ಪಾಟ್ನಾ: ಆರ್ಎಸ್ಎಸ್ (RSS) ನಿಜವಾದ ಕಾಫಿ. ಬಿಜೆಪಿ (BJP) ಕಾಫಿಯ ನೊರೆ ಇದ್ದಂತೆ ಎಂದು ರಾಜಕೀಯ ತಂತ್ರಜ್ಞ, ಕಾರ್ಯಕರ್ತ ಪ್ರಶಾಂತ್ ಕಿಶೋರ್ (Prashant Kishor) ಹೇಳಿಕೆ ನೀಡಿದ್ದಾರೆ.
ಬಿಹಾರದಲ್ಲಿ (Bihar) 3,500 ಕಿಲೋಮೀಟರ್ವರೆಗೆ ಕಿಶೋರ್ ಪಾದಯಾತ್ರೆ ಕೈಗೊಂಡಿದ್ದಾರೆ. ಅಕ್ಟೋಬರ್ 2 ರಿಂದ ಕಾಲ್ನಡಿಗೆ ಆರಂಭಿಸಿದ್ದಾರೆ. ಪಾದಯಾತ್ರೆ ವೇಳೆ ಮಾತನಾಡಿದ ಅವರು, ಗಾಂಧಿಯವರ ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸುವ ಮೂಲಕ ಮಾತ್ರ ಗೋಡ್ಸೆಯ ಸಿದ್ಧಾಂತವನ್ನು ಸೋಲಿಸಬಹುದು. ನಿತೀಶ್ ಕುಮಾರ್ ಮತ್ತು ಜಗನ್ ಮೋಹನ್ ಅವರಂತಹವರಿಗೆ ಸಹಾಯ ಮಾಡುವ ಬದಲು ನಾನು ಆ ದಿಕ್ಕಿನಲ್ಲಿ ಕೆಲಸ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಶಿವ ಭಕ್ತ: ಅಶೋಕ್ ಗೆಹ್ಲೋಟ್
ನೀವು ಎಂದಾದರೂ ಒಂದು ಲೋಟದಲ್ಲಿ ಕಾಫಿಯನ್ನು ನೋಡಿದ್ದೀರಾ? ಮೇಲ್ಭಾಗದಲ್ಲಿರುವ ನೊರೆಯೇ ಬಿಜೆಪಿ. ಅದರ ಕೆಳಗೆ ಆರ್ಎಸ್ಎಸ್ನ ಆಳವಾದ ರಚನೆ ಇದೆ. ಸಂಘವು ಸಾಮಾಜಿಕ ರಚನೆಯಲ್ಲಿ ತನ್ನ ದಾರಿಯನ್ನು ಹುಟ್ಟುಹಾಕಿದೆ. ಅದನ್ನು ಈಗ ಸೋಲಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಸಿಎಎ, ಎನ್ಪಿಆರ್, ಎನ್ಆರ್ಸಿ ವಿರುದ್ಧ ರಾಷ್ಟ್ರವು ಕಿಡಿಕಾರಿದ್ದಾಗ ನಾನು ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷನಾಗಿದ್ದೆ. ನನ್ನ ಪಕ್ಷದ ಸಂಸದರು ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ತಿಳಿದು ದಿಗ್ಭ್ರಮೆಗೊಂಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್ರನ್ನು ಪ್ರಶಂಸಿಸಿದ ಮೋದಿ