ಸ್ಯಾಂಡಲ್ವುಡ್ ಯುವ ನಟ ಸತೀಶ್ ವಜ್ರ ಅವರನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸತೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನವಾಗಿದೆ. ಬಾಮೈದರಿಂದಲೇ ಸ್ಯಾಂಡಲ್ವುಡ್ ನಟ ಸತೀಶ್ ಹತ್ಯೆಯಾಗಿದೆ.
ಒಂದಿಷ್ಟು ಶಾರ್ಟ್ ಮೂವಿಯಲ್ಲಿ ಕೆಲಸ ಮಾಡುತ್ತಾ, ಜೊತೆಗೆ `ಲಗೋರಿ’ ಎಂಬ ಚಿತ್ರದಲ್ಲಿ ನಟನಾಗಿ ಬಣ್ಣಹಚ್ಚಿದ ಸತೀಶ್ ವಜ್ರ, ಅವರ ಮನೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಮನೆಯಲ್ಲಿರುವಾಗ ಆರೋಪಿಗಳಾದ ಸುದರ್ಶನ್ ಹಾಗೂ ನಾಗೇಂದ್ರ ಕೊಲೆ ಮಾಡಿ ಹೋಗಿದ್ದಾರೆ. ಸತೀಶ್ ಅವರನ್ನು ಆರ್.ಆರ್ ನಗರದ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದೀಗ ಆರ್.ಆರ್ ನಗರದ ಪೊಲೀಸರಿಂದ ಸುದರ್ಶನ್ ಹಾಗೂ ನಾಗೇಂದ್ರ ಬಂಧನವಾಗಿದೆ. ಇದನ್ನೂ ಓದಿ: ಬಾಮೈದನಿಂದಲೇ ಸ್ಯಾಂಡಲ್ವುಡ್ ನಟ ಸತೀಶ್ ಬರ್ಬರ ಹತ್ಯೆ?
ಕೆಲ ತಿಂಗಳ ಹಿಂದಷ್ಟೇ ಓರ್ವ ಯುವತಿಯನ್ನು ಪ್ರೀತಿಸಿ ಸತೀಶ್ ಮದುವೆಯಾಗಿದ್ದ, ಆದರೆ ಮೂರು ತಿಂಗಳ ಹಿಂದಷ್ಟೇ ಸತೀಶ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಅಕ್ಕನಿಗೆ ಭಾವ ಸತೀಶ್ ಕಿರುಕುಳ ಕೊಟ್ಟಿದ್ದಾರೆ ಎಂದು ಶಂಕಿಸಿ ಭಾಮೈದನಿಂದಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿದ್ದಾರೆ. ಬಾಮೈದ ಹಾಗೂ ಬಾಮೈದನ ಸಹೋದರ ಸುದರ್ಶನ್ ಹಾಗೂ ನಾಗೇಂದ್ರ ಆರೋಪಿಗಳ ಬಂಧಿಸಿದ್ದಾರೆ.
Live Tv