ದಾವಣಗೆರೆ: ಹರಿಹರ ಶಾಸಕರಿಗೆ ತಲೆ ಸರಿ ಇದಿಯೋ ಇಲ್ವೋ? ಅವರ ತಲೆ ಕೆಟ್ಟಿರಬೇಕು ಎಂದು ಬಿ.ಪಿ ಹರೀಶ್ (B.P. Harish) ವಿರುದ್ಧ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ (S.S. Mallikarjun) ಆಕ್ರೋಶ ಹೊರಹಾಕಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಜೊತೆ ರೇಣುಕಾಚಾರ್ಯ ಮತ್ತು ಉಳಿದ ನಾಯಕರು ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ ಎಂಬ ಬಿ.ಪಿ ಹರೀಶ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
- Advertisement -
- Advertisement -
ಎಲುಬಿಲ್ಲದ ನಾಲಿಗೆ ಏನೇನೋ ಮಾತನಾಡ್ತಾನೆ. ಇದೇ ಹರೀಶ್ ನಮ್ಮ ಮನೆಗೆ ಬಂದು ಸಿದ್ದೇಶ್ವರ್ಗೆ ಬಾಯಿಗೆ ಬಂದ ಹಾಗೆ ಬೈದಿದ್ದ. ಕಾಂಗ್ರೆಸ್ನಲ್ಲಿದ್ದು ಹಿಂದೆ ಚುನಾವಣೆಯಲ್ಲಿ ನಮ್ಮ ಪರ ಪ್ರಚಾರ ಮಾಡಿದ್ದ. ಅವನು ಯಾವಾಗ ಯಾರ ಕಡೆ ಇರುತ್ತಾನೋ ಗೊತ್ತಿಲ್ಲ. ನಮ್ಮ ಮನೆಗೆ ಬಂದಿದ್ದು ರೇಣುಕಾಚಾರ್ಯ ಅಲ್ಲ ಹರೀಶ್ ಬಂದು ಮನೆ ಕಾಯುತ್ತಿದ್ದ ಎಂದು ವ್ಯಂಗ್ಯವಾಡಿದ್ದಾರೆ.
- Advertisement -
- Advertisement -
ಪೇಪರ್ನಲ್ಲಿ ತನ್ನ ಫೋಟೋ ಬರಬೇಕು ಎಂದು ಏನೇನೋ ಮಾತಾಡ್ತಾ ಇದಾನೆ. ಜನ ಆಯ್ಕೆ ಮಾಡಿ ಕಳಿಸಿದ್ದಾರೆ, ಜನರ ಸೇವೆ ಮಾಡಲಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.