– ಕಾನೂನಿಗಿಂತ ಯಾರು ದೊಡ್ಡವರಲ್ಲ, ಯಾರ ರಕ್ಷಣೆಯನ್ನೂ ಮಾಡುತ್ತಿಲ್ಲ
ದಾವಣಗೆರೆ: ಕಾನೂನಿಗಿಂತ ಯಾರು ದೊಡ್ಡವರಲ್ಲ. ಯಾರೇ ತಪ್ಪು ಮಾಡಿದ್ರೂ ಒದ್ದು ಒಳಗೆ ಹಾಕಿ ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ (S.S Mallikarjun) ಹೇಳಿದ್ದಾರೆ.

ಸಚಿವರ ಆಪ್ತ ಹಾಗೂ ಕಾಂಗ್ರೆಸ್ (Congress) ಮುಖಂಡ ಅಯೂಬ್ ಫೈಲ್ವಾನ್ ಪುತ್ರರು ಪೊಲೀಸರ ಮೇಲೆ ದಾಳಿ ಮಾಡಿದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಯಾರೇ ತಪ್ಪು ಮಾಡಿದ್ರೂ ಒದ್ದು ಒಳಗೆ ಹಾಕಿ. ಇದರಲ್ಲಿ ಎರಡು ಮಾತೇ ಇಲ್ಲ, ನಾನು ಯಾರ ರಕ್ಷಣೆ ಸಹ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ – ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಆಪ್ತನ ಮಗ ಅರೆಸ್ಟ್, ಮತ್ತೊಬ್ಬನಿಗಾಗಿ ತಲಾಶ್
ಬಿಜೆಪಿಯರಿಗೆ (BJP) ಬೆಂಕಿ ಹಚ್ಚುವುದನ್ನು ಬಿಟ್ಟು ಬೇರೆ ಎನೂ ಗೊತ್ತಿಲ್ಲ. ಹಿಂದೂ ಮುಸ್ಲಿಂ ಹೊಡೆದಾಟ ಅವರಿಗೆ ಬೇಕು. ದಾವಣಗೆರೆ ಶಾಂತವಾಗಿರುವುದು ಬಿಜೆಪಿಗೆ ಬೇಡವಾಗಿದೆ. ಯಾರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಒಳಗೆ ಹಾಕಿ. ಈ ಹಿಂದೆ ಡ್ರಗ್ಸ್ ಕೇಸ್ ಪತ್ತೆ ಆಗಿತ್ತು, ಆಗಲೂ ತಪ್ಪು ಮಾಡಿದ್ರೆ ಬಿಡಬೇಡಿ ಎಂದಿದ್ದೆ. ಈ ವಿಚಾರದಲ್ಲಿ ಬಿಜೆಪಿ ನನ್ನ ಮೇಲೆ ಆರೋಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಏನಾದರೂ ಡ್ರಗ್ಸ್ ಮಾರಾಟ ಮಾಡುತ್ತಿದ್ನಾ? ಹತ್ತಾರು ಕಾಲೇಜ್ ನಡೆಸುತ್ತಿದ್ದೇನೆ. ಸಮಾಜದಲ್ಲಿ ನಮಗೆ ಗೌರವಿದೆ. ಬಿಜೆಪಿಯರು ಎಲುಬು ಇಲ್ಲದ ನಾಲಿಗೆ ಅಂತ ಬೇಕಾ ಬಿಟ್ಟಿ ಹೇಳಿಕೆ ನೀಡಬಾರದು. ಇವರ ಹೇಳಿಕೆ ಕೇಳಿ ನನಗೆ ಬೇಸರವಾಗುತ್ತಿದೆ. ಎಷ್ಟು ಕೆಳಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯ ಶಾಸಕ ಬಿ.ಪಿ ಹರೀಶ್ ಅವರು ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಬಳಸಿದ ಭಾಷೆ ಯಾವುದು? ಇವರಿಗೆ ಮಾನ ಮರ್ಯಾದೆ ಇದಿಯಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಣ, ಹೆಣ್ಣಿಗಾಗಿ ಕೊಲೆ ಶಂಕೆ – ಕತ್ತು ಕೊಯ್ದು ರೌಡಿಶೀಟರ್ ಬರ್ಬರ ಹತ್ಯೆ

