Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸದನಕ್ಕೆ ಬಂದು ಕಳಂಕರಹಿತವೆಂದು ಬಹಿರಂಗಪಡಿಸಿ- ಸಾರಾ ಮಹೇಶ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಸದನಕ್ಕೆ ಬಂದು ಕಳಂಕರಹಿತವೆಂದು ಬಹಿರಂಗಪಡಿಸಿ- ಸಾರಾ ಮಹೇಶ್

Districts

ಸದನಕ್ಕೆ ಬಂದು ಕಳಂಕರಹಿತವೆಂದು ಬಹಿರಂಗಪಡಿಸಿ- ಸಾರಾ ಮಹೇಶ್

Public TV
Last updated: July 20, 2019 12:13 pm
Public TV
Share
3 Min Read
SARA MAHESH
SHARE

– ನಾವೂ ನೊಂದಿದ್ದೇವೆ ಆದ್ರೆ ಮುಂಬೈಗೆ ಹೋಗಿಲ್ಲ
– ನನ್ನದು ತಪ್ಪಿದ್ದರೆ ಜನತೆಯ ಕ್ಷಮೆಯಾಚಿಸ್ತೇನೆ
– ಪಕ್ಷಕ್ಕೆ ಕರೆತಂದು ತಪ್ಪು ಮಾಡಿದ್ದೇನೆ

ಮೈಸೂರು: ಸೋಮವಾರ ಸದನಕ್ಕೆ ಬಂದು ನೀವು ಕಳಂಕರಹಿತ ಎಂದು ಬಹಿರಂಗ ಪಡಿಸಿ, ಆಗ ನಾನು ರಾಜ್ಯದ ಮುಂದೆ ಕ್ಷಮೆ ಕೇಳುತ್ತೇನೆ ಎಂದು ಸಚಿವ ಸಾ.ರಾ.ಮಹೇಶ್ ಅವರು ಶಾಸಕ ಎಚ್.ವಿಶ್ವನಾಥ್ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ.ಮಹೇಶ್, ಎಚ್ ವಿಶ್ವನಾಥ್ ಅವರು ಸದನದಿಂದ ಹೊರತುಪಡಿಸಿರುವ ವ್ಯಕ್ತಿಯಲ್ಲ. ಅವರು ಸದನದ ಸದಸ್ಯರಾಗಿದ್ದಾರೆ. ಆದ್ದರಿಂದ ನಿಮಗೆ ಆತ್ಮಸಾಕ್ಷಿ, ಮನಸಾಕ್ಷಿ ಇದ್ದರೆ ಸೋಮವಾರ ಸದನಕ್ಕೆ ಬನ್ನಿ. ನಾನು ಹೇಳಿರುವ ಮಾತಿನಲ್ಲಿ ತಪ್ಪಿದ್ದರೆ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳುತ್ತೇನೆ. ಈಗಾಗಲೇ ನಾನು ಇನ್ಮುಂದೆ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದೇನೆ. ಅದೇ ಮಾತಿಗೆ ಬದ್ಧನಿದ್ದೇನೆ ಎಂದು ಹೇಳಿದರು.

VISWANATH

ನೀವು ಸದನಕ್ಕೆ ಬರುವ ಅಧಿಕಾರವನ್ನು ಕಳೆದುಕೊಂಡಿದ್ದೀರಿ. ನೀವು ಕಳಂಕರಹಿತ ಎಂದು ಹೇಳಲು ಇರುವ ಕೊನೆಯ ದಿನಾಂಕ ಸೋಮವಾರ. ಹೀಗಾಗಿ ಅಂದು ಬನ್ನಿ ಬಹಿರಂಗವಾಗಿ ಹೇಳಿ ನಾನು ಒಪ್ಪಿಕೊಳ್ಳುತ್ತೇನೆ. ಜೊತೆಗೆ ಎಲ್ಲ ಷರತ್ತುಗಳನ್ನು ನಾನು ಪಾಲಿಸುತ್ತೇನೆ. ಅಲ್ಲೇ ನಾನು ಸ್ಪೀಕರ್‍ಗೆ ರಾಜೀನಾಮೆ ಕೊಟ್ಟು ನನ್ನ ಜೀವಿತಾವಧಿಯಲ್ಲಿ ಯಾವುದೇ ರಾಜಕೀಯ ಹುದ್ದೆ, ಚುನಾವಣೆಯನ್ನು ಸಾರ್ವಜನಿಕ ಜೀವನದಲ್ಲಿ ಬಯಸಲ್ಲ. ಅಷ್ಟೇ ಅಲ್ಲದೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ ಎಂದು ವಿಶ್ವನಾಥ್‍ಗೆ ಸವಾಲು ಹಾಕಿದರು.

vlcsnap 2019 07 20 11h17m42s866

ನಾವು ನೊಂದಿದ್ದೇವೆ. ಆದರೆ ಮುಂಬೈಗೆ ಹೋಗಿಲ್ಲ, ನೀವು ಮುಂಬೈನಿಂದ ಬನ್ನಿ. ನಮ್ಮ ಕರ್ನಾಟಕದಲ್ಲಿ ಪೊಲೀಸ್, ವೈದ್ಯರು ಇಲ್ವಾ? ನಮ್ಮ ಜನರು ನಿಮಗೆ ಪ್ರೀತಿ ಗೌರವವನ್ನು ಕೊಟ್ಟಿದ್ದಾರೆ. ಆದರೆ ನೀವು ಮುಂಬೈನಲ್ಲಿ ಕುಳಿತಿದ್ದೀರಿ. ಮುಂಬೈನಲ್ಲಿ ನಿಮಗೆ ಏನ್ ಸ್ವಾಮಿ ಕೆಲಸ ಎಂದು ಪ್ರಶ್ನೆ ಮಾಡಿದರು.

ರಾಜಕಾರಣದಲ್ಲಿ ಪ್ರಯಾಣಿಕವಾಗಿದ್ದವನು ನೇರವಾಗಿ ಮಾತನಾಡುತ್ತಾನೆ, ಅದು ದುರಂಕಾರವಲ್ಲ. ಒಬ್ಬ ಮನಷ್ಯ ವ್ಯವಹಾರ ಮಾಡುವುದು ತಪ್ಪಲ್ಲ. ಆದರೆ ರಾಜಕಾರಣವನ್ನು ವ್ಯವಹಾರ ಮಾಡುವುದು ತಪ್ಪು ಎಂದು ಮಹೇಶ್ ಗರಂ ಆದರು.

trust vote session 2

ಒಮ್ಮೆ ನಾನು ಬಿಜೆಪಿ ಮುಖಂಡರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದೆ. ಆಗ ಅವರು ಅವನು ಬಿಜೆಪಿಯ ಹಳೆ ಗಿರಾಕಿ ಎಂದು ಟೀಕಿಸಿದ್ದರು. ಆಗಲೂ ಸುಮ್ಮನೆ ಇದ್ದೆ. ನನ್ನ ಮೇಲೆ ಹಲವು ಬಾರಿ ಟೀಕಿಸಿದ್ದರೂ ಸುಮ್ನೆ ಇದ್ದೆ. ನನಗೂ ಸ್ವಾಭಿಮಾನವಿದೆ, ಹಾಗಾಗಿ ನಾನು ವಿಧಾನಸಭೆಯಲ್ಲಿ ಮಾತನಾಡಿದೆ. ಆದರೆ ಈ ಬಗ್ಗೆ ನೀವು(ವಿಶ್ವನಾಥ್) ಮಾಧ್ಯಮಗಳಲ್ಲಿ ಮಾತನಾಡಿ, ನಾನು ಪ್ರಾಮಾಣಿಕನಾಗಿದ್ದರೂ ಭ್ರಷ್ಟಾಚಾರಿ ಅಲ್ಲ, ನನ್ನನ್ನು ಮಂತ್ರಿ ಮಾಡಲು ಅವರ‍್ಯಾರು ಎಂದು ಪ್ರಶ್ನೆ ಮಾಡಿದ್ದೀರಿ ಎಂದು ವಿಶ್ವನಾಥ್ ಹೇಳಿಕೆಯನ್ನು ಸಾರಾ ಮಹೇಶ್ ಇಂದು ಪ್ರಸ್ತಾಪ ಮಾಡಿದರು.

