ಚಾಮರಾಜನಗರ: ಐಪಿಎಲ್ (IPL 2025) ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಆರ್ಸಿಬಿ (RCB) ಕಪ್ ಗೆಲ್ಲಲೆಂದು ಅಭಿಮಾನಿಗಳು ವಿಶೇಷ, ವಿಭಿನ್ನವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಅಭಿಮಾನಿಯೊಬ್ಬ ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ಮುಡಿ ಕೊಟ್ಟು ಆರ್ಸಿಬಿ ಜಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಾನು ಬೆಂಗಳೂರಿನ ಅಳಿಯ, ಗೆದ್ದು ಬಾ ಆರ್ಸಿಬಿ: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ವಿಶ್
ಮೈಸೂರಿನ ಶಶಿಕುಮಾರ್ ಎಂಬವರು ಮಹದೇಶ್ವರನಿಗೆ ಮುಡಿ ಕೊಟ್ಟಿದ್ದು, ಆರ್ಸಿಬಿ ಜೆರ್ಸಿ ಹಿಡಿದು ಮಹದೇಶ್ವರನಿಗೆ ಇಡುಗಾಯಿ ಒಡೆದಿದ್ದಾರೆ. ಅಯ್ಯಪ್ಪನ ದೇಗುಲಕ್ಕೆ 18 ಮೆಟ್ಟಿಲು, ಈ ಬಾರಿ ಸೀಸನ್ 18 ಹಾಗೂ ವಿರಾಟ್ ಜೆರ್ಸಿ ನಂಬರ್ ಕೂಡ 18. ಅದೇ ರೀತಿ 18 ರ ಕಪ್ ಕೂಡ ನಮ್ಮದೇ ಎಂದು ಶಶಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಟ್ರೈಲರ್ ಅಷ್ಟೇ, ಆರ್ಸಿಬಿ ಗೆದ್ದರೆ ಹೋಮ-ಹವನ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಅಹಮದಾಬಾದ್ನಲ್ಲಿ ಇಂದು ಐಪಿಎಲ್ 2025ರ ಟ್ರೋಫಿಗಾಗಿ ಪಂಜಾಬ್ ವಿರುದ್ಧ ಆರ್ಸಿಬಿ ಸೆಣಸಲಿದೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೂ ಒಂದೇ ಒಂದು ಕಪ್ ಗೆದ್ದಿಲ್ಲ. ಈ ದಿನದ ಪಂದ್ಯ ಇಬ್ಬರಿಗೂ ಐತಿಹಾಸಿಕ ಮ್ಯಾಚ್ ಆಗಿದೆ. ಇದನ್ನೂ ಓದಿ: ಆರ್ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