Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Russia Ukraine War – ಭಾರತದ ಮೇಲೆ ಪರಿಣಾಮ ಏನು? ಇಲ್ಲಿದೆ ಪೂರ್ಣ ಮಾಹಿತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | Russia Ukraine War – ಭಾರತದ ಮೇಲೆ ಪರಿಣಾಮ ಏನು? ಇಲ್ಲಿದೆ ಪೂರ್ಣ ಮಾಹಿತಿ

Latest

Russia Ukraine War – ಭಾರತದ ಮೇಲೆ ಪರಿಣಾಮ ಏನು? ಇಲ್ಲಿದೆ ಪೂರ್ಣ ಮಾಹಿತಿ

Public TV
Last updated: February 24, 2022 10:01 pm
Public TV
Share
3 Min Read
SHARE

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವುದರಿಂದ ಇದರ ಪ್ರಭಾವ ನೇರವಾಗಿ ಜಾಗತಿಕ ಮಾರುಕಟ್ಟೆ ಮೇಲೆ ಬಿದ್ದಿದೆ. ಇದರಲ್ಲಿ ಭಾರತೀಯ ಷೇರು ಮಾರುಕಟ್ಟೆ ಕೂಡಾ ಹೊರತಾಗಿಲ್ಲ.

ಇಂದು ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಷೇರುಪೇಟೆಗಳಲ್ಲಿ ಭಾರೀ ನಷ್ಟ ಉಂಟಾಗಿದೆ. ಒಂದೇ ದಿನ 13 ಲಕ್ಷ ಕೋಟಿ ರೂ. ನಷ್ಟವಾಗಿದೆ. ಬಿಎಸ್‍ಇ ಸೂಚ್ಯಂಕದಲ್ಲಿ 2,702 ಅಂಶ, ಎನ್‍ಎಸ್‍ಇ ಸೂಚ್ಯಂಕದಲ್ಲಿ 815.30 ಅಂಶ ನಷ್ಟವಾಗಿದೆ. ಈ ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಷೇರುಪೇಟೆ ನಷ್ಟಹೋಗಿರುವುದು ಇದೇ ಮೊದಲು.

share market A

ವಿದೇಶಿ ಹೂಡಿಕೆದಾರರ ಜೊತೆ ದೇಶಿಯ ಇನ್ವೆಸ್ಟರ್‍ಗಳು ಕೂಡ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಷೇರುಪೇಟೆಗೆ ಭಾರೀ ನಷ್ಟವಾಗಿದೆ. ಡಾಲರ್ ಎದುರು ರೂ. ಮೌಲ್ಯ 75.61 ರೂ.ಗೆ ಕುಸಿದಿದೆ. ಇನ್ನೂ ಉಕ್ರೇನ್ ಮೇಲಿನ ದಾಳಿಯಿಂದ ದೇಶದ ಮೇಲೆ ಏನೇನು ಪರಿಣಾಮ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

100 ಡಾಲರ್ ದಾಟಿದ ಕಚ್ಛಾ ತೈಲ ಬೆಲೆ:
ಕಳೆದ 2-3 ದಿನಗಳಿಂದ 97.98 ಡಾಲರ್(7,429 ರೂ.) ಆಚೆ ಈಚೆ ಇದ್ದ 1 ಬ್ಯಾರಲ್ ಕಚ್ಛಾ ತೈಲದ ಬೆಲೆ ಯುದ್ಧ ಪ್ರಾರಂಭವಾಗುತ್ತಿದ್ದಂತೆ 105 ಡಾಲರ್(7,961 ರೂ.) ದಾಟಿದೆ. ಇದು 2014ರ ಬಳಿಕದ ಗರಿಷ್ಠ ಮಟ್ಟವಾಗಿದೆ.

ತೈಲ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಅತೀದೊಡ್ಡ ದೇಶ ರಷ್ಯಾ. ಯುರೋಪ್ ರಾಷ್ಟ್ರಗಳಿಗೆ ಶೇ.35 ರಷ್ಟು ಕಚ್ಚಾ ತೈಲ ರಷ್ಯಾದಿಂದಲೇ ಪೂರೈಕೆಯಾಗುತ್ತದೆ. ಯುದ್ಧ ನಿಲ್ಲದೇ ಹೀಗೆ ಮುಂದುವರೆದಲ್ಲಿ, ಆರ್ಥಿಕ ನಿರ್ಬಂಧಗಳ ಹೇರಿಕೆ ಹೆಚ್ಚಳವಾದಲ್ಲಿ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

petrol price 2 medium

ಪಂಚರಾಜ್ಯ ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕನಿಷ್ಟ 7-8 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.

ಚಿನ್ನದ ಬೆಲೆ ಶೇ.30 ರಷ್ಟು ಹೆಚ್ಚಳ:
ಯುದ್ಧದ ಪ್ರಭಾವ ನೇರವಾಗಿ ಬಂಗಾರದ ಮೇಲೆ ಬಿದ್ದಿದೆ. ಕೇವಲ ಒಂದೇ ದಿನದಲ್ಲಿ ಬಂಗಾರದ ಬೆಲೆ ಶೇ.30 ರಷ್ಟು ಹೆಚ್ಚಿದೆ. ಇಂದು 10 ಗ್ರಾಂ. 24 ಕ್ಯಾರೆಟ್ ಚಿನ್ನದ ಬೆಲೆ 2,500 ರೂ. ಹೆಚ್ಚಿದ್ದು, 54 ಸಾವಿರದ ಗಡಿದಾಟಿದೆ. ಆಭರಣದ ಚಿನ್ನದ ಬೆಲೆ 1,000 ರೂ. ಹೆಚ್ಚಿದ್ದು, 47ಸಾವಿರದ ಅಂಚಿನಲ್ಲಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್

gold chain

ರಸಗೊಬ್ಬರ ಪೂರೈಕೆ ವ್ಯತ್ಯಯ/ಬೆಲೆ ಹೆಚ್ಚಳ ಸಾಧ್ಯತೆ:
ಭಾರತಕ್ಕೆ ಡಿಎಪಿ ಸೇರಿ ಮೂರು ಬಗೆಯ ರಸಗೊಬ್ಬರವನ್ನು ಪೂರೈಸುವ ದೇಶಗಳಲ್ಲಿ ರಷ್ಯಾ ಪ್ರಮುಖ. ಯುದ್ಧದಿಂದ ಭಾರತಕ್ಕೆ ರಸಗೊಬ್ಬರ ಆಮದು ಕಷ್ಟಕರವಾಗಿದ್ದು, ಮುಂಗಾರು ಬೆಳೆಯ ಸಿದ್ಧತೆಯಲ್ಲಿರುವ ರೈತರಿಗೆ ಸಮಸ್ಯೆಯಾಗಲಿದೆ ಜೊತೆಗೆ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ.

ಸೂರ್ಯಕಾಂತಿ ಎಣ್ಣೆ ದರ ಹೆಚ್ಚಳ:
ಉಕ್ರೇನ್‍ನಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆ ಹೆಚ್ಚಿನ ಮಟ್ಟದಲ್ಲಿ ಆಮದು ಆಗುತ್ತದೆ. ಯುದ್ಧದಿಂದ ಆಮದು ಕಷ್ಟಸಾಧ್ಯವಾಗುವುದರಿಂದ ಸೂರ್ಯಕಾಂತಿ ಎಣ್ಣೆ ದುಬಾರಿಯಾಗುವ ಸಾಧ್ಯತೆ ಇದೆ.

ಮದ್ಯ ಪ್ರಿಯರಿಗೆ ಶಾಕ್:
ಯುದ್ಧದಿಂದ ಮದ್ಯದ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಉಕ್ರೇನ್ ವಿಶ್ವದಲ್ಲೇ ಅತೀ ಹೆಚ್ಚು ಬಾರ್ಲಿ ಪೂರೈಸುವ 5 ಪ್ರಮುಖ ದೇಶಗಳಲ್ಲಿ ಒಂದು. ಮದ್ಯ ತಯಾರಿಕೆಗೆ ಬಾರ್ಲಿ ಅಗತ್ಯ. ಯುದ್ಧದಿಂದಾಗಿ ಬಾರ್ಲಿ ಪೂರೈಕೆ ಏರುಪೇರಾಗುವುದರಿಂದ ಮದ್ಯದ ಬೆಲೆಯೂ ಹೊರೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಯುದ್ಧ ವಿಚಾರದಲ್ಲಿ ಇತರ ರಾಷ್ಟ್ರಗಳು ಮೂಗು ತೂರಿಸಬೇಡಿ – ಪುಟಿನ್ ನೇರ ಎಚ್ಚರಿಕೆ

Beers feature 5 copy

ಮೊಬೈಲ್ ಉದ್ಯಮಕ್ಕೆ ಆಘಾತ:
ಮೊಬೈಲ್ ಬಿಡಿಭಾಗಗಳ ಪೂರೈಕೆಯಲ್ಲಿ ರಷ್ಯಾ ಮುಂದಿದೆ. ಯುದ್ಧದಿಂದ ಆಮದು-ರಫ್ತಿಗೆ ತೊಡಕಾಗುವ ಸಾಧ್ಯತೆ ಇರುವುದರಿಂದ ಮೊಬೈಲ್ ಉದ್ಯಮಕ್ಕೆ ಕಷ್ಟವಾಗಲಿದೆ.

ವಾಹನ ಉದ್ಯಮಕ್ಕೆ ಪೆಟ್ಟು:
ವಾಹನ ಎಕ್ಸಾಸ್ಟ್ ವ್ಯವಸ್ಥೆಗೆ ಪಲಾಡಿಯಂ ಲೋಹ ಅಗತ್ಯ. ಪಲಾಡಿಯಂ ಲೋಹವನ್ನು ಹೆಚ್ಚು ರಫ್ತು ಮಾಡುವ ದೇಶ ರಷ್ಯಾ. ಯುದ್ಧ ಬಿಕ್ಕಟ್ಟಿನ ಬಳಿಕ ಪಲಾಡಿಯಂ ಲೋಹದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.

ಕೆಮಿಕಲ್ಸ್, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್‍ಗಳೊಂದಿಗೆ ಕೈಗಾರಿಕೆಯಲ್ಲಿ ಬಳಕೆಯಾಗುವ ರಿಯಾಕ್ಟರ್ಸ್, ಬಾಯ್ಲರ್ ಯಂತ್ರ, ಮೆಕಾನಿಕಲ್ ವಸ್ತು, ಎಣ್ಣೆ ಬೀಜ ಕೂಡಾ ದುಬಾರಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕಣ್ಣು ಯಾಕೆ? ರಷ್ಯಾಗೆ ಯಾಕೆ ಯಾರ ಭಯವಿಲ್ಲ?

ukraine 4

ಕೇವಲ ರಷ್ಯಾ ಹಾಗೂ ಉಕ್ರೇನ್‍ನಿಂದ ಆಮದು ಆಗುವ ವಸ್ತುಗಳಿಗಷ್ಟೇ ಭಾರತದಲ್ಲಿ ಪೆಟ್ಟು ಬೀಳದೇ ರಫ್ತಿನಿಂದಲೂ ನಷ್ಟವಾಗುವ ಸಾಧ್ಯತೆ ಇದೆ. ಭಾರತದಿಂದ ಉಕ್ರೇನ್‍ಗೆ ರಫ್ತಾಗುವ ವಸ್ತುಗಳ ಪೈಕಿ ಸಿಂಹಭಾಗ ಔಷಧಿಗಳದ್ದಾಗಿದೆ. ಮೌಲ್ಯದ ಲೆಕ್ಕದಲ್ಲಿ ಉಕ್ರೇನ್‍ಗೆ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಅತೀದೊಡ್ಡ ದೇಶವಾಗಿದೆ.

ಹಣ್ಣು, ಕಾಫಿ, ಟೀ ಪುಡಿ ಉದ್ಯಮಕ್ಕೂ ಯುದ್ಧದಿಂದ ಹೊಡೆತ ಬೀಳಲಿದ್ದು, ಇವುಗಳ್ನು ಉಕ್ರೇನ್‍ಗೆ ಭಾರತ ರಫ್ತು ಮಾಡುತ್ತದೆ.

TAGGED:indiaLossprice riserussiaStock MarketUkraineಉಕ್ರೇನ್ನಷ್ಟಬೆಲೆ ಏರಿಕೆಭಾರತರಷ್ಯಾಷೇರು ಮಾರುಕಟ್ಟೆ
Share This Article
Facebook Whatsapp Whatsapp Telegram

Cinema news

Captains room locked Will Sudeep give Gilli a severe punishment
ಕ್ಯಾಪ್ಟನ್ ರೂಂಗೆ ಬೀಗ; ಗಿಲ್ಲಿಗೆ ಸುದೀಪ್ ನೀಡ್ತಾರಾ ಕಠಿಣ ಶಿಕ್ಷೆ?
Latest Sandalwood South cinema
time fix for the kiccha sudeep mark movie trailer
ಕಿಚ್ಚನ ಮಾರ್ಕ್ ಸಿನಿಮಾ ಟ್ರೈಲರ್‌ಗೆ ಟೈಮ್ ಫಿಕ್ಸ್
Cinema Latest Sandalwood South cinema Top Stories
Shivarajkumar
‌ `ಗುಮ್ಮಡಿ ನರಸಯ್ಯ’ ಬಯೋಪಿಕ್ ಚಿತ್ರಕ್ಕೆ ಮುಹೂರ್ತ
Cinema Latest South cinema Top Stories
Kantara star Rishab Shetty and Hombale Films fulfills the promise Bhoota Kola seeks blessings of Panjurli Daiva 2
ದೈವದ ಅಭಯ: ರಿಷಬ್ ಟೀಮ್‌ನಲ್ಲಿ ಸಂಚಲನ
Dakshina Kannada Latest South cinema Top Stories

You Might Also Like

IndiGo CEO Pieter Elbers
Latest

ಇಂಡಿಗೋ ಏರ್‌ಲೈನ್ಸ್‌ಗೆ ಶೋಕಾಸ್‌ ನೋಟಿಸ್‌ ಜಾರಿ; 24 ಗಂಟೆಯಲ್ಲಿ ಉತ್ತರಿಸುವಂತೆ ಸೂಚನೆ

Public TV
By Public TV
6 hours ago
AICC MALLIKARJUN KHARGE SONIA GANDHI RAHUL GANDHI
Latest

ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಫೈಟ್ – ಕುರ್ಚಿ ಕಲಹಕ್ಕೆ ಸಿಗದ ಹೈಕಮಾಂಡ್ ಮುಲಾಮು

Public TV
By Public TV
7 hours ago
team india 1
Cricket

3rd ODI: ಜೈಸ್ವಾಲ್‌ ಶತಕ, ರೋ-ಕೊ ಆಕರ್ಷಕ ಫಿಫ್ಟಿ – ಆಫ್ರಿಕಾ ವಿರುದ್ಧ 9 ವಿಕೆಟ್‌ಗಳ ಜಯ; ಸರಣಿ ಭಾರತ ಕೈವಶ

Public TV
By Public TV
7 hours ago
KN RAJANNA
Districts

ಡಿಕೆಶಿ ಸಚಿವ ಸಂಪುಟದಲ್ಲಿ ನಾನು ಮಂತ್ರಿಯಾಗಲ್ಲ: ಕೆಎನ್ ರಾಜಣ್ಣ

Public TV
By Public TV
8 hours ago
kea
Bengaluru City

KSET: ಡಿ.10ರಿಂದ 12ರವರೆಗೆ ದಾಖಲೆ ಪರಿಶೀಲನೆ-ಕೆಇಎ

Public TV
By Public TV
9 hours ago
kea
Bengaluru City

ಯುಜಿ ವೈದ್ಯಕೀಯ: 3ನೇ ಸುತ್ತಿನ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ-ಕೆಇಎ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?