ರಾಜ್ಯದಲ್ಲಿ ‘ಕಾಲಾ’ ಚಿತ್ರ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿಗೆ ಮನವಿ

Public TV
1 Min Read
KAALA COLLAGE

ಬೆಂಗಳೂರು: ಕರ್ನಾಟಕದಲ್ಲಿ ತಮಿಳು ಚಿತ್ರ ‘ಕಾಲಾ’ ಬಿಡುಗಡೆ ಮಾಡದಂತೆ ಕರುನಾಡ ಸೇವಕರ ಸಂಘ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದೆ.

ರಜನಿಕಾಂತ್ ಕನ್ನಡಿಗರಿಗೆ ಮೋಸ ಮಾಡಿದ್ದಾರೆ. ಅವರು ಕನ್ನಡಿಗರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆ. ನಮ್ಮ ನಾಡಲ್ಲಿ ನೀರಿಲ್ಲ ಎಂದರೂ ತಮಿಳುನಾಡಿಗೆ ನೀರು ಬಿಡುವಂತೆ ರಜಿನಿಕಾಂತ್ ಆಗ್ರಹಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕ್ಕೆ ಅನ್ಯಾಯವಾಗಲಿದೆ. ಆದರೆ ಇದು ಅರಿವಿದ್ದರು ಕೂಡ ನಿರ್ವಹಣಾ ಸಮಿತಿಯ ರಚನೆ ಮಾಡುವಂತೆ ಆಗ್ರಹಿಸಿದ್ದಾರೆ ಎಂದು ಸಂಘ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡಿಗರ ನಿಲುವನ್ನು ವಿರೋಧಿಸಿದ್ದರಿಂದ ರಜನಿಕಾಂತ್ ಅವರ ಕಾಲಾ ಚಿತ್ರ ಬಿಡುಗಡೆ ಮಾಡಬಾರದು. ರಾಜ್ಯಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಈ ಬಗ್ಗೆ ಕರ್ನಾಟಕ ಚಲನಚಿತ್ರ ಮಂಡಳಿಗೂ ಕರುನಾಡ ಸೇವಕರ ಸಂಘ ಮನವಿ ಮಾಡಿದೆ.

kaala

Share This Article
Leave a Comment

Leave a Reply

Your email address will not be published. Required fields are marked *