ಜನರನ್ನು ಕನ್ ಫ್ಯೂಸ್ ಮಾಡುವುದರಲ್ಲಿ ನಂಬರ್ ಒನ್ ಸ್ಥಾನ ಉಪೇಂದ್ರ ಅವರಿಗೆ ಕೊಡಲೇಬೇಕು. ಯಾವುದನ್ನೂ ಈ ರಿಯಲ್ ಸ್ಟಾರ್ ನೆಟ್ಟಗೆ ಹೇಳುವುದಿಲ್ಲ. ಮೊದಲ ಸಿನಿಮಾದಿಂದ ಈವರೆಗೂ ಅವರು ಪ್ರೇಕ್ಷಕರ ತಲೆಗೆ ಹುಳು ಬಿಡುತ್ತಲೇ ಬಂದಿದ್ದಾರೆ. ಈಗ ಮತ್ತೆ ಅದನ್ನೇ ಮಾಡಿದ್ದಾರೆ. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್
11.03, 12:46 ಸೇವ್ ದಿಸ್ ಡೇಟ್ ಎಂದು ಮಸೇಜ್ ಕಳುಹಿಸಿ ಸುಮ್ಮನೆ ಕೂತು ಬಿಟ್ಟಿದ್ದಾರೆ. ಹೀಗೆ ಪೋಸ್ಟರ್ ವೊಂದನ್ನು ಹರಿಬಿಡುತ್ತಿದ್ದಂತೆಯೇ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ. ರಿಯಲ್ ಸ್ಟಾರ್ ಎರಡು ದೋಣೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಒಂದು ದೋಣೆ ಸಿನಿಮಾದ ಸಮುದ್ರದಲ್ಲಿ ಸಾಗುತ್ತಿದ್ದರೆ, ಮತ್ತೊಂದು ದೋಣಿ ಪ್ರಜಾಕೀಯದಲ್ಲಿ ತೇಲುತ್ತಿದೆ. ಮಾರ್ಚ್ 11ರಂದು ಇವರು ಸಾಗುತ್ತಿರುವ ವಿಷ್ಯ ಹೇಳ್ತಾರಾ? ಅಥವಾ ತೇಲುತ್ತಿರುವ ಕುರಿತು ಮಾತಾಡ್ತಾರಾ ಎನ್ನುವುದು ಸಸ್ಪೆನ್ಸ್. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್
ಪ್ರಜಾಕೀಯದಲ್ಲಿ ಉಪೇಂದ್ರ ತುಂಬಾ ಸೀರಿಯಸ್ ಆಗಿ ಕೆಲಸ ಮಾಡುತ್ತಿಲ್ಲ. ಕೇವಲ ಸಂದೇಶಗಳನ್ನು ಹರಿಬಿಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಚುನಾವಣೆ ಇನ್ನೂ ದೂರವಿದೆ. ಬಿಬಿಎಂಪಿ ಚುನಾವಣೆ ಬಗ್ಗೆ ಏನಾದರೂ ಹೇಳುತ್ತಾರಾ ಅಂದರೆ, ಅಸಲಿಯಾಗಿ ಉಪೇಂದ್ರ ಅವರಿಗೆ ಬಿಬಿಎಂಪಿ ಚುನಾವಣೆಯ ಬಗ್ಗೆ ಅಷ್ಟೇನೂ ಆಸಕ್ತಿ ಕಾಣುತ್ತಿಲ್ಲ. ಹಾಗಾಗಿ ಅವರ ನಿರ್ದೇಶನದ ಸಿನಿಮಾ ಬಗ್ಗೆ ಏನಾದರೂ ಅಪ್ ಡೇಟ್ ಕೊಡಬಹುದು ಎನ್ನಬಹುದು. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ
ಉಪೇಂದ್ರ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೂ ಈ ಕುರಿತು ಅವರು ಕೆಲ ಮಾಹಿತಿಯನ್ನೂ ಕೊಟ್ಟಿದ್ದಾರೆ. ಒಂದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಸಾವಿರಾರು ಕಲಾವಿದರು ಈ ಸಿನಿಮಾಗೆ ಬೇಕಾಗಿದ್ದರಿಂದ ಆಡಿಷನ್ ಕೂಡ ಮಾಡುತ್ತಿದ್ದಾರೆ. ಕನ್ನಡದ್ದೇ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಸಿನಿಮಾ ಕುರಿತು ಅವರು ಮಾಹಿತಿ ಕೊಡುತ್ತಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?
ಇವೆಲ್ಲದರ ಮಧ್ಯೆ ಅವರ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದರ ಮಾಹಿತಿ ಏನಾದರೂ ಕೊಟ್ಟು, ಇವೆಲ್ಲವನ್ನೂ ಸುಳ್ಳು ಮಾಡುತ್ತಾರಾ ಎನ್ನುವ ಗೊಂದಲ ಕೂಡ ಮೂಡಿದೆ. ಏನೇ ಆಗಲಿ ಎರಡು ರಾತ್ರಿ ಕಳೆದರೆ, ಉಪ್ಪಿ ಏನ್ ಹೇಳ್ತಾರೆ ಎನ್ನುವುದನ್ನು ನೋಡಬಹುದು.