ಬೆಂಗಳೂರು: ವಿಧಾನಸೌಧದಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಹಿಡಿಯಲು ಸರ್ಕಾರ ವಾರ್ಷಿಕ 15ರಿಂದ 18 ಲಕ್ಷ ರೂ. ಪ್ರತ್ಯೇಕ ಅನುದಾನ ನೀಡಲು ನಿರ್ಧರಿಸಿದೆಯಂತೆ. ಅಷ್ಟೇ ಅಲ್ಲ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸಲಾಗಿದೆ.
ಇಲಿ ಶಿಕಾರಿಗೆ ಮಾಡಿರೋ ವೆಚ್ಚ:
ಇಲಿಗಳ ಶಿಕಾರಿಗೆ 2013-14ರಲ್ಲಿ 3.49 ಲಕ್ಷ ರೂ. ವೆಚ್ಚ ಮಾಡಿದರೆ. 2014-15ರಲ್ಲಿ ಸುಮಾರು 4.96 ಲಕ್ಷ ರೂ., 2015-16ನೇ ಸಾಲಿನಲ್ಲಿ 4.96 ಲಕ್ಷ ರೂ., ಈ ವರ್ಷ ಉಗ್ರಾಣ ಇಲಾಖೆಗೆ 15ರಿಂದ 18 ಲಕ್ಷ ರೂ. ಅನುದಾನ ನೀಡಲು ತೀರ್ಮಾನ ಮಾಡಲಾಗಿದ್ದು, 5 ವರ್ಷಗಳಲ್ಲಿ ಒಟ್ಟು 25 ಲಕ್ಷ ರೂ. ಖರ್ಚು ಮಾಡಲಾಗಿದೆ.
ಆಪರೇಷನ್ ಮೂಷಿಕ ನಡೆಸೋದಕ್ಕೆ ಈಗ ವಿಧಾನಸೌಧದಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ಒಟ್ಟು 900 ಸರ್ಕಾರಿ ಕೊಠಡಿಯಲ್ಲಿ ಮೈಕು -ಡಾಕ್ಯುಮೆಂಟುಗಳನ್ನು ಹರಿದುಹಾಕುವ ಇಲಿಗಳ ಉಪಟಳಕ್ಕೆ ಎಲ್ಲರೂ ಕಂಗಾಲಾಗಿದ್ದಾರೆ. ವಿಧಾನಸೌಧ ಅಷ್ಟೇ ಅಲ್ಲದೆ ವಿಕಾಸಸೌಧ ಸೇರಿದಂತೆ ಬಹುಮಹಡಿ ಕಟ್ಟಡದಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಅವುಗಳನ್ನು ಹಿಡಿಯುವ ಕೆಲಸವನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸಲು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಖಾಸಗಿ ಏಜೆನ್ಸಿಗಳಿಂದ ಕಾರ್ಯ ಪೂರ್ಣವಾಗಿಲ್ಲ. ಈಗ ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಉಗ್ರಾಣ ಇಲಾಖೆ ಅಧಿಕಾರಿಗಳು ನಮ್ಮ ಕೈಯಲ್ಲಿ ಈ ಕೆಲಸ ಆಗುವುದಿಲ್ಲ ಬಿಟ್ಟು ಬಿಡಿ ಅಂತಾ ಬೇಡಿಕೊಂಡಿದ್ದಾರಂತೆ. ಇದಕ್ಕೆ ಕ್ಯಾರೆ ಎನ್ನದ ಸರ್ಕಾರ ಜವಾಬ್ದಾರಿ ನೀಡಿ, ಪ್ರತ್ಯೇಕ ಅನುದಾನ ನೀಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv