– ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸಿದ್ರೆ ಮಹಾರಾಷ್ಟ್ರಕ್ಕೆ ಯಾವುದೇ ಬಾಧಕ ಇಲ್ಲ
ವಿಜಯಪುರ: ಜಿಲ್ಲೆಯಲ್ಲಿ ರಸ್ತೆ, ರೈಲು, ವಾಯುಮಾರ್ಗ ಸೇರಿ ಎಲ್ಲವೂ ಅಭಿವೃದ್ಧಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟೀನ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಹುಬ್ಬಳ್ಳಿಯಿಂದ (Hubballi) ನೇರವಾಗಿ ವಿಜಯಪುರಕ್ಕೆ ರೈಲು ಬೇಕು. ಸದ್ಯಕ್ಕೆ ಹುಬ್ಬಳ್ಳಿಯಿಂದ ಗದಗಕ್ಕೆ (Gadag) ಹೋಗಿ ಅಲ್ಲಿಂದ ವಿಜಯಪುರಕ್ಕೆ ಸಂಚರಿಸುತ್ತದೆ. ಹೀಗಾಗಿ ಬಹಳ ಸಮಯ ತೆಗೆದುಕೊಳ್ಳುತ್ತದೆ. ಈಗಾಗಲೇ ಗದಗಕ್ಕೆ ಸಾಕಷ್ಟು ರೈಲುಗಳಿವೆ. ಹೀಗಾಗಿ ನೇರವಾಗಿ ರೈಲು ಬೇಕು. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ (V Somanna) ಅವರಿಗೆ ಈ ಬಗ್ಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.ಇದನ್ನೂ ಓದಿ: ರಾಜಕಾರಣಿ ಜೊತೆ ಎಂಗೇಜ್ಮೆಂಟ್ ಆಗ್ತಿದ್ದಾರೆ ರಿಂಕು ಸಿಂಗ್ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?
ವಿಮಾನ ನಿಲ್ದಾಣದ ಪರಿಸ್ಥಿತಿ ಸ್ವಲ್ಪ ನಾಜುಕಾಗಿದೆ. ಸುಪ್ರೀಂ ಕೋರ್ಟ್ನಲ್ಲಿ (Supreme Court) ಇಸಿಯು ತೆಗೆದುಕೊಳ್ಳದೆ ಕೆಲಸ ಮಾಡಿದ್ದೇವೆ. ಈಗ ಮತ್ತೆ ಅಪೀಲ್ ಹೋಗಲು ಅಡ್ವಕೇಟ್ ಜನರಲ್ಗೆ ಹೇಳಿದ್ದೇನೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಸಹಕಾರ ನೀಡುತ್ತದೆ. ಒಟ್ಟಿನಲ್ಲಿ ವಿಜಯಪುರಕ್ಕೆ ರೈಲು, ರಸ್ತೆ, ವಾಯುಮಾರ್ಗ ಎಲ್ಲವೂ ಅಭಿವೃದ್ಧಿ ಆಗಲಿದೆ ಎಂದರು.
ಇನ್ನೂ ಇದೇ ವೇಳೆ ಆಲಮಟ್ಟಿ ಜಲಾಶಯದ (Almatti Reservoir) ಎತ್ತರ ಹೆಚ್ಚಳದ ವಿಚಾರವಾಗಿ, ಆಲಮಟ್ಟಿ ಜಲಾಶಯ 1 ಮೀ. ಎತ್ತರ ಮಾಡಿದ್ರೂ ಅಷ್ಟೆ, 10 ಮೀ. ಹೆಚ್ಚಿಗೆ ಮಾಡಿದರೂ ಅಷ್ಟೇ ಏನು ಸಮಸ್ಯೆಯಿಲ್ಲ. ಈ ಕುರಿತು ಟೆಕ್ನಿಕಲ್ ಟೀಂ ಜೊತೆ ಚರ್ಚೆ ಮಾಡಿ, ತೀರ್ಮಾನ ಮಾಡುತ್ತೇವೆ. ಇನ್ನೂ ಎತ್ತರ ಹೆಚ್ಚಿಸುವುದರಿಂದ ಮಹಾರಾಷ್ಟ್ರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಈ ಮೊದಲೇ ವರದಿಗಳು ಬಂದಿವೆ. ಇದರ ಬಗ್ಗೆ ಎಲ್ಲ ಪರಿಶೀಲನೆ ಆಗಿದೆ. ಎಲ್ಲ ಆತಂಕಗಳು ಸುಳ್ಳು ಎಂದು ಹೇಳಿದರು.ಇದನ್ನೂ ಓದಿ: ಗೆಳೆಯ ಲಾಟರಿಯಲ್ಲಿ ಗೆದ್ದ 30 ಕೋಟಿ ರೂ. ಕದ್ದು ಪ್ರಿಯಕರನೊಂದಿಗೆ ಪರಾರಿಯಾದ ಕೇಡಿ ಲೇಡಿ!