ಕಣ್ಣಿಗೆ ರಾಸಾಯನಿಕ ಎರಚಿ 20 ಲಕ್ಷ ರೂ., ಕಾರು ದರೋಡೆ- ಧರ್ಮದರ್ಶಿ ಆಸ್ಪತ್ರೆಗೆ ದಾಖಲು

Public TV
0 Min Read
TMK

ತುಮಕೂರು: ಶನಿಮಹಾತ್ಮ ದೇವಾಲಯದ ಧರ್ಮದರ್ಶಿ ಧನಂಜಯ್ಯ ಸ್ವಾಮೀಜಿ ಕಣ್ಣಿಗೆ ರಾಸಾಯನಿಕ ಎರಚಿ ದರೋಡೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಈ ಘಟನೆ ತುಮಕೂರು ಜಿಲ್ಲೆಯ ತುಮಕೂರಿನ ಕುಣಿಗಲ್ ತಾಲೂಕಿನ ಬಿದನಗೆರೆಯಲ್ಲಿ ನಡೆದಿದೆ. ದೇವಾಲಯದ ಧರ್ಮದರ್ಶಿ ಧನಂಜಯ್ಯ ಸ್ವಾಮೀಜಿ ಪೂಜೆ ಮುಗಿಸಿ ವಾಪಸ್ ಆಗುತ್ತಿದ್ರು. ಈ ವೇಳೆ ಭಕ್ತರ ಸೋಗಿನಲ್ಲಿ ಬಂದ 6 ಮಂದಿ ದರೋಡೆಕೋರರು ಕಣ್ಣಿಗೆ ಕೆಮಿಕಲ್ ಸ್ಪ್ರೇ ಮಾಡಿ, 20 ಲಕ್ಷ ನಗದು ಮತ್ತು ಎಸ್‍ಯುವಿ ಕಾರ್ ದರೋಡೆ ಮಾಡಿದ್ದಾರೆ.

TMK 1

ಧನಂಜಯ್ಯ ಸ್ವಾಮಿಜಿ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *