ಕೆಲಸಕ್ಕೆ ಬರಲಿಲ್ಲ ಅಂತಾ ಡ್ರೈವರ್ ಮೇಲೆ ಹಲ್ಲೆ- ಸಾರಾ ಗೋವಿಂದು ಪುತ್ರನಿಂದ ಗೂಂಡಾಗಿರಿ

Public TV
1 Min Read
SARA GOVIND copy

ಬೆಂಗಳೂರು: ಚಲನಚಿತ್ರ ನಿರ್ಮಾಪಕ ಸಾರಾ ಗೋವಿಂದು ಪುತ್ರನಿಂದ ಗೂಂಡಾಗಿರಿ ನಡೆದಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು. ಸಾರಾ ಗೋವಿಂದು ಅವರ ಪುತ್ರ ಅನೂಪ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಅನೂಪ್ ಸಾರಾ ಗೋವಿಂದು ಮನೆಯ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಸಂಬಳ ನೀಡದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದ್ದಕ್ಕೆ ಈ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

sara 2

ಹರೀಶ್‍ರನ್ನು ಬಸವೇಶ್ವರನಗರಕ್ಕೆ ಕರೆಸಿಕೊಂಡು ಫರಿಸ್ತಾ ಕೆಫೆ ಮುಂಭಾಗದಲ್ಲಿ ಅನೂಪ್ ಸೇರಿ ಜೊತೆಯಿದ್ದ ಫ್ರಭಾಕರ್ ಮತ್ತು ಸತ್ಯ ಎಂಬವರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಹೊರಗಡೆ ಈ ವಿಚಾರ ಗೊತ್ತಾದ್ರೆ ಕೊಲೆ ಮಾಡೋದಾಗಿ ಕೂಡ ಗ್ಯಾಂಗ್ ಬೆದರಿಕೆ ಹಾಕಿದೆ ಅಂತ ಹಲ್ಲೆಗೊಳಗಾದ ಹರೀಶ್ ಹೇಳಿದ್ದಾರೆ.

ಘಟನೆಯಿಂದ ಕಿವಿ ಕೇಳದ ಸ್ಥಿತಿಯಲ್ಲಿದ್ದ ಹರೀಶ್ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೂಪ್ ಡವ್, ಮಿಸ್ಟರ್ ಫರ್ಫೆಕ್ಟ್, ಸಾಗುವ ದಾರಿಯಲ್ಲಿ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

sara

ಘಟನೆ ಸಂಬಂಧ ಅನೂಪ್ ಅಂಡ್ ಗ್ಯಾಂಗ್ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *