– ಮಿಸ್ಟರ್ 360 ಬಗ್ಗೆ ಶ್ರೀಶಾಂತ್ ಮೆಚ್ಚುಗೆ ಮಾತು
ನವದೆಹಲಿ: ಕನ್ನಡಿಗ, ಟೀಂ ಇಂಡಿಯಾ ಯುವ ಆಟಗಾರ ಕೆ.ಎಲ್.ರಾಹುಲ್ ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕ ಎಂದು ಭಾರತದ ವೇಗದ ಬೌಲರ್ ಎಸ್.ಶ್ರೀಶಾಂತ್ ಭವಿಷ್ಯ ನುಡಿದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಎಸ್.ಶ್ರೀಶಾಂತ್, ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ನಂತರ ಕೆ.ಎಲ್.ರಾಹುಲ್ ಟೀಂ ಇಂಡಿಯಾದ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಭವಿಷ್ಯದ ಬಗ್ಗೆ ಸೂಕ್ತ ಕಾರಣವನ್ನು ನೀಡಿದ್ದಾರೆ. ಇದನ್ನೂ ಓದಿ: ‘ಮಿಸ್ಟರ್ 360’ ರಾಹುಲ್ ಈ ಯುಗದ ನನ್ನ ನೆಚ್ಚಿನ ಬ್ಯಾಟ್ಸ್ಮನ್: ಬ್ರಿಯಾನ್ ಲಾರಾ
ಯಾವುದೇ ಆಟಗಾರ ನಾಯಕನಾಗಲು ಬೇಕಾದ ಎಲ್ಲಾ ಗುಣಗಳನ್ನು ರಾಹುಲ್ ಹೊಂದಿದ್ದಾರೆ. ಅವರು ಎಲ್ಲಾ ಮೂರು ಮಾದರಿಯಲ್ಲೂ ಉತ್ತಮವಾಗಿ ಆಡುತ್ತಾರೆ. ಅಷ್ಟೇ ಅಲ್ಲದೆ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡುತ್ತಾರೆ. ರಾಹುಲ್ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ತಂಡದ ಬಗ್ಗೆ ಯೋಚಿಸುತ್ತಾನೆ. ವಿರಾಟ್ರಂತೆಯೇ ಅವರು ತುಂಬಾ ಶ್ರದ್ಧೆಯಿಂದ ಆಡುತ್ತಾರೆ ಎಂದು ಶ್ರೀಶಾಂತ್ ತಿಳಿಸಿದ್ದಾರೆ. ಇದನ್ನೂ ಓದಿ: ಕೆಎಲ್ ಅಂದ್ರೆ ಖಡಕ್ ಲಡ್ಕಾ- ರಾಹುಲ್ರನ್ನ ಹೊಗಳಿದ ಸೆಹ್ವಾಗ್
ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ವರ್ತನೆ ಉತ್ತಮವಾಗಿದೆ. ಆದಾಗ್ಯೂ ವಿರಾಟ್ ಅವರನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಇಬ್ಬರೂ ತಮ್ಮದೇ ಆದ ಆಟದ ಶೈಲಿಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ರಾಜನಾಗಿದ್ದರೆ, ಸಚಿನ್ ಕ್ರಿಕೆಟ್ ದೇವರು ಎಂದು ಹೇಳಿದರು. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ
ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಹೊಗಳಿದ ಶ್ರೀಶಾಂತ್, ಇಬ್ಬರೂ ತುಂಬಾ ಅಪಾಯಕಾರಿ ಬೌಲಿಂಗ್ ಮಾಡುತ್ತಾರೆ. ತಂಡದಲ್ಲಿ ಸ್ಥಿರವಾಗಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಟೀಂ ಇಂಡಿಯಾದ ಪರಿಸ್ಥಿತಿ ಈಗ ಬದಲಾಗಿದೆ. ಈಗ ಯುವ ಆಟಗಾರರು ತಮ್ಮ ಹಿರಿಯರನ್ನು ಹೆಚ್ಚು ಗೌರವಿಸುವುದಿಲ್ಲ ಎಂದು ಕೆಲವು ದಿನಗಳ ಹಿಂದೆ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹೇಳಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀಶಾಂತ್, ಸಮಯ ಈಗ ಬದಲಾಗಿದೆ. ಹಿಂದಿನ ತಂಡಕ್ಕೂ ಮತ್ತು ಈಗಿನ ತಂಡಕ್ಕೂ ದೊಡ್ಡ ವ್ಯತ್ಯಾಸವಿದೆ. ಈಗ ಆಟಗಾರರಿಗೆ ಐಪಿಎಲ್ ನಂತಹ ಹೆಚ್ಚಿನ ಅವಕಾಶಗಳಿವೆ. ಇಂತಹ ಟೂರ್ನಿಗಳು ಈ ಮೊದಲು ಇರಲಿಲ್ಲ. ನಾನು ಪ್ರಸ್ತುತ ಆಟಗಾರರಂತೆ ಯೋಚಿಸಿದರೆ, ಅದು ಕೂಡ ಸರಿ ಅಂತ ತೋರುತ್ತದೆ. ನಾನು ಕೇರಳ ರಂಜಿ ತಂಡಕ್ಕಾಗಿ ಆಡುತ್ತಿದ್ದರೂ ಅಲ್ಲಿ ನನಗೆ ಸಾಕಷ್ಟು ಗೌರವ ಸಿಗುತ್ತದೆ ಎಂದು ತಿಳಿಸಿದರು.