Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕೆಜಿಎಫ್-2 ಸಿನಿಮಾದ ಪೂರ್ತಿ ಕ್ರೆಡಿಟ್ ನಮ್ಮ ಕನ್ನಡ ಇಂಡಸ್ಟ್ರಿಗೆ ಹೋಗಬೇಕು: ರಾಕಿಬಾಯ್

Public TV
Last updated: March 27, 2022 11:49 pm
Public TV
Share
3 Min Read
yash kjf 1
SHARE

–  ಪ್ರಶಾಂತ್ ನೀಲ್‌ ಅವರಿಂದ ಕೆಜಿಎಫ್ ಆಗಿದ್ದು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಟ್ರೈಲರ್ ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿರುವ ಭಾರತ ಮೊದಲ ಸಿನಿಮಾ ಇದು. ಐದು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಿದ್ದು, ರಾಕಿ ಫ್ಯಾನ್ಸ್ ಫುಲ್‌ ಖುಷ್‌ ಆಗಿದ್ದಾರೆ. ಲಾಂಚ್ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಕಿಬಾಯ್ ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

yash kjf

ಟ್ರೈಲರ್ ಲಾಂಚ್ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲು ನಮ್ಮೂರಿಗೆ ಸ್ವಾಗತ. ನಾನು ನನ್ನ ಜೀವನದಲ್ಲಿ ಯಾವತ್ತು ನರ್ವಸ್ ಆಗಿಲ್ಲ. ಆದರೆ ಇವತ್ತು ಯಾವ ರೀತಿ ಫೀಲಿಂಗ್ ಆಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಭಾವನೆಯನ್ನು ಯಾವ ರೀತಿ ಹೇಳಿಕೊಳ್ಳಬೇಕು ಅಂತ ಗೊತ್ತಾಗುತ್ತಿಲ್ಲ. ವಿ ಮಿಸ್ ಯೂ ಅಪ್ಪು ಸರ್ ಎಂದು ತಮ್ಮ ಮಾತನ್ನು ಮುಂದುವರೆದಿಸಿದರು.

yash 1

ಪುನೀತ್ ರಾಜ್‍ಕುಮಾರ್ ಅವರ ‘ನಿನ್ನಿಂದಲೇ’ ಸಿನಿಮಾದಿಂದಲ್ಲೇ ಹೊಂಬಾಳೆ ಫಿಲ್ಮ್ ಜರ್ನಿ ಪ್ರಾರಂಭವಾಗಿತ್ತು. ಈ ದಿನ ಬರುತ್ತೆ ಎಂದು ನಾವು ತಿಳಿದುಕೊಂಡಿರಲಿಲ್ಲ. ಶಿವಣ್ಣ ನಮ್ಮ ಅಣ್ಣ. ಅವರನ್ನು ಎಲ್ಲರೂ ಅಳಿಸುವುದನ್ನು ನನ್ನ ಕೈಯಲ್ಲಿ ನೋಡೋಕೆ ಆಗುತ್ತಿಲ್ಲ. ಇಲ್ಲಿವರೆಗೂ ನಾನು ಅಪ್ಪು ಅವರ ಬಗ್ಗೆ ಮಾತನಾಡಿಲ್ಲ. ಆದರೆ ಇಂದು ನಾನು ಅವರ ಬಗ್ಗೆ ಮಾತನಾಡಲು ಇಷ್ಟ ಪಡುತ್ತೇನೆ. ಅವರು ನಮ್ಮೆಲ್ಲರ ಜೊತೆಯಲ್ಲೇ ಇರುತ್ತಾರೆ. ಅವರು ಎಲ್ಲರ ನಡುವೆ ಜೀವಂತವಾಗಿ ಇರುತ್ತಾರೆ ಎಂದು ನೆನೆದರು. ಇದನ್ನೂ ಓದಿ: ರಾಧಿಕಾ ಬಂದ ಮೇಲೆ ಇನ್ನೂ ಯಶ್ ಅದೃಷ್ಟ ಹೆಚ್ಚಾಯಿತು: ಶಿವಣ್ಣ

ಅಪ್ಪು ಅವರು ಆದರ್ಶ ನಮ್ಮ ಜೊತೆ ಇರುತ್ತೆ. ಅವರು ಬದುಕಿದ್ದಾಗಲೂ ನಾನು ಅವರ ಬಗ್ಗೆ ಹೇಳಿದ್ದೆ. ಅವರ ಜೊತೆ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಆ ಖುಷಿ ನನಗೆ ಇದೆ ಎಂದು ಅಪ್ಪು ಬಗ್ಗೆ ಭಾವುಕರಾಗಿ ಮಾತನಾಡಿದರು.

yash

ಶಿವಣ್ಣನ ಬಗ್ಗೆ ಮಾತನಾಡಿದ ಅವರು, ಥ್ಯಾಂಕ್ಸ್ ಶಿವಣ್ಣ. ನಿಮ್ಮ ರೀತಿ ಕನ್ನಡ ಸಿನಿಮಾಗಳನ್ನು ಯಾರು ಪ್ರೋತ್ಸಾಹ ಕೊಡುವುದಿಲ್ಲ. ನಮ್ಮ ಕನ್ನಡ ಸಿನಿಮಾಗಳ ಪ್ರತಿ ಹೆಜ್ಜೆಯಲ್ಲಿಯೂ ನೀವು ಜೊತೆಗೆ ಇದ್ದೀರಾ. ವಿಜಿ ಸರ್ ನಿಮ್ಮನ್ನ ಕಾರ್ಯಕ್ರಮಕ್ಕೆ ಕರೆದಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ಒಂದು ವೇಳೆ ಗೊತ್ತಿದ್ರೆ ನಾನು ಬರುತ್ತಿದ್ದೆ. ವಿಜಿ ಅವರು ಶಿವಣ್ಣನನ್ನು ಕರೆಯಲು ಹೋದಾಗ ಫೋನ್ ಮಾಡಿದ್ರೆ ಬರುತ್ತಿದ್ದೆ ಎಂದಿದ್ದಾರೆ. ಅದು ನಿಮ್ಮ ದೊಡ್ಡತನ. ನೀವು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದುಕೊಂಡು ಹೋಗುತ್ತಿದ್ದೇವೆ. ನಮ್ಮ ಜೊತೆಗೆ ಇರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಶಿವಣ್ಣನನ್ನು ಹೊಗಳಿದರು.

ನಾನು ನನ್ನ ಇಂಡಸ್ಟ್ರಿಯನ್ನು ತುಂಬಾ ಅಚ್ಚುಕೊಂಡಿದ್ದೇನೆ. ನಾನು ನಮ್ಮ ಸಿನಿಮಾ ಮತ್ತು ನಮ್ಮ ಇಂಡಸ್ಟ್ರಿಗೆ ಪ್ರಶಂಸೆ ಹೋಗಬೇಕು ಎಂದು ನಾನು ಇಷ್ಟ ಪಡುತ್ತೇನೆ. ನನಗೆ ಇವರಲ್ಲಿ ಕ್ರೆಡಿಟ್ ಬೇಡ. ಇದು ನಮ್ಮ ಕನ್ನಡ ಜನರ ಕನಸು ಆಗಿತ್ತು. ಆದರೆ ಒಂದೇ ಸಮಯದಲ್ಲಿ ಕನ್ನಡದ ಲೆಜೆಂಡ್‍ಗಳನ್ನು ನೋಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಬೇರೆ ಭಾಷೆ ತಾರೆಯರು ನಮ್ಮ ಇಂಡಸ್ಟ್ರಿ ಬಗ್ಗೆ ಹೆಚ್ಚು ಪ್ರೀತಿ ತೋರಿಸಿ ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗುತ್ತಿದೆ. ಕೆಜಿಎಫ್ 1 ಮುಗಿನ ಮೇಲೆ ನಾವು ನಮ್ಮ ಇಂಡಸ್ಟ್ರಿಗೋಸ್ಕರ ಏನಾದರೂ ಮಾಡಿದ್ದೇವೆ ಎಂದು ಸಂತೋಷವಾಗುತ್ತಿದೆ ಎಂದರು.

yash

ನಾನು ಈ ಬಗ್ಗೆ ಹೊಂಬಾಳೆ ವಿಜಯ್ ಕಿರಗಂದೂರು ಅವರ ಜೊತೆ ಕೆಜಿಎಫ್ ಬಗ್ಗೆ ಮಾತನಾಡುತ್ತಿರಬೇಕಾದರೆ ಎಲ್ಲರೂ ನಮ್ಮನ್ನು ಹುಚ್ಚ ಎಂದು ತಿಳಿದಿದ್ದರು. ಎಲ್ಲ ಹೀರೋಗಳಿಗೂ ಹೆಚ್ಚು ದೊಡ್ಡ ಸ್ಥಾನದಲ್ಲಿ ಇರಬೇಕು ಎಂದು ಇಷ್ಟವಿರುತ್ತೆ. ಅದೇ ರೀತಿ ನಾನು ಮಾತನಾಡುತ್ತಿದ್ದೆ ಎಂದು ಕೆಲವರು ತಿಳಿದುಕೊಂಡಿದ್ದರು. ಆದರೆ ವಿಜಿ ಅವರು ನನ್ನ ಉದ್ದೇಶವನ್ನು ಸರಿಯಾಗಿ ತಿಳಿದುಕೊಂಡು ನನಗೆ ಬೆಂಬಲವಾಗಿ ನಿಂತರು. ಯಾರು ಊಹಿಸಲು ಸಾಧ್ಯವಾಗದನ್ನು ಅವರು ಮಾಡಿದ್ದಾರೆ. ಇದೇ ರೀತಿ ಕೆಜಿಎಫ್ ಆಯ್ತು. ಇದಕ್ಕೆ ಮುಖ್ಯ ಕಾರಣ ಪ್ರಶಾಂತ್ ನೀಲ್ ಎಂದು ವಿವರಿಸಿದರು.

