– ಗಂಗಾವತಿ ಮೂಲದ ಸ್ನೇಹಿತನ ಮೇಲೆ ಅನುಮಾನ
ಮೈಸೂರು: ಜಿಲ್ಲೆಯ ಟಿ.ನರಸೀಪುರ ಸಾಮಾಜಿಕ ಅರಣ್ಯ ವಲಯದ ರೇಂಜ್ ಫಾರೆಸ್ಟ್ ಅಧಿಕಾರಿ (RFO) ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಂತರಾಜ್ ಚೌಹಾಣ್ ಅವರ ಮೃತದೇಹ ಇಂದು ಖಾಸಗಿ ಹೋಟೆಲ್ನಲ್ಲಿ ಪತ್ತೆಯಾಗಿದೆ.
ಸೋಮವಾರ (ಇಂದು) ಬೆಳಗ್ಗೆ ಸಬ್ ಅರ್ಬನ್ ಬಸ್ ನಿಲ್ದಾಣ ಸಮೀಪದ ಯುವರಾಜ್ ಗೆಲಾಕ್ಸಿ ಲಾಡ್ಜ್ ರೂಮಿನಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ – ವಿಡಿಯೋ ವೈರಲ್
ವಿಜಯಪುರ (Vijayapura) ಮೂಲದ ಕಾಂತರಾಜ್ 15 ದಿನಗಳ ಹಿಂದಷ್ಟೇ ಟಿ. ನರಸೀಪುರಕ್ಕೆ ವರ್ಗಾವಣೆಯಾಗಿದ್ದರು. ಭಾನುವಾರ (ಜ.18) ಮಧ್ಯಾಹ್ನ ಸ್ನೇಹಿತ ಮಲ್ಲನಗೌಡ ಪಾಟೀಲ್ ಜೊತೆಗೆ ಯುವರಾಜ್ ಗೆಲಾಕ್ಸಿ ಲಾಡ್ಜ್ನಲ್ಲಿ ರೂಮ್ ಬುಕ್ ಮಾಡಿದ್ದರು. ಇಂದು ಅದೇ ಲಾಡ್ಜ್ನ ಕುಮರನ್ ಜುವೆಲರ್ಸ್ ಹಿಂಭಾಗದ ಕಾರಿಡಾರ್ನಲ್ಲಿ ಶವ ಪತ್ತೆಯಾಗಿದೆ.
ಶವ ಪತ್ತೆಯಾದ ಬೆನ್ನಲ್ಲೇ ಜೊತೆಗಿದ್ದ ಗಂಗಾವತಿ ಮೂಲದ ಮಲ್ಲನಗೌಡ ಪಾಟೀಲ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಸ್ನೇಹಿತನ ನಡೆ ತೀವ್ರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ತೇಜೋವಧೆ ಮಾಡೋ ಕೆಲಸ ನಡೆಯುತ್ತಿದೆ: ಆರ್ಬಿ ತಿಮ್ಮಾಪುರ
ಮಾಹಿತಿ ಪಡೆದ ಲಕ್ಷರ್ ಪೊಲೀಸ್ ಠಾಣೆಯ (Lashkar Police statyion) ಇನ್ಸ್ಪೆಕ್ಟರ್ ಲೋಲಾಕ್ಷಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ದೇವರಾಜ ಠಾಣೆ ಎಸಿಪಿ ಕೆ. ರಾಜೇಂದ್ರ ಕೂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