vishwanath sara mahesh

ನಮ್ಮ ನಾಯಕರಿಗೆ ಇವತ್ತು ಈ ಸ್ಥಿತಿಗೆ ಬರಲು ಪರೋಕ್ಷವಾಗಿ ನಾನೇ ಕಾರಣ. ವಿಶ್ವನಾಥ್‍ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜಿ.ಟಿ ದೇವೇಗೌಡ ಸೇರಿದಂತೆ ಹಲವರ ವಿರೋಧ ಇತ್ತು. ಆದರೂ ನಾನು ಪಕ್ಷಕ್ಕೆ ಒಳ್ಳೆಯಾದಾಗಲಿ ಎಂದು ಅವರನ್ನು ಕರೆ ತಂದೆ. ಆವತ್ತು ನಾನು ನಮ್ಮ ಪಕ್ಷಕ್ಕೆ ಅವರನ್ನು ಬೇಡ ಅಂದಿದ್ದರೆ, ಇವತ್ತು ನಮ್ಮ ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಕೋಪದಿಂದ ಹೇಳಿದರು.

BJP SULLAI 1

ನಾನು ಜಾತಿ ವಿರೋಧಿನಾ, ನಾನು ವೃತ್ತಿಯಲ್ಲಿ ಡೆವಲಪರ್ ಆಗಿದ್ದೆ. ನನಗೆ ವ್ಯವಹಾರ ಇದೆ. ನಾನು ನಾಲ್ಕು ಚುನಾವಣೆಯನ್ನು ಎದುರಿಸಿದ್ದೇನೆ. ಜನರು ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ನೀವು ಒಂಬತ್ತು ಚುನಾವಣೆಯಲ್ಲಿ ನಿಂತಿದ್ದೀರಿ. ಆದರೆ ನಾಲ್ಕು ಬಾರಿ ಸೋತಿದ್ದೀರಿ, ನಾನು ಜಾತಿ ವಿರೋಧಿ ಮಾಡುತ್ತೀನಾ. ನಿಮಗೆ ಯಾವ ವ್ಯವಹಾರ ಇದೆ, ಹಣ ಎಲ್ಲಿಂದ ಬಂತು ಎಂದು ಮಹೇಶ್ ವ್ಯಂಗ್ಯವಾಡಿದರು.

vlcsnap 2019 07 19 13h24m00s206

ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೀನಿ ಎಂದು ಹೇಳಿದ್ದೀರಲ್ಲ. ಬನ್ನಿ ನಾಳೆ ಅಧಿವೇಶನಕ್ಕೆ ನನ್ನ ವಿರುದ್ಧ ಹಕ್ಕು ಚ್ಯುತಿ ತನ್ನಿ. ಇನ್ನೂ ಅನೇಕ ವಿಷಯಗಳಿವೆ, ಅವುಗಳನ್ನು ಬಹಿರಂಗ ಪಡಿಸುತ್ತೇನೆ. ಯಾವ ದೇವಸ್ಥಾನಕ್ಕೆ ಕರೆಯುತ್ತೀರಾ ಕರೆಯಿರಿ ಬರುತ್ತೇನೆ. ನಾನು ನನ್ನ ವ್ಯವಹಾರದಲ್ಲಿ ಬಿಟ್ಟು, ಬೇರೆ ಯಾರಿಂದಲೂ ಹಣ ಪಡೆದಿಲ್ಲ. ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ ಎಂದು ಮಹೇಶ್ ಸವಾಲು ಹಾಕಿದರು.

