– ಮೋಸ ಹೋದರೆ ನಾನು ಜವಾಬ್ಧಾರನಲ್ಲ
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಗಣ್ಯರ, ಹಿರಿಯ ವ್ಯಕ್ಯಿಗಳ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುವ ಮೋಸದ ಜಾಲಗಳ ಕುರಿತಾಗಿ ಪ್ರತಿನಿತ್ಯ ಒಂದಲ್ಲಾ ಒಂದು ಸುದ್ದಿ ಕೇಳಿಬರುತ್ತವೆ. ಆದರೆ ಇದೀಗ ಸ್ಯಾಂಡಲ್ವುಡ್ ನಟ, ನಿರ್ದೇಶಕ ಎಸ್. ನಾರಾಯಣ್ ಅವರ ಹೆಸರಿನಲ್ಲಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಎಸ್.ನಾರಾಯಣ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ನಿರ್ದೇಶಕನ ಹೆಸರು ಹೇಳಿಕೊಂಡು ಕಿಡಿಗೇಡಿಗಳು ದುಡ್ಡು ಕೀಳುತ್ತಿದ್ದಾರೆ. ಈ ವಿಚಾರವಾಗಿ ಎಸ್.ನಾರಾಯಣ್ ವೀಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ಇಂದು ಎಸ್.ನಾರಾಯಣ್ ನಿರ್ದೇಶನದ 5-ಡಿ ಟ್ರೈಲರ್ ರಿಲೀಸ್ ಆಗಿತ್ತು. ಎಸ್.ನಾರಾಯಣ್ ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಲಾಗಿದೆ. ನನ್ನ ಹೆಸರಿನಲ್ಲಿ ಹ್ಯಾಕರ್ಸ್ಗಳು ದುಡ್ಡು ಕೇಳುತ್ತಿದ್ದಾರೆ. ನನ್ನ ಹೆಸರಿನಲ್ಲಿ ದುಡ್ಡು ಕೇಳಿದರೆ ಕೊಡಬೇಡಿ. ಯಾರಾದರೂ ಹಣವನ್ನು ಕೊಟ್ಟು ಮೋಸ ಹೋದರೆ ನಾನು ಜವಾಬ್ಧಾರನಲ್ಲ. ಈಗಾಗಲೇ ಕೆಲವರು ಮೋಸ ಹೋಗಿದ್ದಾರೆ. ನಾನು ಪೊಲೀಸ್ಗೆ ದೂರು ಕೊಟ್ಟಿದ್ದೇನೆ ಎಂದು ಎಸ್.ನಾರಾಯಣ್ ವೀಡಿಯೋ ಮಾಡಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ – ಗೊಂದಲಕ್ಕೆ ತೆರೆ ಎಳೆದ ಬೊಮ್ಮಾಯಿ