ಬಳ್ಳಾರಿ : ಸಂಡೂರು ತಾಲೂಕಿನ ಯಶವಂತನಗರದ ಗುರು ಸಿದ್ದರಾಮೇಶ್ವರ ಮಹಾಶಿವಯೋಗಿಗಳ ರಥೋತ್ಸವ ಅದ್ಧೂರಿಯಾಗಿ ಸಂಭ್ರಮ ಸಡಗರದಿಂದ ಜರುಗಿತು.
ಯಶವಂತನಗರದ ಸಿದ್ದರಾಮೇಶ್ವರ ಮಠದ ಮಹಾರಥೋತ್ಸವ ಪ್ರತಿ ವರ್ಷ ಜ್ಯೇಷ್ಠ ಶುದ್ಧ ದಶಮಿಯಂದು ಅದ್ದೂರಿಯಾಗಿ ಜರುಗುತ್ತದೆ. ಮೈಸೂರು ಸಂಸ್ಥಾನ ಮಠಕ್ಕೆ ಸುತ್ತೂರ ಮಠ ಹೇಗೆ ಪರಂಪರೆಯಾಗಿದೆಯೋ ಯಶವಂತನಗರದ ಈ ಗುರುಸಿದ್ದರಾಮೇಶ್ವರ ಮಠ ಸಹ ಸಂಡೂರು ಮಹಾರಾಜರ ಪರಂಪರೆಯಾಗಿ ನಡೆದುಕೊಂಡು ಬಂದಿದೆ.
ಸಿದ್ದರಾಮೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ನಾಡಿನ ಸಾವಿರಾರು ಭಕ್ತರು ಪಾಲ್ಗೊಂಡು ರಥವನ್ನು ಎಳೆದರು. ಈ ರಥೋತ್ಸವದಲ್ಲಿ ಜಾತಿ ಮತ ಮರೆತು ಎಲ್ಲ ಸಮಾಜದ ಬಾಂಧವರು ಒಂದಾಗಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷವಾಗಿದೆ.