Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರುದ್ರ ಗರುಡ ಪುರಾಣ: ಶಿವರಾಜ್ ಕೆ.ಆರ್ ಪೇಟೆಗೆ ಸಿಕ್ಕಿದ್ದು ಬೇರೆಯದ್ದೇ ಪಾತ್ರ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ರುದ್ರ ಗರುಡ ಪುರಾಣ: ಶಿವರಾಜ್ ಕೆ.ಆರ್ ಪೇಟೆಗೆ ಸಿಕ್ಕಿದ್ದು ಬೇರೆಯದ್ದೇ ಪಾತ್ರ!

Cinema

ರುದ್ರ ಗರುಡ ಪುರಾಣ: ಶಿವರಾಜ್ ಕೆ.ಆರ್ ಪೇಟೆಗೆ ಸಿಕ್ಕಿದ್ದು ಬೇರೆಯದ್ದೇ ಪಾತ್ರ!

Public TV
Last updated: January 22, 2025 11:37 pm
Public TV
Share
3 Min Read
Shivaraj K R Pete
SHARE

ಓರ್ವ ನಟ ಒಂದು ಬಗೆಯಲ್ಲಿ ಸದ್ದು ಮಾಡಿದರೆ, ಆತನಿಗಾಗಿ ಅಂಥಾದ್ದೇ ಪಾತ್ರ ಸೃಷ್ಟಿಸಿ ಸೀಮಿತ ಚೌಕಟ್ಟಿನಲ್ಲಿ ಕಟ್ಟಿ ಹಾಕುವ ಪ್ರಯತ್ನ ನಡೆಯೋದೇ ಹೆಚ್ಚು. ಕನ್ನಡದಲ್ಲಿಯೂ ಕೂಡಾ ಅಂಥಾ ಒಂದಷ್ಟು ಉದಾಹರಣೆಗಳಿದ್ದಾವೆ. ಇದೆಲ್ಲದರಾಚೆಗೆ ಪ್ರತೀ ಕಲಾವಿದರೊಳಗೂ ಸಿನಿಮಾದಿಂದ ಸಿನಿಮಾಕ್ಕೆ ಚಹರೆ ಬದಲಿಸುವ, ಬೇರೆ ಬೇರೆ ಪಾತ್ರಗಳಿಗೆ ಒಡ್ಡಿಕೊಳ್ಳುವ ತುಡಿತವಿರುತ್ತದೆ. ಅದನ್ನು ನಿರ್ದೇಶಕರಾದವರು ಅರ್ಥ ಮಾಡಿಕೊಂಡುಬಿಟ್ಟರೆ ಪ್ರೇಕ್ಷಕರ ಪಾಲಿಗೆ ಅಚ್ಚರಿ ನಿಕ್ಕಿ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ರುದ್ರ ಗರುಡ ಪುರಾಣ ಚಿತ್ರದ ನಿರ್ದೇಶಕ ನಂದೀಶ್ ಅಂಥಾದ್ದೊಂದು ಸೂಕ್ಷ್ಮ ನಡೆ ಅನುಸರಿಸಿದ್ದಾರೆ. ಅದರ ಫಲವಾಗಿಯೇ ಹಾಸ್ಯ ಪಾತ್ರಗಳಿಗೆ ಬ್ರ್ಯಾಂಡ್ ಆಗಿರುವ ಶಿವರಾಜ್ ಕೆ.ಆರ್ ಪೇಟೆ ಹೊಸ ಬಗೆಯ ಪಾತ್ರವೊಂದರಲ್ಲಿ ಪ್ರೇಕ್ಷಕರನ್ನು ಬೆರಗಾಗಿಸಲಿದ್ದಾರೆ!

ಶಿವರಾಜ್ ಕೆ.ಆರ್. ಪೇಟೆ (Shivaraj K R Pete) ಬಹುಮುಖ ಪ್ರತಿಭೆ. ಆದರೆ, ಅವರೊಳಗಿನ ನಟ ಹೊರಜಗತ್ತನ್ನು ಆವರಿಸಿಕೊಂಡಿದ್ದದ್ದು ಕಾಮಿಡಿ ಕಿಲಾಡಿಗಳು ಶೋ ಮೂಲಕ. ಆ ನಂತರದಲ್ಲಿ ತಮ್ಮಿಚ್ಚೆಯಂತೆಯೇ ಚಿತ್ರರಂಗಕ್ಕೆ ಆಗಮಿಸಿದ್ದ ಅವರಿಗೆ ಸಾಲು ಸಾಲು ಅವಕಾಶಗಳು ಸಿಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಅವರು ಹಾಸ್ಯದಾಚೆಯ ಪಾತ್ರಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ರುದ್ರ ಗರುಡ ಪುರಾಣದಲ್ಲಿಯೂ (Rudra Garuda Purana) ಅಂಥಾದ್ದೇ ಒಂದು ಮಹತ್ವದ ಪಾತ್ರ ಸಿಕ್ಕ ಖುಷಿ ಶಿವರಾಜ್ ಅವರಲ್ಲಿದೆ. ಈ ಪಾತ್ರದ ಗುಣ ಲಕ್ಷಣಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆದರೆ, ಶಿವರಾಜ್ ಇಲ್ಲಿ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದಾರೆಂಬ ಸಣ್ಣ ಸುಳಿವನ್ನಷ್ಟೇ ಜಾಹೀರು ಮಾಡಲಾಗಿದೆ. ಇದನ್ನೂ ಓದಿ: ನಿರ್ಮಾಪಕರ ಕಣ್ಣಲ್ಲಿ ಮಿನುಗಿದ ರುದ್ರ ಗರುಡ ಪುರಾಣ!

rudra garuda purana 1

ಶಿವರಾಜ್ ಕೆ.ಆರ್ ಪೇಟೆ ಬಣ್ಣದ ಲೋಕದತ್ತ ಬೆರಗಿಟ್ಟುಕೊಂಡು ಬೆಂಗಳೂರು ತಲುಪಿದ ಆರಂಭದಲ್ಲಿ ಜೊತೆಯಾಗಿದ್ದವರು ನಂದೀಶ್. ಅಂದಿನಿಂದ ಇಂದಿನವರೆಗೂ ಜೊತೆಯಾಗಿರೋ ನಂದೀಶ್ ಅವರಿಗೆ ತನ್ನ ಗೆಳೆಯನ ನಟನೆಯ ತಾಕತ್ತಿನ ಸ್ಪಷ್ಟ ಪರಿಚಯವಿತ್ತು. ಈ ಕಾರಣದಿಂದಲೇ ಅವರನ್ನು ಗಂಭೀರವಾದ, ಅತ್ಯಂತ ಮಹತ್ವದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ತರಲು ಪ್ರಯತ್ನಿಸಿದ್ದಾರೆ. ಬಹುಶಃ ರುದ್ರ ಗರುಡ ಪುರಾಣದಲ್ಲಿನ ಶಿವರಾಜ್ ಕೆ.ಆರ್ ಪೇಟೆ ಗೆಟಪ್ಪು ಕಂಡು ಎಲ್ಲರೂ ಅಚ್ಚರಿಗೀಡಾಗೋದು ಖಾತರಿ. ಇದು ತನ್ನ ಇಷ್ಟೂ ವರ್ಷಗಳ ವೃತ್ತಿ ಬದುಕಿನಲ್ಲಿ ಬೇರೆಯದ್ದೇ ಖದರ್ ಹೊಂದಿರೋ ಪಾತ್ರವೆಂಬ ಖುಷಿಯೂ ಅವರಲ್ಲಿದೆ.

ಸದಾ ಭಿನ್ನ ದಿಕ್ಕಿನಲ್ಲಿ ಆಲೋಚಿಸುತ್ತಾ, ಹೊಸಾ ಬಗೆಯ ಕಥೆ ಮುಟ್ಟುವ ಗುಣದವರು ನಂದೀಶ್. ಓರ್ವ ಜೊತೆಗಾರನಾಗಿ ನಂದೀಶ್ ಅವರ ಪ್ರತಿಭೆಯ ಅರಿವಿರುವ ಶಿವರಾಜ್ ಕೆ.ಆರ್ ಪೇಟೆ ಅವರಿಗೆ ಗೆಳೆಯನ ಚಿತ್ರದಲ್ಲಿ ಭಿನ್ನ ಪಾತ್ರವಾದ ಖುಷಿಯಿದೆ. ಈ ಹಿಂದೆ ದರ್ಶನ್ ನಟಿಸಿದ್ದ ರಾಬರ್ಟ್ ಚಿತ್ರದಲ್ಲಿಯೂ ಬೇರೆ ತೆರನಾದ ಪಾತ್ರ ಶಿವರಾಜ್ ಅವರಿಗೆ ಸಿಕ್ಕಿತ್ತು. ನಾನು ಮತ್ತು ಗುಂಡ ಚಿತ್ರದಲ್ಲಿಯೂ ಹಾಸ್ಯದ ಪರಿಧಿಯಾಚೆಗಿನ ಭಾವನಾತ್ಮಕ ಪಾತ್ರವಾಗಿ ಅವರು ಕಾಣಿಸಿಕೊಂಡಿದ್ದರು. ರುದ್ರ ಗರುಡ ಪುರಾಣದಲ್ಲಿಯಂತೂ ಎಲ್ಲರಿಗೂ ಆಶ್ಚರ್ಯವಾಗಬಲ್ಲ ಪಾತ್ರದಲ್ಲಿ, ಗೆಟಪ್ಪಿನಲ್ಲಿ ಶಿವರಾಜ್ ಕೆ.ಆರ್ ಪೇಟೆ ದರ್ಶನವಾಗಲಿರೋದು ಪಕ್ಕಾ! ಇದನ್ನೂ ಓದಿ: ರುದ್ರ ಗರುಡ ಪುರಾಣ; ಭಿನ್ನ ಕಥೆಯ ಚುಂಗು ಹಿಡಿದು ಬಂದ್ರು ನಂದೀಶ್!

ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ್ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ರುದ್ರ ಗರುಡ ಪುರಾಣ ಎಲ್ಲ ವರ್ಗಗಳ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಹಾರರ್ ಸಿನಿಮಾಗಳಿಗಾಗಿ ಹಾತೊರೆಯುವ ದೊಡ್ಡ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಹಾಗಿರುವಾಗ ಹೊಸತನದೊಂದಿಗೆ ರೂಪುಗೊಂಡಿರುವ, ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದ ಬಗ್ಗೆ ಕುತೂಹಲ ಸಹಜವಾಗಿಯೇ ಮೂಡಿಕೊಳ್ಳುತ್ತೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರುದ್ರ ಗರುಡ ಪುರಾಣ ಜನವರಿ 24 ರಂದು ಬಿಡುಗಡೆಗೊಳ್ಳಲಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!

TAGGED:Rudra Garuda Puranashivaraj k.r peteರುದ್ರ ಗರುಡ ಪುರಾಣಶಿವರಾಜ್ ಕೆ.ಆರ್ ಪೇಟೆ
Share This Article
Facebook Whatsapp Whatsapp Telegram

Cinema news

Captains room locked Will Sudeep give Gilli a severe punishment
ಕ್ಯಾಪ್ಟನ್ ರೂಂಗೆ ಬೀಗ; ಗಿಲ್ಲಿಗೆ ಸುದೀಪ್ ನೀಡ್ತಾರಾ ಕಠಿಣ ಶಿಕ್ಷೆ?
Latest Sandalwood South cinema
time fix for the kiccha sudeep mark movie trailer
ಕಿಚ್ಚನ ಮಾರ್ಕ್ ಸಿನಿಮಾ ಟ್ರೈಲರ್‌ಗೆ ಟೈಮ್ ಫಿಕ್ಸ್
Cinema Latest Sandalwood South cinema Top Stories
Shivarajkumar
‌ `ಗುಮ್ಮಡಿ ನರಸಯ್ಯ’ ಬಯೋಪಿಕ್ ಚಿತ್ರಕ್ಕೆ ಮುಹೂರ್ತ
Cinema Latest South cinema Top Stories
Kantara star Rishab Shetty and Hombale Films fulfills the promise Bhoota Kola seeks blessings of Panjurli Daiva 2
ದೈವದ ಅಭಯ: ರಿಷಬ್ ಟೀಮ್‌ನಲ್ಲಿ ಸಂಚಲನ
Dakshina Kannada Latest South cinema Top Stories

You Might Also Like

Goa Fire Accident 1
Latest

ಗೋವಾ ನೈಟ್ ಕ್ಲಬ್‌ ಅಗ್ನಿ ದುರಂತ – ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ

Public TV
By Public TV
15 minutes ago
Rohit Sharma
Cricket

20,000 ರನ್‌ – ದಿಗ್ಗಜರ ಎಲೈಟ್‌ ಲಿಸ್ಟ್‌ ಸೇರಿದ ರೋಹಿತ್‌; ಈ ಸಾಧನೆ ಮಾಡಿದ 4ನೇ ಭಾರತೀಯ

Public TV
By Public TV
16 minutes ago
Bengaluru City Police 1
Bengaluru City

ಹೊಸ ವರ್ಷದ ಹಿನ್ನೆಲೆ ಬೆಂಗಳೂರು ಪೊಲೀಸರು ಅಲರ್ಟ್‌ – ಬಾಂಬ್ ಸ್ಕ್ವಾಡ್‌ ಸಿಬ್ಬಂದಿಗೆ ವಿಶೇಷ ತರಬೇತಿ

Public TV
By Public TV
46 minutes ago
Indian Railways rajdhani express
Bengaluru City

ಇಂಡಿಗೋ ಅಡಚಣೆ – ಪ್ರಯಾಣಿಕರ ಪರದಾಟ ತಪ್ಪಿಸಲು 89 ವಿಶೇಷ ರೈಲು ನಿಯೋಜನೆ

Public TV
By Public TV
1 hour ago
Indigo
Bengaluru City

ದೇಶಾದ್ಯಂತ 6ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಸಮಸ್ಯೆ – ಬೆಂಗಳೂರಲ್ಲಿ 50ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

Public TV
By Public TV
1 hour ago
Goa Fire
Latest

ಗೋವಾ ನೈಟ್‌ ಕ್ಲಬ್‌ನಲ್ಲಿ ಅಗ್ನಿ ದುರಂತ – 23 ಪ್ರವಾಸಿಗರು ಸಜೀವ ದಹನ; ಸಿಲಿಂಡರ್‌ ಸ್ಫೋಟ ಶಂಕೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?