ಹೇಗೆ ಬಲಿ ಹಾಕಬೇಕೆಂದು ಗೊತ್ತಿದೆ – ಟ್ರಾನ್ಸ್‌ಫಾರ್ಮರ್ ಬದಲಿಸದ ಅಧಿಕಾರಿಗೆ ಹೆಚ್.ಡಿ.ರೇವಣ್ಣ ಕ್ಲಾಸ್

Public TV
1 Min Read
H D REVANNA

ಹಾಸನ: ಇನ್ನೂ ಎರಡು ತಿಂಗಳಲ್ಲಿ ನಿಮ್ಮ ಅಧಿಕಾರಿ ಸಿಗದೇ ಎಲ್ಲಿಗೂ ಹೋಗಲ್ಲ. ಹೇಗೆ ಬಲಿ ಹಾಕಬೇಕೆಂದು ಗೊತ್ತಿದೆ ಎಂದು ಕೆಟ್ಟಿದ್ದ ಟ್ರಾನ್ಸ್‌ಫಾರ್ಮರ್ (Transformer) ಬದಲಿಸಲು ಕ್ರಮಕೈಗೊಳ್ಳದ ಕೆಪಿಟಿಸಿಎಲ್ (KPTCL) ಸಹಾಯಕ ಅಧಿಕಾರಿಯ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಹರಿಹಾಯ್ದಿದ್ದಾರೆ.

H D REVANNA 1

ಹಾಸನದ (Hassan) ಮೆಳಗೋಡು (Melagodu) ಗ್ರಾಮದ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಕೆಟ್ಟಿದ್ದ  ಟ್ರಾನ್ಸ್‌ಫಾರ್ಮರ್ ಬದಲಾಯಿಸಿಲ್ಲ ಎಂದು ಅಧಿಕಾರಿ ಅರ್ಜುನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಾನು ಹತ್ತು ರೂ. ಮುಟ್ಟದೆ ಕೆಲಸ ಕೊಟ್ಟೆ. ಈಗ ಜನರ ಸೇವೆ ಮಾಡಿ ಎಂದರೆ ನಾಟಕ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಪೊಲೀಸರ ನಡುವೆ ಗುಂಡಿನ ಚಕಮಕಿ- ಆರೋಪಿ ಅಂದರ್

ಗ್ರಾಮದ ಜನರು ಕುಡಿಯುವ ನೀರು (Drinking water), ಚರಂಡಿ ವ್ಯವಸ್ಥೆ ಹಾಗೂ ವಿದ್ಯುತ್ ಬಿಟ್ಟು ಮತ್ತೇನು ಕೇಳುತ್ತಾರೆ? ಇನ್ನೂ ಎರಡು ತಿಂಗಳಲ್ಲಿ ನಮ್ಮ ಸರ್ಕಾರ ಬರಲಿದೆ. ನಿಮ್ಮ ಅಧಿಕಾರಿ ಎಲ್ಲೂ ಹೋಗಲ್ಲ. ಬಲಿ ಹಾಕ್ತೀನಿ ಎಂದು ಅರ್ಜುನ್ ಅವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್ – ಮತ್ತೊಂದು ಎನ್‌ಕೌಂಟರ್‌ಗೆ ಗುಂಡು ಹಾರಿಸಿದ್ದ ವ್ಯಕ್ತಿಯೂ ಸಾವು

Share This Article
Leave a Comment

Leave a Reply

Your email address will not be published. Required fields are marked *