Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಬದಲಾವಣೆಗೇಕೆ ಹೊಸ ವರ್ಷ?

Public TV
Last updated: December 31, 2024 7:37 pm
Public TV
Share
3 Min Read
new year copy
SHARE

ಬದಲಾವಣೆ ಜಗದ ನಿಯಮ. ಜಗತ್ತಿನಲ್ಲಿ ದಿನೇ ದಿನೇ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಂದು ವಸ್ತು, ಜೀವಿ ಮುಂತಾದವು ಯಾವುದೋ ಒಂದು ರೀತಿಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.

new year 3

ಬದಲಾವಣೆಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣಿಸುವ ಬದಲಾವಣೆ, ಕೆಲವೊಂದು ಕಣ್ಣಿಗೆ ಕಾಣಿಸದಿರುವ ಬದಲಾವಣೆ. ಆದರೆ ಎಲ್ಲದಕ್ಕೂ ತಾಳ್ಮೆಯಿಂದ ಕಾಯಬೇಕು ಅಷ್ಟೆ. ಆದರೆ ಮನುಷ್ಯನಲ್ಲಿ ತಾಳ್ಮೆ ಅನ್ನೋದೇ ಇಲ್ಲ. ಯಾವುದೋ ಒಂದು ರೀತಿಯ ನಿರ್ಧಾರದಿಂದ ಇಲ್ಲಸಲ್ಲದ ಅಚಾತುರ್ಯಗಳನ್ನು ಮಾಡಿಕೊಳ್ಳುತ್ತಾನೆ. ಇದು ಒಂದು ರೀತಿ ಮೊದಲಿನಿಂದಲೂ ನಡೆದುಕೊಂಡು ಬಂದ ಬಳುವಳಿಯಾಗಿದೆ. ಯಾರಿಗೂ ಒಂದುಕ್ಷಣ ಸುಮ್ಮನೇ ಕುಳಿತು ಯೋಚಿಸುವ ತಾಳ್ಮೆಯೇ ಇಲ್ಲ. ದೇವರು ಇದ್ದಾನೋ ಇಲ್ವೋ ಗೊತ್ತಿಲ್ಲ? ಹಣೆಬರಹ ಇದೆಯೋ ಇಲ್ವೋ ಗೊತ್ತಿಲ್ಲ? ದೇವರು ಏನಾದರೂ ಮಾಡಬಹುದು, ಹಣೆಬರಹದಲ್ಲಿ ಇದ್ದ ಹಾಗೆಯೇ ಆಗುತ್ತದೆ ಎಂದು ನಂಬಿ ಕುಳಿತುಕೊಳ್ಳುವವರೂ ಇದ್ದಾರೆ. ಆದರೆ ಅದನ್ನೆಲ್ಲಾ ನಂಬಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.

New Year 2

ಮನುಷ್ಯ ಬದಲಾವಣೆಯನ್ನು ಬಯಸುತ್ತಾನೆ. ಆದರೆ ಅದಕ್ಕಾಗಿ ಕಾಯುವುದೂ ಇಲ್ಲ, ಅದಕ್ಕೆ ಬೇಕಾದ ಪರಿಶ್ರಮವನ್ನೂ ಪಡುವುದಿಲ್ಲ. ಮನುಷ್ಯ ಬಯಸುವುದು ದಿಡೀರ್ ಬದಲಾವಣೆ ಮತ್ತು ಪರಿಶ್ರಮ ರಹಿತ ಬದಲಾವಣೆ. ಇದು ಎಲ್ಲಾ ಸಮಯದಲ್ಲೂ ಸಾಧ್ಯವಿಲ್ಲ. ಜೀವನ ಎನ್ನುವುದು ಇಲ್ಲಿ ನಾವು ಏನು ಮಾಡುತ್ತೇವೆ? ಯಾಕೆ ಮಾಡುತ್ತೇವೆ? ಹೇಗೆ ಮಾಡುತ್ತೇವೆ? ಯಾರಿಗೋಸ್ಕರ ಮಾಡುತ್ತೇವೆ? ಎನ್ನುವುದರ ಮೇಲೆ ನಿಂತಿದೆ. ಒಂದು ಮಾತು ಮಾತ್ರ ಸತ್ಯ, ಇವತ್ತು ನಾವು ಮಾಡುವ ಪ್ರತಿಯೊಂದು ಕೆಲಸ ಕೂಡ ನಾಳಿನ ಭವಿಷ್ಯ ಆಗುತ್ತದೆ. ಏನೇ ಮಾಡಬೇಕು ಎಂದುಕೊಂಡಿದ್ದರೂ ಒಳ್ಳೆಯದನ್ನು ಮಾಡಿ, ಅದು ನಿಮ್ಮ ಭವಿಷ್ಯವನ್ನು ಒಳ್ಳೆಯದನ್ನಾಗಿ ಮಾಡುತ್ತದೆ. ಕೆಟ್ಟದ್ದನ್ನೇ ಮಾಡುವುದಾದರೆ ಮಾಡಿ, ಅದನ್ನು ಮುಂದೆ ನೀವು ಅನುಭವಿಸುತ್ತೀರಿ. ಅಷ್ಟೇ ಬೇರೆ ಯಾರಿಗೂ ಯಾವುದೇ ರೀತಿ ತೊಂದರೆಯಿಲ್ಲ. ಬೇರೆಯವರಿಗಾಗಿ ಒಳ್ಳೆಯದನ್ನು ಮಾಡಬೇಕಾ? ಬಿಡಬೇಕಾ? ನಿಮ್ಮ ಇಷ್ಟ. ಆದರೆ ಮಾಡಿದ ಮೇಲೆ ಅವರಿಂದ ಯಾವತ್ತೂ ಕೂಡ ಅದರ ಪ್ರತಿಫಲಕ್ಕಾಗಿ ಕಾಯಬೇಡಿ. ಸಿಗಬಹುದು, ಸಿಗದೇ ಇರಬಹುದು.

ಭವಿಷ್ಯ ಎನ್ನುವುದು ಮಾತ್ರ ನಿಮ್ಮ ಇಂದಿನ ನಡೆವಳಿಕೆಯನ್ನು ಅವಲಂಬಿಸಿದೆ. ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ, ಖುಷಿಯಿಂದ ಬದುಕಬೇಕು ಎಂದುಕೊಂಡಿದ್ದರೆ ಅದಕ್ಕೆ ಇಂದಿನಿಂದಲೇ ಪರಿಶ್ರಮ ಪಡಿ. ಏನೇ ಸಿಗುವುದಾದರೂ ಅದು ನಿಮಗೆ. ನೀವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗದೇ ಇದ್ದರೆ, ಮುಂದುವರಿಯಿರಿ. ಒಂದಲ್ಲ ಒಂದಿನ ನಿಮ್ಮ ಭೂತಕಾಲದ ಪರಿಶ್ರಮ ಅವಶ್ಯವಾಗಿ ಭವಿಷ್ಯವಾಗುತ್ತದೆ. ಆದರೆ ತಾಳ್ಮೆಯಿಂದ ಕಾಯುತ್ತಲಿರಿ.

new year 1

ಯಾವುದಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದುಕೊಂಡಿದ್ದರೆ ನಾಳೆಗಾಗಿ ಕಾಯಬೇಡಿ. ರಾತ್ರಿ ಮಲಗಿದ ಮೇಲೆ ಬೆಳಿಗ್ಗೆ ಎದ್ದೇಳುತ್ತೆವಾ ಎಂದು ಗೊತ್ತಿಲ್ಲ. ಶುರು ಮಾಡಿ. ಕೆಲವೊಮ್ಮೆ ಯಾವುದೋ ಕೆಲಸ ಬಂದಾಗ ಇನ್ನೇನು 2 ತಿಂಗಳಲ್ಲಿ ವರ್ಷಾನೇ ಮುಗಿಯತ್ತದೆ ಎಂದು ಮುಂದಿನ ವರ್ಷ ಮಾಡಿದರೆ ಆಯಿತು ಎಂದು ಮುಂದಕ್ಕೆ ಹಾಕಬೇಡಿ. ಒಳ್ಳೆಯದನ್ನು ಮಾಡುವುದೇ ಆದರೆ ಯಾಕೆ ಮುಂದಕ್ಕೆ ತಳ್ಳಬೇಕು. ಈಗಲೇ ಬದಲಾಗಿ ನಾಳೆಗೋಸ್ಕರ ಕಾಯೋದು ಬೇಡ, ನಾಳೆನೇ ನಮಗೋಸ್ಕರ ಬೇಗ ಬರಲಿ ಎನ್ನುವ ಮನೋಭಾವ ಇರಬೇಕು. ಆಗುವುದೆಲ್ಲ ಒಳ್ಳೆಯ ಕಾರಣಕ್ಕೆ ಎಂದು ನಂಬಿ ತಾಳ್ಮೆಯಿಂದ ಕಾಯಿರಿ. ಅವಶ್ಯವಾಗಿ ನಿಮ್ಮಿಂದ ಯಾವುದೋ ರೀತಿಯಲ್ಲಿ ಒಂದು ಒಳ್ಳೆಯ ಬದಲಾವಣೆ ತರುವ ಕೆಲಸ ನಡೆಯುತ್ತದೆ. ನಿಮ್ಮ ಜೀವನದಲ್ಲಿ ಬದಲಾವಣೆ ಬಯಸುತ್ತಿದ್ದರೆ ತಡ ಮಾಡಬೇಡಿ, ಈಗಲೇ ಶುರು ಮಾಡಿ. ಕೆಲವೊಮ್ಮೆ ನಾಳೆ ಏನು ಆಗುತ್ತದೆ ಎಂದು ಗೊತ್ತಿರಲ್ಲ. ಇನ್ನೂ ಮುಂದಿನ ವರ್ಷದ ಬಗ್ಗೆ ಮಾತನಾಡುವುದು ಯಾಕೆ? ಈಗಿನ ಕ್ಷಣವನ್ನು ಅನುಭವಿಸಿ. ಖುಷಿಯಿಂದ ಇರಿ.

