ಚಲಿಸುತ್ತಿದ್ದ ರೈಲಿನಿಂದ ಜಿಗಿದ ನಿ.ನ್ಯಾಯಾಧೀಶ- ಪತಿಯ ಸಾವು ಕೇಳಿ ಪತ್ನಿ ಆತ್ಮಹತ್ಯೆ

Public TV
1 Min Read
railway track

ಹೈದರಾಬಾದ್: ಆಂಧ್ರ ಪ್ರದೇಶದ ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರು ಚಲಿಸುತ್ತಿದ್ದ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಸಾವಿನ ಸುದ್ದಿ ಕೇಳಿದ ಪತ್ನಿ ಕೂಡ ಅದೇ ರೈಲು ಮಾರ್ಗದಲ್ಲಿ ಬರುತ್ತಿದ್ದ ಟ್ರೈನ್ ಮುಂದೆ ಜಿಗಿದು ಸಾವನ್ನಪ್ಪಿದ್ದಾರೆ.

ತಿರುಪತಿ ನಿವಾಸಿಯಾಗಿದ್ದ ಪಿ. ಸುಧಾಕರ್ (65) ಹಾಗೂ ವರಲಕ್ಷ್ಮಿ (56) ಆತ್ಮಹತ್ಯೆ ಶರಣಾದವರು. ಸುಧಾಕರ್ ಅವರ ಮೃತದೇಹವು ತಿರುಪತಿ- ರೆನಿಗುಂಟ ರೈಲ್ವೇ ಮಾರ್ಗದ ಮಧ್ಯದಲ್ಲಿ ಪತ್ತೆಯಾಗಿದೆ.

ಪತಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಕೇಳಿ, ಆಘಾತಕ್ಕೆ ಒಳಗಾದ ವರಲಕ್ಷ್ಮಿ ಅವರು ಕೂಡ, ಅದೇ ಸ್ಥಳದಲ್ಲಿ ಚಲಿಸುತ್ತಿದ್ದ ಮತ್ತೊಂದು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿ. ಸುಧಾಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *