ಸಿನಿ ಜಗತ್ತಿನಲ್ಲಿ ಧೂಳೆಬ್ಬಿಸುತ್ತಿರುವ `ಕಾಂತಾರ’ (Kantara) ಸಿನಿಮಾ (Cinema) ಭರ್ಜರಿ ಕಮಾಲ್ ಮಾಡ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಕಾಂತಾರ ಸಿನಿಮಾದ ಭೂತಾರಾಧನೆಯ ಬಗ್ಗೆ ವಿವಾದವೊಂದು ಹುಟ್ಟಿಕೊಂಡ ಬೆನ್ನಲ್ಲೇ ಸಾರ್ವಜನಿಕರು ಸಿನಿಮಾ ನೋಡುತ್ತಾ ಓ.. ಎಂದು ಕೂಗುವುದಕ್ಕೆ ರಿಷಬ್ ಶೆಟ್ಟಿ (Rishabh Shetty) ಪ್ರತಿಕ್ರಿಯಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿ ದೈವ ಆವಾಹಿಸಿದ ಸಂದರ್ಭದಲ್ಲಿ ಕೋಲ ಆಡುವ ಪಾತ್ರಧಾರಿಗಳು ಓ.. ಎಂದು ಕೂಗುತ್ತಾರೆ. ಈ ಶಬ್ಧ ಕೇಳಿ ಬಂದಾಗಲೆಲ್ಲಾ ಥಿಯೇಟರ್ಗಳಲ್ಲಿ ಪ್ರೇಕ್ಷಕರು ಕೂಡ ಓ ಎಂದು ಕೂಗ್ತಾರೆ. ಥಿಯೇಟರ್ನಿಂದ ಹೊರ ಬಂದಾಗಲೂ ಓ ಎಂದು ಕೂಗುವವರ ಸಂಖ್ಯೆ ಹೆಚ್ಚಿದೆ. ಇದನ್ನು ಗಮನಿಸಿದ ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty), ಕಾಂತಾರ ಸಿನಿಮಾ ವೀಕ್ಷಕರಲ್ಲಿ ಒಂದು ವಿನಂತಿ.. ದಯವಿಟ್ಟು ಯಾರೂ ಕೂಡ ಈ ಸಿನಿಮಾದಲ್ಲಿ ಉಪಯೋಗಿಸಿದ ಶಬ್ಧವನ್ನು ಅನುಕರಿಸಬೇಡಿ.. ಇದೊಂದು ಆಚಾರ.. ಇದೊಂದು ಆಧ್ಯಾತ್ಮಿಕ ನಂಬಿಕೆ.. ಇದೊಂದು ಸೂಕ್ಷ್ಮವಾದ ಧಾರ್ಮಿಕ ವಿಚಾರ.. ಇದು ಸಂಪ್ರದಾಯಕ್ಕೆ ಧಕ್ಕೆ ಉಂಟು ಮಾಡಬಹುದು.. ಸುಮ್ ಸುಮ್ನೆ ಓ ಎಂದು ಕೂಗಬೇಡಿ ಅಂತಾ ಮನವಿ ಮಾಡ್ಕೊಂಡಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಚಿತ್ರವನ್ನು ಡೈರೆಕ್ಟ್ ಆಗಿ ಆಸ್ಕರ್ ಗೆ ಕಳುಹಿಸಿ: ಕಂಗನಾ ರಣಾವತ್
ಕಾಂತಾರ ಸಿನಿಮಾವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಂಗಳೂರಿನಲ್ಲಿ ವೀಕ್ಷಣೆ ಮಾಡಿದ್ದಾರೆ. ಕಾಂತಾರವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಮೆಚ್ಚಿದ್ದಾರೆ. ಸಿನಿಮಾ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ ಕಾಂತಾರ ಉದಾಹರಣೆ. ಈ ಸಿನಿಮಾದ ಫೀಲ್ನಿಂದ ಹೊರಗೆ ಬರಲು ನನಗೆ ಒಂದು ವಾರ ಹಿಡಿಸಬಹುದು. ಈಗ್ಲೂ ನನ್ನ ಶರೀರ ನಡುಗುತ್ತಿದೆ. ಇದೊಂದು ಅದ್ಭುತವಾದ ಅನುಭವ. ರಿಷಬ್ ಶೆಟ್ಟಿಗೆ ಹ್ಯಾಟ್ಸಾಫ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಮೂಲಕ ಅಪ್ಪು ಇನ್ನೂ ಜೀವಂತವಾಗಿದ್ದಾರೆ: ನಟಿ ರಮ್ಯಾ
ಈ ಮಧ್ಯೆ ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಅರ್ಹ ಎಂಬ ಕ್ಯಾಂಪೇನ್ ದೇಶಾದ್ಯಂತ ಸದ್ದು ಮಾಡ್ತಿದೆ.