ಚಿಕ್ಕಬಳ್ಳಾಪುರ: 2025ರ ಐಪಿಎಲ್ (IPL) ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳನ್ನ ಗೆದ್ದು ಬೀಗಿರುವ ಆರ್ಸಿಬಿ (RCB) ತಂಡ ಶುಕ್ರವಾರ ಚೆನ್ನೈನಲ್ಲೇ ಸಿಎಸ್ಕೆ (CSK) ತಂಡವನ್ನ ಮಣಿಸಿದೆ. ಇನ್ನೂ ಮುಂದಿನ ಪಂದ್ಯಕ್ಕಾಗಿ ಆರ್ಸಿಬಿ ತಂಡ ಇಂದು ಬೆಂಗಳೂರಿಗೆ ಆಗಮಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಸಿಬಿ ತಂಡದ ಆಗಮನದ ಹಿನ್ನೆಲೆಯಲ್ಲಿ ಆಟಗಾರರಿಗೆ ಭಾರೀ ಭದ್ರತೆ ಕಲ್ಪಿಸಲಾಗಿತ್ತು. ಭಾರೀ ಭದ್ರತೆಯೊಂದಿಗೆ ವಿಮಾನ ನಿಲ್ದಾಣದಿಂದ ಹೊರಬಂದ ಆಟಗಾರರನ್ನ ಕಂಡ ಕೂಡಲೇ ಅಭಿಮಾನಿಗಳು ಆರ್ಸಿಬಿ.. ಆರ್ಸಿಬಿ.. ಎಂದು ಜಯಘೋಷ ಕೂಗುವ ಮೂಲಕ ಆಟಗಾರರನ್ನ ಸ್ವಾಗತಿಸಿಕೊಂಡರು. ಇದನ್ನೂ ಓದಿ: 17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್ಸಿಬಿ ‘ರಾಯಲ್’ ಎಂಟ್ರಿ
ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಎಲ್ಲಾ ಆಟಗಾರರು ಆಗಮನವಾಗಿದ್ದು, ಆಟಗಾರರನ್ನ ಕಂಡು ಫ್ಯಾನ್ಸ್ ಸಖತ್ ಖುಷಿಪಟ್ಟರು. ಇನ್ನೂ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ವಿರುದ್ಧ ಆರ್ಸಿಬಿ ಪಂದ್ಯ ಆಡಲಿದೆ. ಇದನ್ನೂ ಓದಿ: ಚೆನ್ನೈ ವಿರುದ್ಧ ಗೆದ್ದ ಆರ್ಸಿಬಿಗೆ ವಿಜಯ್ ಮಲ್ಯಾ ವಿಶ್
ನಿನ್ನೆ ಚೆಪಾಕ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಬರೋಬ್ಬರಿ 17 ವರ್ಷಗಳ ಬಳಿಕ ಸಿಎಸ್ಕೆ ವಿರುದ್ಧ ಆರ್ಸಿಬಿ ಗೆದ್ದು ಬೀಗಿತು. ಆ ಮೂಲಕ ಐಪಿಎಲ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.