Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕರ್ನಾಟಕ ದೇವಾಲಯಗಳ ಮಸೂದೆ ವಿವಾದ; ‘ಕೈ’ ಸರ್ಕಾರದ ಪ್ರಸ್ತಾವನೆಯಲ್ಲೇನಿದೆ? – ಬೇರೆ ರಾಜ್ಯಗಳಲ್ಲಿ ಆದಾಯ ನಿರ್ವಹಣೆ ಹೇಗೆ?

Public TV
Last updated: March 5, 2024 8:25 pm
Public TV
Share
6 Min Read
karnataka hindu temple bill
SHARE

ಕರ್ನಾಟಕದ ದೇವಾಲಯಗಳ (Karnataka Temple Bill) ವಿಚಾರ ಈಗ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಂತೆ, ಹಿಂದೂ ದೇವಾಲಯಗಳ ತೆರಿಗೆಯನ್ನು ನಿಯಂತ್ರಿಸುವ ಕಾನೂನು ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿತು. ಆದರೆ ಪರಿಷತ್‌ನಲ್ಲಿ ಬಿಜೆಪಿ ವಿರೋಧದಿಂದಾಗಿ ಬಹುಮತವಿಲ್ಲದೇ ಮಸೂದೆ ತಿರಸ್ಕೃತಗೊಂಡಿತು. ಹಿಂದೂಪರ ಸಂಘಟನೆಗಳೂ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಈಗ ದೇವಾಲಯಗಳ ಮಸೂದೆ ರಾಜ್ಯಪಾಲರ ಅಂಗಳದಲ್ಲಿದೆ. ಮಸೂದೆಗೆ ಅಂಕಿತ ಬೀಳುತ್ತೋ, ಇಲ್ಲವೋ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಸದಾ ಅಹಿಂದ ಪರಿಕಲ್ಪನೆಯನ್ನು ಪ್ರತಿಪಾದಿಸುವ ಕಾಂಗ್ರೆಸ್ (Congress) ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024’ ಅನ್ನು ರಾಜ್ಯದಲ್ಲಿ ಜಾರಿಗೆ ತರಲು ಹೊರಟಿದೆ. ಆದರೆ ಇದಕ್ಕೆ ಬಿಜೆಪಿ (BJP) ಸೇರಿದಂತೆ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕುತೂಹಲವೆಂದರೆ, ದೇವಾಲಯಗಳ ಕೆಲ ಅರ್ಚಕರ ಸಂಘಟನೆಗಳು ಮಸೂದೆ ಪರವಾಗಿ ಮಾತನಾಡಿವೆ. ಅಷ್ಟಕ್ಕೂ ಏನಿದು ತಿದ್ದುಪಡಿ ಮಸೂದೆ? ಇದರಲ್ಲಿ ಏನಿದೆ? ವಿರೋಧದ ಮಾತೇಕೆ? ದೇವಾಲಯಗಳ ಆದಾಯವನ್ನು ಬೇರೆ ರಾಜ್ಯಗಳಲ್ಲಿ ಹೇಗೆ ನಿರ್ವಹಿಸಲಾಗುತ್ತಿದೆ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಇದನ್ನೂ ಓದಿ: ದೇವಾಲಯದ ಹಣ ಸರ್ಕಾರದ ಒಳ್ಳೆಯ ಕೆಲಸಕ್ಕೆ ಉಪಯೋಗವಾಗುತ್ತಿದೆ: ಬಿಜೆಪಿ ವಿರುದ್ಧ ಅರ್ಚಕರ ಸಂಘ ಕಿಡಿ

karnataka temple bill 1

ರಾಜ್ಯದಲ್ಲಿ ಹಿಂದೂ ದೇವಾಲಯಗಳ ನೀತಿ ಏನು?
ರಾಜ್ಯದಲ್ಲಿ ಹಿಂದೂ ದೇವಾಲಯಗಳ ಕುರಿತಾದ ನೀತಿ-ನಿಯಮಗಳನ್ನು ರೂಪಿಸಲು ಮುಜರಾಯಿ ಇಲಾಖೆ ಇದೆ. ಹಿಂದೂ ದೇವಾಲಯಗಳನ್ನು ಒಂದು ನೀತಿ ನಿರೂಪಣೆಯೊಳಗಡೆ ತರುವ ಕೆಲಸವನ್ನು ಸರ್ಕಾರ ಬಹಳ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಅಷ್ಟೇ ಅಲ್ಲ, ಮುಸ್ಲಿಂ ಧಾರ್ಮಿಕ ಸಂಸ್ಥೆಗಳಿಗೂ ಸಹ ನೀತಿ-ನಿಯಮ ರೂಪಿಸುವುದಕ್ಕೆ ವಕ್ಫ್ ಬೋರ್ಡ್ ಇಲಾಖೆ ಕೂಡ ಇದೆ ಎಂಬುದು ಗಮನಿಸಬೇಕಾದ ಅಂಶ.

ಹಿಂದೂ ಧರ್ಮಾದಾಯ ದತ್ತಿ ಕಾಯ್ದೆ-1997 ಜಾರಿಗೆ ಬಂದಿದ್ಯಾವಾಗ?
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ-1997 (Karnataka Hindu Religious Institutions and Charitable Endowments Act), 2002 ರ ಮೇ 1 ರಂದು ಜಾರಿಗೆ ಬಂದಿತು. ಈ ಕಾಯಿದೆಯ ಸೆಕ್ಷನ್ 17 ರ ಅಡಿಯಲ್ಲಿ ಕಾಮನ್ ಪೂಲ್ ಫಂಡ್‌ಗೆ ನಿಬಂಧನೆಗಳನ್ನು ಮಾಡಲಾಗಿದೆ. ಇದನ್ನೂ ಓದಿ: ರಾಮನ ಮನೆಯ ತೆರಿಗೆ ರಹೀಮನ ಮನೆಗೆ: ಶಾಸಕ ಚನ್ನಬಸಪ್ಪ

ಏನಿದು ಕಾಮನ್ ಕೂಲ್ ಫಂಡ್?
ಹೆಚ್ಚಿನ ಆದಾಯದ ದೇವಾಲಯಗಳಿಂದ ಸಂಗ್ರಹಿಸಿಡಲು ಕಾಮನ್ ಪೂಲ್ ಫಂಡ್‌ನ್ನು ರಚಿಸಲಾಯಿತು. 1997 ರ ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ 2011 ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಕಾಮನ್ ಪೂಲ್ ಫಂಡನ್ನು ರಚಿಸಿತು.

ಕಾಂಗ್ರೆಸ್ ಸರ್ಕಾರದ ತಿದ್ದುಪಡಿ ಮಸೂದೆಯಲ್ಲೇನಿದೆ?
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ-1997 ರ ಬಹುನಿಬಂಧನೆಗಳನ್ನು ತಿದ್ದುಪಡಿ ಮಾಡಿದ ಮಸೂದೆ ಜಾರಿಗೆ ಸರ್ಕಾರ ಮುಂದಾಗಿದೆ. ವಾರ್ಷಿಕ 1 ಕೋಟಿ ರೂ. ಆದಾಯ ಮೀರುವ ಹಿಂದೂ ದೇವಾಲಯಗಳು ತಮ್ಮ ಈ ಆದಾಯದ ಶೇ. 10 ರಷ್ಟನ್ನು ಸರ್ಕಾರಕ್ಕೆ ಕೊಡಬೇಕು. 10 ಲಕ್ಷ ರೂ.ನಿಂದ 1 ಕೋಟಿ ರೂ. ಒಳಗಿನ ಆದಾಯ ಹೊಂದಿರುವ ದೇಗುಲಗಳು ಶೇ. 5 ರಷ್ಟನ್ನು ಸರ್ಕಾರಕ್ಕೆ ನೀಡಬೇಕು ಎಂಬುದು ತಿದ್ದುಪಡಿ ವಿಧೇಯಕದ ಮುಖ್ಯಾಂಶ.

