ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ಕದನಕ್ಕೆ ಅಭಿಮಾನಿಗಳು ಕಾದು ಕಳಿತು ನಿರಾಸೆ ಅನುಭವಿಸಿದ್ರು. ಆದರೆ ಈ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಕೋಚ್ ರವಿಶಾಸ್ತ್ರಿ ಅವರು ಅಭಿಮಾನಿಗಳಿಗೆ ಧೋನಿ ಜೆರ್ಸಿ ತೋರಿಸಿದ್ದಾರೆ.
ನಾಟಿಂಗ್ ಹ್ಯಾಮ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬದ್ಧ ಅಭಿಮಾನಿಗಳು ಮಳೆಯಿಂದ ಟಾಸ್ ತಡವಾದ ಕಾರಣ ಮೊದಲು ಕಾದು ಕಳಿತ್ತಿದ್ದರು. ಆದರೆ ಮಳೆ ನಿಲ್ಲದ ಕಾರಣ ಪಂದ್ಯ ರದ್ದಾಗಿತ್ತು. ಈ ವೇಳೆ ಅಭಿಮಾನಿಗಳು ಧೋನಿ ಧೋನಿ ಎಂದು ಕೂಗಿದ್ದಾರೆ. ಇತ್ತ ಆಟಗಾರರ ಕೊಠಡಿಯ ಬಾಲ್ಕನಿಗೆ ಬಂದ ಕೋಚ್ ರವಿಶಾಸ್ತ್ರಿ ಅವರು ಧೋನಿ ಜೆರ್ಸಿ ತೋರಿಸಿದ್ದರು.
ಕೋಚ್ ಜೆರ್ಸಿ ತೋರಿಸಿದ ಸಂದರ್ಭದಲ್ಲಿ ತಂಡದ ಇತರೇ ಎಲ್ಲಾ ಆಟಗಾರರು ಹತ್ತಿರದಲ್ಲೇ ಇದ್ದರು ಕೂಡ ಧೋನಿ ಎಲ್ಲಿಗೆ ತೆರಳಿದ್ದರು ಎಂಬುವುದು ತಿಳಿದು ಬಂದಿಲ್ಲ. ಆದರೆ ಆ ಬಳಿಕ ಧೋನಿ ಬಾಲ್ಕನಿಗೆ ಬಂದಿದ್ದರು, ಧೋನಿ ಕಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ. ಇತ್ತ ಪಂದ್ಯ ರದ್ದಾಗಿದ್ದ ಕಾರಣ ಎರಡು ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮಳೆಯಿಂದ ಕೊಚ್ಚಿ ಹೋದ 4ನೇ ಪಂದ್ಯ ಇದಾಗಿದೆ. ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ನಂ. 1 ಪಟ್ಟ ಪಡೆದಿದ್ದು, ಟೀಂ ಇಂಡಿಯಾ 5 ಅಂಕ ಪಡೆದು 3ನೇ ಸ್ಥಾನ ಪಡೆದಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ನಾಯಕ ಕೊಹ್ಲಿ, ಮಳೆಯಿಂದ ಪಂದ್ಯ ರದ್ದಾಗಿದ್ದು, ಟೂರ್ನಿಯ ಆರಂಭದಲ್ಲೇ ಈ ರೀತಿ ಆಗಿದ್ದು ದುರದೃಷ್ಟಕರ. ಹವಾಮಾನವನ್ನು ನಮ್ಮಿಂದ ತಡೆಯಲು ಸಾಧ್ಯವಿಲ್ಲ ಎಂದರು.
https://twitter.com/msdfansofficial/status/1139227096075476992