ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ (Rishabh Shetty) ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಕಾಂತಾರ (Kantara)ಗೆಲುವಿನ ನಂತರ ಅವರು ಅಭಿಮಾನಿಗಳಿಗೆ (Fans) ಸಿಕ್ಕಿಲ್ಲವಾದ್ದರಿಂದ ಇಂದು ಅಧಿಕೃತವಾಗಿ ಅವರೇ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಗ್ರೌಂಡ್ ನಲ್ಲಿ ಅವರು ಇಂದು ಮಧ್ಯಾಹ್ನದಿಂದ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ.
ಹುಟ್ಟು ಹಬ್ಬ ಮತ್ತು ಅಭಿಮಾನಿಗಳ ಭೇಟಿ ಒಟ್ಟಿಗೆ ಆಗುವುದರಿಂದ ಅಭಿಮಾನಿಗಳಿಗಾಗಿ ಭೂರಿ ಭೋಜನ ಸಿದ್ಧವಾಗುತ್ತಿದೆ. ಮಂಗಳೂರು ಮತ್ತು ಬೆಂಗಳೂರು ಶೈಲಿಯ ಊಟವನ್ನು ತಯಾರಿಸಲಾಗಿದ್ದು, ಇಡೀ ಹುಟ್ಟು ಹಬ್ಬದ ನೇತೃತ್ವವನ್ನು ರಿಷಬ್ ಗೆಳೆಯ, ನಟ ಪ್ರಮೋದ್ ಶೆಟ್ಟಿ ವಹಿಸಿಕೊಂಡಿದ್ದಾರೆ. ಈಗಾಗಲೇ ಹುಟ್ಟು ಹಬ್ಬಕ್ಕೆ ಸಂಪೂರ್ಣ ಸಿದ್ದತೆ ಕೂಡ ಮಾಡಲಾಗಿದೆ. ಇದನ್ನೂ ಓದಿ:ಫ್ಯಾನ್ಸ್ ಭೇಟಿಗಾಗಿ ಮಲೇಷ್ಯಾಗೆ ಹೊರಟು ನಿಂತ ರಾಕಿಭಾಯ್ ಯಶ್
ಈ ಹಿಂದೆ ಯಶ್ ಕೂಡ ಇದೇ ಗ್ರೌಂಡಿನಲ್ಲೇ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದರು. ಬೃಹತ್ ಕಟೌಟ್ ಕೂಡ ಹಾಕಲಾಗಿತ್ತು. ಅದಕ್ಕಾಗಿ ಅಂದವಾದ ಕಾನ್ಸೆಪ್ಟ್ ಕೂಡ ರೆಡಿ ಮಾಡಿಕೊಂಡಿದ್ದರು. ಪೊಲೀಸರು ಅನುಮತಿ ನೀಡದ ಕಾರಣಕ್ಕಾಗಿ ಕಟೌಟ್ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದೀಗ ಅದೇ ಜಾಗದಲ್ಲೇ ರಿಷಬ್ ಕೂಡ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಮಧ್ಯಾಹ್ನದಿಂದ ಶುರುವಾಗುವ ರಿಷಬ್ ಫ್ಯಾನ್ಸ್ ಭೇಟಿ, ಸಂಜೆವರೆಗೂ ಆಯೋಜನೆಗೊಂಡಿದೆ. ಅಭಿಮಾನಿಗಳು ತಂದ ಕೇಕ್ ಕತ್ತರಿಸಿ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಕೊನೆಗೆ ಭೋಜನ ಕೂಡ ಮಾಡಲಿದ್ದಾರಂತೆ ರಿಷಬ್. ಈಗಾಗಲೇ ನಂದಿ ಗ್ರೌಂಡ್ಸ್ ಗೆ ಅಭಿಮಾನಿಗಳು ಆಗಮಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]