kgf

ಎಲ್ಲರೂ ನನಗೆ ಈ ಕ್ರೆಡಿಟ್ ಕೊಡುತ್ತಾರೆ. ಆದರೆ ನಿಜವಾಗಿ ಈ ಕ್ರೆಡಿಟ್ ಹೋಗಬೇಕಾಗಿರುವುದು ಪ್ರಶಾಂತ್ ಅವರಿಗೆ. ನನಗೆ ಕೆಜಿಎಫ್ ಸಿನಿಮಾದ ಭಾಗವಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಟ್ರೈಲರ್ ನೋಡಿ ತುಂಬಾ ಸಂತೋಷವಾಗುತ್ತಿದೆ. ಈ ಸಿನಿಮಾದಲ್ಲಿ ಹೊಸ ಕಲಾವಿದರು ಇದ್ದಾರೆ. ಅವರನ್ನು ಪ್ರಶಾಂತ್ ಅವರು ಪ್ರೊಫೆಶನ್ ಕಲಾವಿದರ ರೀತಿ ಸಿನಿಮಾ ಮಾಡಿಸಿದ್ದಾರೆ. ಇದು ಅವರ ಸಾಮರ್ಥ್ಯ ಎಂದು ಹೊಗಳಿದರು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದವನ್ನು ತಿಳಿಸಿದರು. ಶ್ರೀನಿಧಿ ಅವರು ಈ ಸಿನಿಮಾಗಾಗಿ 6 ವರ್ಷ ಕೊಟ್ಟಿದ್ದಾರೆ. ಅವರಿಗೂ ಧನ್ಯವಾದ ಎಂದು ತಿಳಿಸಿದರು.

TAGGED:KGF-2OrionYashಕೆಜಿಎಫ್-2ಯಶ್
Share This Article
Facebook Whatsapp Whatsapp Telegram

Cinema Updates

Ramya 3
Exclusive | ರೇಣುಕಾಸ್ವಾಮಿ ಕೇಸ್‌ – ʻಡಿ ಬಾಸ್‌ʼ ಫ್ಯಾನ್ಸ್‌ ವಿರುದ್ಧ ನಟಿ ರಮ್ಯಾ ಕೆಂಡ
Bengaluru City Cinema Latest Main Post Sandalwood
NIVEDITHA DANCE
ರಜತ್ ಜೊತೆ ನಿವೇದಿತಾ ಗೌಡ `ಲಕ ಲಕ ಮೋನಿಕಾ’
Cinema Latest Sandalwood Top Stories
Brat
ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಚಿತ್ರದ ʻನಾನೇ ನೀನಂತೆʼ ಹಾಡಿಗೆ ಮೆಚ್ಚುಗೆಯ ಸುರಿಮಳೆ
Cinema Latest Sandalwood Top Stories
Saiyaara
200 ಕೋಟಿ ಕ್ಲಬ್ ಸೇರಿದ ಸೆನ್ಸೇಷನ್ `ಸೈಯಾರ’
Bollywood Cinema Latest Top Stories
Pratham 01
ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್‌ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್‌
Bengaluru City Chikkaballapur Cinema Crime Districts Karnataka Latest Main Post Sandalwood

You Might Also Like

Narendra Modi 5
Latest

ತಮಿಳುನಾಡಿನಲ್ಲಿ 4,800 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

Public TV
By Public TV
10 minutes ago
Satish Jarkiholi 2
Dharwad

ನಾನು ಸಿಎಂ ಆಗೋಕೆ ಗುರು ಬಲ ಬೇಕು, ಶನಿಕಾಟ ಕಡಿಮೆ ಆಗ್ಬೇಕು: ಸತೀಶ್ ಜಾರಕಿಹೊಳಿ

Public TV
By Public TV
24 minutes ago
Dharmasthala 4
Latest

ಧರ್ಮಸ್ಥಳ ಫೈಲ್ಸ್‌ | ತನಿಖೆಗಿಳಿದ ಎಸ್‌ಐಟಿ – 8 ತಾಸು ದೂರುದಾರನ ವಿಚಾರಣೆ

Public TV
By Public TV
1 hour ago
KRS
Districts

ಕೆಆರ್‌ಎಸ್ ಡ್ಯಾಂನಿಂದ 50 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ

Public TV
By Public TV
1 hour ago
B R Gavai 2
Latest

ನಿವೃತ್ತಿ ನಂತರ ಯಾವ್ದೇ ಸರ್ಕಾರಿ ಹುದ್ದೆ ಸ್ವೀಕರಿಸಲ್ಲ: ಸಿಜೆಐ ಬಿಆರ್ ಗವಾಯಿ ಶಪಥ

Public TV
By Public TV
2 hours ago
Mumbai Pune Expressway 3
Crime

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ 20 ವಾಹನಗಳ ನಡ್ವೆ ಭೀಕರ ಅಪಘಾತ – ಐಷಾರಾಮಿ ಕಾರುಗಳೇ ಚಿಂದಿ ಚಿಂದಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?