karnataka temple bill 2

ಸರ್ಕಾರ ಹೇಳೋದೇನು?
ವರ್ಷಕ್ಕೆ 1 ಕೋಟಿ ರೂ.ಗೂ ಅಧಿಕ ಆದಾಯ ಹೊಂದಿರುವ ದೇವಸ್ಥಾನಗಳ ಒಟ್ಟು ನಿವ್ವಳ ಆದಾಯದಲ್ಲಿ ಶೇ. 10 ರಷ್ಟನ್ನು ‘ಸಿ’ ದರ್ಜೆಯ ದೇವಸ್ಥಾನಗಳ ನಿರ್ವಹಣೆಗೆ ವಿನಿಯೋಗಿಸುವುದು ಮಸೂದೆಯ ಉದ್ದೇಶವಾಗಿದೆ. ದೇಗುಲಗಳು ಹಲವು ಧರ್ಮೀಯರ ಶ್ರದ್ಧಾಸ್ಥಾನಗಳಾಗಿದ್ದರೆ ಹಿಂದೂ ಮತ್ತು ಇತರ ಧರ್ಮಗಳಿಂದಲೂ ಸದಸ್ಯರ ನೇಮಕಕ್ಕೆ ಅವಕಾಶ ಕಲ್ಪಿಸುವುದು. ಹೆಚ್ಚಿನ ಆದಾಯ ಹೊಂದಿರುವ ದೇವಾಲಯಗಳಿಂದ ಸಂಗ್ರಹಿಸುವ ತೆರಿಗೆಯನ್ನು ‘ಕಾಮನ್ ಪೂಲ್ ಫಂಡ್’ಗೆ ಹಾಕಲು ಪ್ರಸ್ತಾಪಿಸಲಾಗಿದೆ. ಇದು ‘ರಾಜ್ಯ ಧಾರ್ಮಿಕ ಪರಿಷತ್’ನಿಂದ ನಿರ್ವಹಿಸಲ್ಪಡುತ್ತದೆ. ಇದು ಅರ್ಚಕರ (ಪುರೋಹಿತರ) ಕಲ್ಯಾಣ ಮತ್ತು ಸಿ ವರ್ಗದ ದೇವಾಲಯಗಳ ಪಾಲನೆಗಾಗಿ ಬಳಸಲು ಸರ್ಕಾರ ಉದ್ದೇಶಿಸಿದೆ.

ಸರ್ಕಾರದ ಉದ್ದೇಶವೇನು?
ಈಗಿನ ತಿದ್ದುಪಡಿಗಳನ್ನು ಅಂಗೀಕರಿಸಿದ್ದರೆ, 1 ಕೋಟಿಗಿಂತ ಹೆಚ್ಚು ಆದಾಯವಿರುವ 87 ದೇವಸ್ಥಾನಗಳು ಮತ್ತು 10 ಲಕ್ಷಕ್ಕಿಂತ ಹೆಚ್ಚು ಆದಾಯವಿರುವ 311 ದೇವಸ್ಥಾನಗಳಿಂದ ಹೆಚ್ಚುವರಿ 60 ಕೋಟಿ ರೂ. ಆದಾಯ ಹರಿದುಬರುತ್ತಿತ್ತು. ಕಾಯಿದೆಯ 19 ನೇ ವಿಭಾಗವು ಧಾರ್ಮಿಕ ಅಧ್ಯಯನಗಳು ಮತ್ತು ಪ್ರಚಾರ, ದೇವಾಲಯದ ನಿರ್ವಹಣೆ ಮತ್ತು ಇತರ ದತ್ತಿ ಕಾರಣಗಳನ್ನು ಒಳಗೊಂಡಂತೆ ‘ಕಾಮನ್ ಪೂಲ್ ಫಂಡ್’ನ್ನು ಯಾವ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು ಎಂಬುದನ್ನು ಪಟ್ಟಿ ಮಾಡುತ್ತದೆ. ಹೀಗಾಗಿ, ವರ್ಧಿತ ಹಣವನ್ನು ಕಡಿಮೆ ಆದಾಯದ ದೇವಾಲಯಗಳಿಗೆ ಸಹಾಯ ಮಾಡಲು, ಅನಾರೋಗ್ಯ ಪೀಡಿತ ಅರ್ಚಕರಿಗೆ ಟರ್ಮಿನಲ್ ಪ್ರಯೋಜನಗಳನ್ನು ಒದಗಿಸಲು ಮತ್ತು ಅರ್ಚಕರ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಬಳಸಲಾಗುವುದು ಎಂದು ಕಾಂಗ್ರೆಸ್ ಸರ್ಕಾರದ ವಾದವಾಗಿದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಿಲ್‌ಗೆ ಪರಿಷತ್‌ನಲ್ಲಿ ಸೋಲು; ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ

ಬಿಜೆಪಿ ವಿರೋಧವೇಕೆ?
10 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವ ದೇವಾಲಯಗಳಿಂದ ನಿಧಿ ಸಂಗ್ರಹಿಸಲು ಸರ್ಕಾರ ಮುಂದಾಗಿದೆ. ಆಡಳಿತಾರೂಢ ಕಾಂಗ್ರೆಸ್ ತನ್ನ ಖಾಲಿ ಬೊಕ್ಕಸವನ್ನು ದೇವಾಲಯದ ಹಣದಿಂದ ತುಂಬಲು ಪ್ರಯತ್ನಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರ ದೇವಾಲಯಗಳನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿದೆ. ಹಿಂದೂ ದೇವಾಲಯಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಇತರ ಧರ್ಮದವರ ಆದಾಯದ ಬಗ್ಗೆ ಆಸಕ್ತಿ ಇಲ್ಲದ ಸರ್ಕಾರ ಹಿಂದೂ ದೇವಾಲಯಗಳ ಆದಾಯದ ಮೇಲೆ ಏಕೆ ಕಣ್ಣಿಟ್ಟಿದೆ ಎಂಬುದು ಕೋಟ್ಯಂತರ ಭಕ್ತರ ಪ್ರಶ್ನೆಯಾಗಿದೆ ಎಂದು ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

karnataka temple bill 3

ತಿದ್ದುಪಡಿ ಮಸೂದೆಯಲ್ಲಿ ಇನ್ನೇನು ಬದಲಾವಣೆಗಳಿವೆ?
ಸೆಕ್ಷನ್ 25 ರ ಅಡಿಯಲ್ಲಿ, ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳು ಒಂಬತ್ತು ಜನರನ್ನು ಒಳಗೊಂಡಿರುವ “ವ್ಯವಸ್ಥಾಪನಾ ಸಮಿತಿ”ಯನ್ನು ರಚಿಸುವ ಅಗತ್ಯವಿದೆ. ಇದರಲ್ಲಿ ಒಬ್ಬ ಅರ್ಚಕ, ಕನಿಷ್ಠ ಒಬ್ಬ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರು, ಇಬ್ಬರು ಮಹಿಳೆಯರು ಮತ್ತು ಧಾರ್ಮಿಕ ಸಂಸ್ಥೆ ಒಬ್ಬ ಸ್ಥಳೀಯ ವ್ಯಕ್ತಿ. ಉಳಿದ ನಾಲ್ಕು ಸದಸ್ಯರಲ್ಲಿ ಒಬ್ಬ ವ್ಯಕ್ತಿಯನ್ನು “ವಿಶ್ವಕರ್ಮ ಹಿಂದೂ ದೇವಾಲಯದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಲ್ಲಿ ನುರಿತ” ಸೇರಿಸಲು ಮಸೂದೆ ಪ್ರಸ್ತಾಪಿಸಿದೆ.

ಈ ಸಮಿತಿಗಳ ಅಧ್ಯಕ್ಷರನ್ನು ನೇಮಿಸುವ ಅಧಿಕಾರವನ್ನು ರಾಜ್ಯ ಧಾರ್ಮಿಕ ಪರಿಷತ್ತಿಗೂ ಮಸೂದೆ ನೀಡಿದೆ. ರಾಜ್ಯ ಧಾರ್ಮಿಕ ಪರಿಷತ್ತು, ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಒಂದು ಸಂಸ್ಥೆಯಾಗಿದ್ದು ಅದು ಧರ್ಮಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಧಿಕಾರವನ್ನು ಹೊಂದಿದೆ. ಹಿಂದೂ ಧರ್ಮದ ಜೊತೆಗೆ ಧಾರ್ಮಿಕ ಪೂಜೆಯನ್ನು ಅನುಮತಿಸುವ ಮೂಲಕ ಯಾವುದೇ ದೇವಾಲಯವು “ಸಂಯೋಜಿತ ಸಂಸ್ಥೆ” ಆಗಿರಲಿ, ಖಾಸಗಿ, ಸಾರ್ವಜನಿಕ ಅಥವಾ ಪಂಗಡದ್ದಾಗಿರಲಿ ಮತ್ತು ವ್ಯಕ್ತಿಯು ಧಾರ್ಮಿಕ ಸಂಸ್ಥೆಯ ಆನುವಂಶಿಕ ಟ್ರಸ್ಟಿಯಾಗಿರಲಿ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಆಚರಣೆಗಳು ಮತ್ತು ಪದ್ಧತಿಗಳ ಮೇಲಿನ ಧಾರ್ಮಿಕ ವಿವಾದಗಳನ್ನು ಒಳಗೊಂಡಿರುತ್ತದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತನ ಕೇಸನ್ನೇ ಮುಚ್ಚಿ ಹಾಕಿದ್ದರು: ಸಿಎಂ

ವಾರ್ಷಿಕವಾಗಿ 25 ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಗಳಿಸುವ ದೇವಾಲಯಗಳಿಗೆ ತೀರ್ಥಯಾತ್ರೆಗೆ ಅನುಕೂಲವಾಗುವಂತಹ ಮೂಲಸೌಕರ್ಯ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರವು ಜಿಲ್ಲಾ ಮಟ್ಟದ ಮತ್ತು ರಾಜ್ಯ ಉನ್ನತ ಮಟ್ಟದ ಸಮಿತಿಗಳನ್ನು ರಚಿಸುವ ಅಂಶವನ್ನೂ ಮಸೂದೆ ಒಳಗೊಂಡಿದೆ.

