ಕನ್ನಡ ಸಿನಿಮಾರಂಗದಲ್ಲಿ ಮನೋಜ್ಞ ನಟನೆ ಮತ್ತು ವಿಶಿಷ್ಠ ವ್ಯಕ್ತಿತ್ವದಿಂದ ಮನೆಮಾತಾಗಿರೋ ಸತೀಶ್ ನೀನಾಸಂ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಆದರೆ ಈಗ ಸತೀಶ್ ನಟನೆಯ ʻಗೋದ್ರಾʼ ಚಿತ್ರ ಟೈಟಲ್ ಚೇಂಜ್ ಆಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ `ಗೋದ್ರಾ’ ಚಿತ್ರಕ್ಕೆ ಕೆ.ಎಸ್ ನಂದೀಶ್ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ರಿಲೀಸ್ ರೆಡಿಯಿದ್ದು, ಇದೀಗ ಚಿತ್ರದ ಟೈಟಲ್ ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಈ ಹಿಂದೆಯೇ 2020ರಲ್ಲೇ ಟೈಟಲ್ ಕೈಬಿಡುವಂತೆ ಹೇಳಿತ್ತು ಸೆನ್ಸಾರ್ ಮಂಡಳಿ.
ಈ ಹಿಂದೆ 2002ರಲ್ಲಿ ದೇಶದೆಲ್ಲಡೆ ಸದ್ದು ಮಾಡಿದ್ದ ಗೋದ್ರಾ ಹತ್ಯಾಕಾಂಡ ಸಂಚಲನ ಮೂಡಿಸಿತ್ತು. ಆದರೆ ಇದಕ್ಕೂ ಚಿತ್ರ ಕಥೆಗೂ ಯಾವುದೇ ಸಂಬಂಧವಿಲ್ಲ ಅಂತಾ ಚಿತ್ರತಂಡ ಸ್ಪಷ್ಟಪಡಿಸಿದೆ. ಈ ಹಿನ್ನಲೆ ಸೆನ್ಸಾರ್ ಮಂಡಳಿ 2020ರಲ್ಲೇ ಟೈಟಲ್ ಕೈಬಿಡುವಂತೆ ಹೇಳಿತ್ತು. ಅದನ್ನು ಚಿತ್ರತಂಡವು ಒಪ್ಪಿಕೊಂಡಿದ್ದು, ಚಿತ್ರಕ್ಕೆ ಪೂರಕವಾದ ಹೆಸರನ್ನೇ ಹುಡುಕುತ್ತಿದೆ. ರಿಲೀಸ್ಗೂ ಮುಂಚೆನೇ ಟೈಟಲ್ ಬದಲಾವಣೆಯೊಂದಿಗೆ ಸತೀಶ್ ನೀನಾಸಂ ನಟನೆಯ ಚಿತ್ರ ಬರಲಿದೆ. ಇದನ್ನೂ ಓದಿ: ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ
View this post on Instagram
ಭಿನ್ನ ಕಥೆ ಜತೆ ಬರುತ್ತಿರೋ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ರನ್ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.