TAGGED:h vishwanathmaheshmysuruPress MeetPublic TVಎಚ್ ವಿಶ್ವನಾಥ್ಪಬ್ಲಿಕ್ ಟಿವಿಮಹೇಶ್ಮೈಸೂರುಸುದ್ದಿಗೋಷ್ಠಿ
Share This Article
Facebook Whatsapp Whatsapp Telegram

Cinema news

vijay devarakonda rashmika
ವೈರಲ್ ಆಯ್ತು ವಿಜಯ್ ದೇವರಕೊಂಡ – ರಶ್ಮಿಕಾ ವೆಡ್ಡಿಂಗ್ ಕಾರ್ಡ್; ಮದ್ವೆ ಎಲ್ಲಿ – ಯಾವಾಗ?
Cinema Latest Sandalwood South cinema
World Of Nagabandham
`ನಾಗಬಂಧಂ’ ಟೀಸರ್ ರಿಲೀಸ್ ಮಾಡಿದ ಸೂಪರ್‌ ಸ್ಟಾರ್‌ ಮಹೇಶ್ ಬಾಬು
Cinema Latest South cinema
Trisha Nainar Nagenthran
ಈ ರೀತಿಯ ಅಸಹ್ಯ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ: ನೈನಾರ್ ನಾಗೇಂದ್ರನ್‌ಗೆ ತ್ರಿಶಾ ತಿರುಗೇಟು
Cinema Latest Main Post South cinema
Samhita Vinya
ಸಾಲು ಸಾಲು ಚಿತ್ರಗಳಲ್ಲಿ ಸಂಹಿತಾ ವಿನ್ಯಾ ಬ್ಯುಸಿ – ‘ಮಿಕ್ಸಿಂಗ್ ಪ್ರೀತಿ’ ಫೆ.20 ರಂದು ತೆರೆಗೆ
Crime Latest Sandalwood

You Might Also Like

Bhuvaneshwar blast
Crime

ಸೇಡು ತೀರಿಸಿಕೊಳ್ಳಲು ಕಚ್ಚಾ ಬಾಂಬ್ ತಯಾರಿಸ್ತಿದ್ದಾಗಲೇ ಬ್ಲಾಸ್ಟ್ – ಇಬ್ಬರು ಸಾವು

Public TV
By Public TV
23 minutes ago
Jaish e Mohammed commander Saifullah
Crime

ಸೇನೆಯಿಂದ ತಪ್ಪಿಸಿಕೊಳ್ಳಲು ಜೈಶ್ ಉಗ್ರನ ಊಸರವಳ್ಳಿ ಪ್ಲ್ಯಾನ್‌ – ಗಡ್ಡ ಬೋಳಿಸಿಕೊಂಡು ಬುರ್ಖಾ ತೊಟ್ಟನಾ ರಣಹೇಡಿ?

Public TV
By Public TV
53 minutes ago
Three guilty in murder case and Israeli Tourist Rape case
Court

ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ರೇಪ್, ಓರ್ವನ ಹತ್ಯೆ ಕೇಸ್ – ಮೂವರಿಗೆ ಗಲ್ಲು ಶಿಕ್ಷೆ

Public TV
By Public TV
56 minutes ago
Anthropic
Bengaluru City

ಮಡುರೋ ಕಿಡ್ನಾಪ್‌ ಕೇಸ್‌ನಲ್ಲಿ ಸುದ್ದಿಯಾದ AI Anthropic ಕಂಪನಿಯ ಬೆಂಗಳೂರು ಕಚೇರಿ ಓಪನ್‌

Public TV
By Public TV
1 hour ago
Krishna Byre Gowda
Districts

ಹೊಳೆನರಸೀಪುರ | ಶಾಲೆಗೆ ತೆರಳಿ ಬಿಸಿಯೂಟ ಸವಿದ ಸಚಿವ ಕೃಷ್ಣಭೈರೇಗೌಡ

Public TV
By Public TV
2 hours ago
Rajasthan Bhiwadi Blast
Crime

ರಾಜಸ್ಥಾನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ – 7 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?