ಮಾನಪ್ಪ ವಜ್ಜಲ್ ಪರ ಪ್ರಚಾರ – ಬದಾಮಿಗೆ ನಾನು ಹೋಗಲ್ಲ: ನಟ ಯಶ್

Public TV
1 Min Read
rcr yash bjp

ರಾಯಚೂರು: ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರವಾಗಿ ನಟ ಯಶ್ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಲಿಂಗಸುಗೂರು ಹಾಗೂ ಮುದಗಲ್ ನಲ್ಲಿ ಯಶ್ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ ನನ್ನ ಸ್ನೇಹಿತರು, ಅವರ ವ್ಯಕ್ತಿತ್ವಕ್ಕೆ ಬಂದು ಪ್ರಚಾರ ಮಾಡುತ್ತಿದ್ದೇನೆ. ಆದರೆ ಬದಾಮಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

vlcsnap 2018 05 07 18h57m16s26

ನಾನು ನನ್ನ ನಂಬಿಕೆಯಿಂದ ಕೆಲಸ ಮಾಡುತ್ತಿದ್ದೇನೆ. ಈ ಭಾಗದಲ್ಲಿ ಯಶೋಮಾರ್ಗದ ಕೆಲಸ ವಾಗಬೇಕಾಗಿದೆ. ಅದಕ್ಕಾಗಿ ನಾನು ಸ್ನೇಹಿತರ ಪರ ಕೆಲಸ ಮಾಡುತ್ತಿದ್ದೇನೆ. ನಾನು ಜಾತಿ, ಧರ್ಮ ನೋಡಿ ಪ್ರಚಾರ ಮಾಡುವುದಿಲ್ಲ. ನಟರು ಸಮಾಜಕ್ಕೆ ಏನೂ ಮಾಡಲ್ಲ ಎಂದು ಜನ ಹೇಳುತ್ತಿದ್ದರು ಹೀಗಾಗಿ ಸುಮ್ಮನೆ ಇದ್ದವರನ್ನ ಹೋರಾಟ ಹಾಗೂ ಸಮಾಜ ಕೆಲಸಕ್ಕೆ ಹಚ್ಚಿದ್ದಾರೆ. ರಾಜಕೀಯಕ್ಕೆ ಮೊದಲಿನಿಂದಲೂ ನನಗೆ ಸಂಪರ್ಕವಿದೆ. ಯಶೋಮಾರ್ಗದಿಂದ ಅದನ್ನ ಮಾಡಿ ತೋರಿಸುತ್ತೇನೆ ಎಂದರು.

ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೋಗುವುದಿಲ್ಲ. ಸ್ನೇಹಿತರು ಕರೆದರೆ ಮಾತ್ರ ಹೋಗುತ್ತೇನೆ. ಬದಾಮಿಗೆ ನಾನು ಹೋಗುವುದಿಲ್ಲ. ನಾನು ಬಂದ ತಕ್ಷಣ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವುದಿಲ್ಲ. ಪ್ರೀತಿ ವಿಶ್ವಾಸದಿಂದ ಇದ್ದವರಿಗೆ ಕೆಲಸ ಮಾಡುತ್ತೇನೆ ಅಂತ ನಟ ಯಶ್ ಹೇಳಿದರು.

vlcsnap 2018 05 07 18h56m07s104

Share This Article
Leave a Comment

Leave a Reply

Your email address will not be published. Required fields are marked *