ಬೆಂಗಳೂರು: ಎರಡು ದಿನಗಳಿಂದ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಬಾರ್ಬಿ ಗರ್ಲ್ ನಿವೇದಿತಾ ಗೌಡ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಇಂದು ಚಂದನ್ ತಮ್ಮ ಮದುವೆ ಬಗ್ಗೆ ಎದ್ದಿರುವ ಎಲ್ಲ ಗಾಸಿಪ್ ಗಳಿಗೂ ಸ್ಪಷ್ಟನೆ ನೀಡಿದ್ದಾರೆ.
ನಗರದ ಶೇಷಾದ್ರಿಪುರಂ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಂದನ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ನಾನು ಒಂದು ಗೋಲ್ ರೀಚ್ ಮಾಡಬೇಕು ಅಂತಾ ಐದು ವರ್ಷ ಪ್ಲಾನ್ ಮಾಡಿಕೊಂಡಿದ್ದೇನೆ. ನಾನು ಗುರಿಯನ್ನು ತಲುಪುತ್ತಿದ್ದೇನೆ ಅಂತಾ ಅನಿಸಿದಾಗ ಮದುವೆ ಆಗಲಿದ್ದಾನೆ ಎಂದು ಸ್ಪಷ್ಟಪಡಿಸಿದರು.
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಜೀವನ ಸಾಕಷ್ಟು ಬದಲಾಗಿದೆ. ಜನರ ಪ್ರೀತಿ ತುಂಬಾನೆ ಸಿಕ್ಕಿದೆ. ಇಷ್ಟು ವರ್ಷಗಳಿಂದ ನಾನು ಪಟ್ಟ ಪರಿಶ್ರಮಕ್ಕೆ ಇಂದು ಫಲ ಕೊಡುತ್ತಿದೆ. ಕರ್ನಾಟಕ ಜನತೆಯ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ಕರ್ನಾಟಕದ ಎಲ್ಲ ಜನತೆಗೂ ನಾನು ಪಬ್ಲಿಕ್ ಟಿವಿ ಮೂಲಕ ಧನ್ಯವಾದ ಹೇಳಿದರು.
ಇದೇ ವೇಳೆ ಮದುವೆ ಆಗೋದರ ಬಗ್ಗೆ ಪ್ರಶ್ನೆಗೆ, ಕಾಲೇಜು ಆವರಣದಲ್ಲಿ ನೆರದಿದ್ದ ವಿದ್ಯಾರ್ಥಿಗಳಿಗೆ ನಾನು ಈಗಲೇ ಮದುವೆ ಆಗಬೇಕಾ ಎಂದು ಕೇಳಿದ್ರು. ಆವರಣದಲ್ಲಿ ನೆರದಿದ್ದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಬೇಡ ಬೇಡ ಎಂದು ಹೇಳಿದ್ದಕ್ಕೆ, ಗುರಿ ತಲುಪಿದ ಬಳಿಕ ನನ್ನ ಕಲ್ಯಾಣ ನಡೆಯಲಿದೆ ಅಂತಾ ಹೇಳಿದರು.