ಇತರೆ ರಾಜ್ಯಗಳಲ್ಲಿ ದೇವಾಲಯಗಳ ಆದಾಯ ನಿರ್ವಹಣೆ ಹೇಗೆ?
ದೇವಾಲಯಗಳ ಆದಾಯ ಸಂಗ್ರಹ ವಿಚಾರದಲ್ಲಿ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಕ್ಕೆ ಹೋಲಿಕೆ ಇದೆ. ತೆಲಂಗಾಣ ಚಾರಿಟಬಲ್ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ, 1987 ರ ಸೆಕ್ಷನ್ 70 ರ ಅಡಿಯಲ್ಲಿ, ಧಾರ್ಮಿಕ ಸಂಸ್ಥೆಗಳ ಆಡಳಿತದ ಉಸ್ತುವಾರಿ ಆಯುಕ್ತರು “ಕಾಮನ್ ಗುಡ್ ಫಂಡ್” ಅನ್ನು ರಚಿಸಬಹುದು.

ವಾರ್ಷಿಕವಾಗಿ 50,000 ರೂ.ಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ಧಾರ್ಮಿಕ ಸಂಸ್ಥೆಗಳು ತಮ್ಮ ವಾರ್ಷಿಕ ಆದಾಯದ 1.5% ಅನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ತೆಲಂಗಾಣ ಕಾಯಿದೆಯಡಿ ಸರ್ಕಾರವು ಮಾಡಿದ ವೆಚ್ಚಗಳಿಗೆ ಮರುಪಾವತಿ ಮಾಡಿದ ನಂತರ, ಆಯುಕ್ತರು ಉಳಿದ ಹಣವನ್ನು ಕಾಮನ್ ಗುಡ್ ಫಂಡ್‌ಗೆ ನಿರ್ದೇಶಿಸಬಹುದು. ಈ ಹಣವನ್ನು ದೇವಾಲಯಗಳ ನಿರ್ವಹಣೆ ಮತ್ತು ಜೀರ್ಣೋದ್ಧಾರಕ್ಕಾಗಿ, ವೇದ-ಪಾಠಶಾಲೆಗಳು (ಧಾರ್ಮಿಕ ಶಾಲೆಗಳು) ಮತ್ತು ಹೊಸ ದೇವಾಲಯಗಳ ಸ್ಥಾಪನೆಗೆ ಬಳಸಲಾಗುತ್ತದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ; ವಿತಂಡವಾದಿ ಕಾಂಗ್ರೆಸಿಗರಿಗೆ ತೀವ್ರ ಮುಖಭಂಗ: ಅಶ್ವಥ‌ ನಾರಾಯಣ್

ಕೇರಳ ಸರ್ಕಾರವು ವಿಭಿನ್ನವಾದ ವ್ಯವಸ್ಥೆಯನ್ನು ಒಳಗೊಂಡಿದೆ. ಅಲ್ಲಿ ದೇವಸ್ಥಾನಗಳನ್ನು ಸಾಮಾನ್ಯವಾಗಿ ರಾಜ್ಯ-ದೇವಸ್ವಂ (ದೇವಾಲಯ) ಮಂಡಳಿಗಳು ನಿರ್ವಹಿಸುತ್ತವೆ. ರಾಜ್ಯವು 3,000 ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ವಹಿಸುವ ಐದು ಸ್ವಾಯತ್ತ ದೇವಸ್ವಂ ಮಂಡಳಿಗಳನ್ನು ಹೊಂದಿದೆ. ಈ ಮಂಡಳಿಗಳನ್ನು ಆಡಳಿತಾರೂಢ ಸರ್ಕಾರದಿಂದ ನೇಮಕಗೊಂಡ ನಾಮನಿರ್ದೇಶಿತರು ನಡೆಸುತ್ತಾರೆ. ಸಾಮಾನ್ಯವಾಗಿ ನಾಮನಿರ್ದೇಶಿತರು ರಾಜಕಾರಣಿಗಳಾಗಿರುತ್ತಾರೆ.

ಪ್ರತಿ ದೇವಸ್ವಂ ಮಂಡಳಿಯು ರಾಜ್ಯ ಸರ್ಕಾರವು ನಿಗದಿಪಡಿಸಿದ ಬಜೆಟ್ ಅನ್ನು ಹೊಂದಿದೆ. ಆದಾಯದ ಅಂಕಿಅಂಶಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ. ರಾಜ್ಯವು ಪ್ರತಿ ದೇವಸ್ವಂ ಬೋರ್ಡ್‌ಗೆ ಪ್ರತ್ಯೇಕ ಕಾನೂನುಗಳನ್ನು ಜಾರಿಗೆ ತಂದಿದೆ (ತಿರುವಾಂಕೂರು ಮತ್ತು ಕೊಚ್ಚಿನ್ ಜೊತೆಗೆ ಅದೇ ಕಾಯಿದೆಯಿಂದ ನಿಯಂತ್ರಿಸಲ್ಪಡುತ್ತದೆ). ಇದು ಅವರ ಅಧೀನದಲ್ಲಿರುವ ದೇವಾಲಯಗಳ ಆಡಳಿತ ಮತ್ತು ನಿರ್ವಹಣೆಯೊಂದಿಗೆ ವ್ಯವಹರಿಸುತ್ತದೆ.

TAGGED:bjpcongressKarnataka Hindu Religious Institutions and Charitable Endowments ActKarnataka temple Bill
Share This Article
Facebook Whatsapp Whatsapp Telegram

Cinema Updates

Harshika Poonacha Bhuvan Ponnanna toured 3 countries with Tridevi 1
ತ್ರೀದೇವಿ ಜೊತೆ 3 ದೇಶ ಸುತ್ತಿದ ಹರ್ಷಿಕಾ, ಭುವನ್
Cinema Latest Sandalwood
Darshan Thailand
ಥಾಯ್ಲೆಂಡ್‌ನಿಂದ ದರ್ಶನ್ ವಾಪಸ್ ಬರೋ ದಿನಾಂಕ ಫಿಕ್ಸ್
Cinema Latest Sandalwood Top Stories
B Saroja Devi
ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ
Cinema Latest
Yash mother
ಪ್ರೊಡಕ್ಷನ್‌ಗೆ ನನ್ನ ಮಗನೇ ಸ್ಫೂರ್ತಿ – ಯಶ್‌ ತಾಯಿ ಮಾತು
Cinema Latest Sandalwood Top Stories
Vijay Devarakonda
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ
Cinema Latest Top Stories

You Might Also Like

India vs England 4th Test Day 1 India Suffer Huge Rishabh Pant Blow Reach 264 4
Cricket

ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ – ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

Public TV
By Public TV
2 hours ago
Kadugodi andhra murder
Bengaluru City

ಆಂಧ್ರದಲ್ಲಿ ಬೆಂಗಳೂರಿನ ಉದ್ಯಮಿಗಳ ಅಪಹರಿಸಿ ಕೊಲೆ

Public TV
By Public TV
2 hours ago
ಸಾಂದರ್ಭಿಕ ಚಿತ್ರ
Latest

ಟೇಕಾಫ್ ವೇಳೆ ಅಹಮದಾಬಾದ್-ದಿಯು ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ – ಹಾರಾಟ ಸ್ಥಗಿತ

Public TV
By Public TV
2 hours ago
IPS Soumyalatha
Bengaluru City

ಧರ್ಮಸ್ಥಳ ಹೂತಿಟ್ಟ ಶವ ಕೇಸ್‌- ಓರ್ವ ಐಪಿಎಸ್ ಅಧಿಕಾರಿಯನ್ನು ಕೈಬಿಡಲು ಸರ್ಕಾರಕ್ಕೆ ಶಿಫಾರಸು

Public TV
By Public TV
3 hours ago
AI ಚಿತ್ರ
Dakshina Kannada

ಉಡುಪಿ, ಮಂಗಳೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ

Public TV
By Public TV
3 hours ago
Narendra Modi and Chinese President Xi Jinping
Latest

5 ವರ್ಷದ ಬಳಿಕ ಚೀನಿಯರಿಗೆ ಭಾರತ ಪ್ರವಾಸಕ್ಕೆ ಅನುಮತಿ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?