ಬದಲಾವಣೆ ಎನ್ನುವುದು ಸುಲಭ ಕಾರ್ಯವಲ್ಲ. ಆದರೆ ಅದು ಯಾವಾಗಲೂ ಸಾಧ್ಯವಾಗುವಂತಹ ಸಂಗತಿ. ಅವಶ್ಯವಾಗಿ ಈಗಿನ ಬದಲಾವಣೆ ಭವಿಷ್ಯದ ಬದಲಾವಣೆಯನ್ನೆ ಮಾಡಬಹುದು ಯಾರಿಗೊತ್ತು? ಹೊಸ ವರ್ಷದಲ್ಲಿ ಮಾಡಬಹುದಾದ ವಿಷಯಗಳ ಕುರಿತು ಸಂಕಲ್ಪವಿರಲಿ. ಆದರೆ ತಡ ಬೇಡ. ಪ್ರತಿ ಕ್ಷಣವೂ ನಿಮ್ಮದು. ಅದೇ ನಿಮ್ಮ ಕೊನೆಕ್ಷಣ ಎಂದು ಅಂದುಕೊಂಡು ಮುಂದುವರೆಯಿರಿ.

2025

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!

TAGGED:New YearNew Year 2025new year celebrationNew Year Resolutionಹೊಸ ವರ್ಷಹೊಸ ವರ್ಷ 2025ಹೊಸ ವರ್ಷ ಆಚರಣೆಹೊಸ ವರ್ಷಕ್ಕೆ ಸಂಕಲ್ಪ
Share This Article
Facebook Whatsapp Whatsapp Telegram

You Might Also Like

Mysuru Chamundeshwari
Districts

2ನೇ ಆಷಾಢ ಶುಕ್ರವಾರ – ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡಿ ತಾಯಿ

Public TV
By Public TV
28 minutes ago
Chips
Bengaluru City

ಚಿಪ್ಸ್ ಖರೀದಿಸಲು ಅಂಗಡಿಗೆ ತೆರಳಿದ್ದ 7ರ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

Public TV
By Public TV
59 minutes ago
Israeli strikes in Gaza
Latest

ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯನ್ನರು ಇಸ್ರೇಲ್‌ ದಾಳಿಗೆ ಬಲಿ; 94 ಮಂದಿ ಸಾವು

Public TV
By Public TV
1 hour ago
APMC Corruption Chandrashekar
Bengaluru City

ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಯ ತಾಳಿ, ಅಮ್ಮನ ಒಡವೆ ಅಡವಿಟ್ಟು 20 ಲಕ್ಷ ಲಂಚ – APMC ವಿರುದ್ಧ ಭ್ರಷ್ಟಾಚಾರದ ಆರೋಪ

Public TV
By Public TV
2 hours ago
house set on fire for demanding loan repayment in bengaluru
Bengaluru City

ಸಾಲ ವಾಪಸ್‌ ಕೇಳಿದ್ದಕ್ಕೆ ಪೆಟ್ರೋಲ್‌ ಸುರಿದು ಮನೆಗೆ ಬೆಂಕಿ ಹಚ್ಚಿದ ಭೂಪ!

Public TV
By Public TV
2 hours ago
KS Eshwarappa
Latest

ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ ಎಫ್‌ಐಆರ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?