ಬೆಂಗಳೂರು: ಪಬ್ಲಿಕ್ ಟಿವಿಯ ವಿಶೇಷ ಕಾರ್ಯಕ್ರಮದಿಂದ ಇಂದು ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ತಿಳಿಸಿದರು.
ಮೊದಲು ಕಾರ್ಯಕ್ರಮ ಚಿಕ್ಕದಾಗಿ ಮಾಡೋಣ ಎಂದು ರಂಗನಾಥ್ ಕೇಳಿದ್ರು. ಅದು ಇಂದು ದೊಡ್ಡ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಇಂದು ಬೆಳಕು ಕಾರ್ಯಕ್ರಮದ ಮೂಲಕ ನೂರಾರು ಕುಟುಂಬಗಳಲ್ಲಿ ಬೆಳಕು ಬಂದಿದೆ ಎಂದು ನಟ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೇಳಿದ್ರು.
ಇದೂವರೆಗೂ ಬೆಳಕು ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ. ಮುಂದೆ ಬೆಳಕು ಕಾರ್ಯಕ್ರಮ ಮುಂದುವರೆಯಲಿ. ಬೆಳಕು ಮೂಲಕ ನೂರಾರು ಕುಟುಂಬಗಳಿಗೆ ದೀಪವಾಗಲಿ ರಾಕ್ಲೈನ್ ಹಾರೈಸಿದರು.