ ಸರ್ಕಾರ ಮತ್ತು ವೈಯುಕ್ತಿಕ ಮುಜಗರಕ್ಕೆ ಸಿಲುಕಿಸಿದ್ದ ಗೃಹ ಸಚಿವರು ಸ್ಯಾಂಟ್ರೋ ರವಿ ನಡೆಗೆ ಕೆಂಡವಾಗಿದ್ದಾರಂತೆ. ಹಾಗಾಗಿ ಸ್ಯಾಂಟ್ರೋ ಆರೆಸ್ಟ್ ಮಾಡಿ ಅಂತಾ ಕಟ್ಟಾಜ್ಞೆ ಮಾಡಿದ್ರಂತೆ. ಹಾಗಾದ್ರೆ ಗೃಹ ಸಚಿವರು ಗುಜರಾತ್ನಲ್ಲಿ, ಸ್ಯಾಂಟ್ರೋ ರವಿ ಆರೆಸ್ಟ್ ಕೂಡ ಗುಜರಾತ್ನಲ್ಲಿ ಆಗಿರೋದಕ್ಕೆ ಕಾಂಗ್ರೆಸ್ ಮತ್ತು ಹೆಚ್ಡಿಕೆ ಲಿಂಕ್ ಕಲ್ಪಿಸುತ್ತಿರುವ ಅಸಲಿಯತ್ತೇನು? ರಾಜಕೀಯ ಕಾರಣವೋ? ಇಲ್ಲ ಬೇರೆ ಟ್ವಿಸ್ಟ್ ಕಹಾನಿಯೋ? ಕಾದುನೋಡಬೇಕಿದೆ. ಇದನ್ನೂ ಓದಿ: ಎಲ್ಲರ ಕಣ್ತಪ್ಪಿಸಿ ಸ್ಯಾಂಟ್ರೋ ರವಿ ಶಿಫ್ಟ್ – ವಿಐಪಿ ಗೇಟ್ನಲ್ಲಿ ಕರೆದೊಯ್ದ ಬಗ್ಗೆ ಹೆಚ್ಡಿಕೆ ಕಿಡಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k