ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ

Public TV
2 Min Read
Darshan 6

– ಆರ್‌ಆರ್‌ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ
– ಪೊಲೀಸ್‌ ಅಧಿಕಾರಿ ತನ್ನ ಸ್ನೇಹಿತನ ಜೊತೆ ಮಾತನಾಡಿದ್ದ ಆಡಿಯೋ ವೈರಲ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy) ಅವರನ್ನು ದರ್ಶನ್‌ ಮತ್ತು ಗ್ಯಾಂಗ್‌ (Darshan Gang) ಬರೆ ಹಾಕಿಸಿ, ಕೋಳಿ ಎಸೆದಂತೆ ಎಸೆದು ಮಿನಿ ಟ್ರಕ್‌ಗೆ ಗುದ್ದಿ ಹತ್ಯೆ ಮಾಡಿದ್ದಾರೆ.

ಹೌದು. ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿದ ಬಗ್ಗೆ ಪೊಲೀಸ್‌ ಅಧಿಕಾರಿಯೊಬ್ಬರು ಸ್ನೇಹಿತನ ಜೊತೆ ಮಾತನಾಡಿರುವ ಆಡಿಯೋ ಈಗ ವೈರಲ್‌ ಆಗಿದೆ. ಈ ಆಡಿಯೋದಲ್ಲಿ ಕೊಲೆಯನ್ನು ಹೇಗೆ ಮಾಡಲಾಗಿದೆ ಎಂಬುದರ ಬಗ್ಗೆ ಪೊಲೀಸ್‌ ಅಧಿಕಾರಿ ವಿವರಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

ಆಡಿಯೋದಲ್ಲಿ ಏನಿದೆ?
ಪೊಲೀಸ್ ಅಧಿಕಾರಿ: ಅಷ್ಟೊಂದು ಎವಿಡೆನ್ಸ್ ಇದೆ. 302 ಎಫ್‌ಐಆರ್‌ಗೆ ಹೆಸರು ತರಬೇಕು ಅಂದರೆ ಸುಮ್ಮಸುಮ್ಮನೆ ತರಲ್ಲ. ಈಗ ಲೈಫ್ ಅಲ್ವಾ? ಸುಮ್ಮನೆ ಒಂದು ವಾರ್ನಿಂಗ್ ಮಾಡಿ ಬಿಟ್ಟಿದ್ದರೆ ಆಗ್ತಿತ್ತು.

ಸ್ನೇಹಿತ: ಹುಡುಗರು ಮಾಡಿದ್ದಾರೆ ಅಂತಾರೆ ನಿಜನಾ?

ಪೊಲೀಸ್ ಅಧಿಕಾರಿ: ಎಲ್ಲರೂ ಸೇರಿ ಹೊಡೆದಿದ್ದಾರೆ. ಬರೆ ಎಲ್ಲಾ ಹಾಕಿದ್ದಾರಲ್ಲ. ಕಬ್ಬಿಣ ಕಾಯಿಸಿ ಬರೆ ಹಾಕಿ, ಲಾರಿಗೆ ತಲೆ ಹೊಡೆದು, ಎಲ್ಲಾ ಮಾಡಿದ್ದಾರೆ.  ಶೆಡ್‌ನಲ್ಲಿ ಸೀಜ್‌ ಮಾಡಿದ ಗಾಡಿಗಳಿರುತ್ತೆ. ಲಾರಿ, ಬಸ್, ಆಟೋಗಳು ಎಲ್ಲಾ. ಆ ಚಿಕ್ಕ ಹುಡುಗನಿಗೆ ಕೋಳಿ ಎಸೆದಂಗೆ ದರ್ಶನ್ ಎಸಿದಿದ್ದಾನೆ.

ಸ್ನೇಹಿತ: ವಿಡಿಯೋ ಇದ್ಯಾ?

ಪೊಲೀಸ್ ಅಧಿಕಾರಿ: ಹಾ. ಎಲ್ಲಾ ಇದೆ. ಸಿಸಿಟಿವಿ ದೃಶ್ಯಗಳಿವೆ. ಸಿಕ್ಕಾಪಟ್ಟೆ ಟಾರ್ಚರ್ ಮಾಡಿದ್ದಾರೆ ಸಾರ್. ಬೌನ್ಸರ್‌ಗಳು ಹೊಡೆಯೋ ಏಟು ತಡೆಯೋಕೆ ಆಗುತ್ತಾ? ಆ ಚಿಕ್ಕ ಹುಡುಗ. ಎಲ್ಲಾ ಕುಡಿದು ಬಂದು ಹೊಡೀಯೋದು.ಸುಮ್ಮನೆ ವಾರ್ನ್ ಮಾಡಿದ್ದರೆ ಆಗ್ತಿತ್ತು. ಇಲ್ಲಾ ಒಂದು ದೂರು ಕೊಟ್ಟಿದ್ದರೆ ಆಗ್ತಿತ್ತು. ಎಷ್ಟು ಭೀಕರ ಹತ್ಯೆ ಗೊತ್ತಾ ಇದು. ತುಂಬಾ ಹೀನಾಯವಾಗಿ ಹೊಡೆದಿದ್ದಾರೆ.

ಸ್ನೇಹಿತ: ಹೌದಾ

 
ಪೊಲೀಸ್ ಅಧಿಕಾರಿ: ಪವಿತ್ರಾ ಗೌಡಗೂ ಹೊಡೆದಿದ್ದಾನೆ. ಅವಳು ಹೋಗಿ ಆರ್.ಆರ್.ನಗರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಸೋಮವಾರ ಡಿಸ್ಚಾರ್ಜ್ ಆಗಿ ಬಂದಿದ್ದಾಳೆ.

ಸ್ನೇಹಿತ: ಹೌದಾ

ಪೊಲೀಸ್ ಅಧಿಕಾರಿ: ನಾಲ್ವರು ಬಂದು ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಶರಣಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ತಗ್ಲಾಕೊಂಡ್ರು.ಹೌದಾ

Share This Article