ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ಸೇರಿದ್ದ ಎ8 ಆರೋಪಿ ರವಿಶಂಕರ್ (Ravishankar) ಕೊನೆಗೂ ತುಮಕೂರು ಜೈಲಿನಿಂದ (Tumakuru Central Jail) ಬಿಡುಗಡೆಯಾಗಿದ್ದಾನೆ.
ಚಿತ್ರದುರ್ಗ (Chitradurga) ಮೂಲದ ರವಿಶಂಕರ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ8 ಆರೋಪಿಯಾಗಿ ತುಮಕೂರು ಜೈಲು ಸೇರಿದ್ದ. ಬೇಲ್ ಸಿಕ್ಕಿ 15 ದಿನಗಳ ಬಳಿಕ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಇದನ್ನೂ ಓದಿ: Madhya Pradesh| ಹುಲಿಸಂರಕ್ಷಿತ ಪ್ರದೇಶದಲ್ಲಿ 7 ಆನೆಗಳ ನಿಗೂಢ ಸಾವು
ಡಿ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ 57ನೇ ಸಿಸಿಹೆಚ್ ನ್ಯಾಯಾಲಯ ಆರೋಪಿ ರವಿಶಂಕರ್ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ 2 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯನ್ನೂ ನ್ಯಾಯಾಲಯ ಕೇಳಿತ್ತು. ಇದನ್ನೂ ಓದಿ: ಜೈಲಿನಿಂದ ದರ್ಶನ್ ರಿಲೀಸ್ ಬೆನ್ನಲ್ಲೇ ಎಮೋಷನಲ್ ಪೋಸ್ಟ್ ಹಂಚಿಕೊಂಡ ಪುತ್ರ ವಿನೀಶ್