Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 9 ಬಾಲಕಿಯರನ್ನು ರೇಪ್‍ಗೈದು ಕೊಲೆ ಮಾಡಿದ್ದ ಆರೋಪಿಯ ಬಂಧನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | 9 ಬಾಲಕಿಯರನ್ನು ರೇಪ್‍ಗೈದು ಕೊಲೆ ಮಾಡಿದ್ದ ಆರೋಪಿಯ ಬಂಧನ

Crime

9 ಬಾಲಕಿಯರನ್ನು ರೇಪ್‍ಗೈದು ಕೊಲೆ ಮಾಡಿದ್ದ ಆರೋಪಿಯ ಬಂಧನ

Public TV
Last updated: November 21, 2018 5:54 pm
Public TV
Share
4 Min Read
gurugaon murder
SHARE

-ವಿಚಾರಣೆಯಲ್ಲಿ ಬಿಚ್ಚಿಟ್ಟಿದ್ದು ಭಯಾನಕ ರಹಸ್ಯ

ದೆಹಲಿ: ಗುರುಗ್ರಾಮ ನಗರದ ಸೆಕ್ಟೇರ್ 66ರಲ್ಲಿ ಮೂರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾನೆ.

ಪೊಲೀಸ್ ವಿಚಾರಣೆಯಲ್ಲಿ ಬಂಧಿತ ಆರೋಪಿ, ಇದೂವರೆಗೂ 9 ಬಾಲಕಿಯರನ್ನು ಅತ್ಯಾಚಾರಗೊಳಿಸಿ ಕೊಲೆ ಮಾಡಿದ್ದೇನೆ ಎಂಬ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ 3 ರಿಂದ 8 ವರ್ಷದ ಬಾಲಕಿಯರನ್ನು ಟಾರ್ಗೆಟ್ ಮಾಡುತ್ತಿದ್ದನು ಎಂಬುವುದು ತಿಳಿದು ಬಂದಿದೆ. ಗುರುಗ್ರಾಮದಲ್ಲಿ 3, ಗ್ವಾಲಿಯರ್ 1, ಝಾನ್ಸಿ 1 ಮತ್ತು ದೆಹಲಿಯಲ್ಲಿ 4 ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ಈಗಾಗಲೇ ದೆಹಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ.

gurugaon murder a

ನವೆಂಬರ್ 12ರಂದು ಸೆಕ್ಟರ್ 66ರಲ್ಲಿ ಮೂರು ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಈ ಬಾಲಕಿ ನವೆಂಬರ್ 11ರಂದು ಮನೆಯಿಂದ ಕಾಣೆಯಾಗಿದ್ದಳು. ಬಾಲಕಿಯನ್ನು ಅತ್ಯಾಚಾರಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಬಿಸಾಡಲಾಗಿತ್ತು. ಬಾಲಕಿಯ ಪೋಷಕರು ಝುಗ್ಗಿ ಏರಿಯಾದಲ್ಲಿ ವಾಸವಾಗಿರುವ ಸುನಿಲ್ ಎಂಬವನೇ ಈ ಕೃತ್ಯ ಎಸಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಪ್ರಕರಣ ಸಂಬಂಧ ಪೊಲೀಸರು ಸುನೀಲ್ ನ ತಾಯಿ ಮತ್ತು ಸೋದರಿ ಇಂದ ಮಾಹಿತಿ ಕಲೆ ಹಾಕಿದ್ದಾರೆ. ಕೊನೆಗೆ ಪೊಲೀಸರು ಝಾಂಸಿಯ ಮಗರಪುರ ಎಂಬ ಗ್ರಾಮದಲ್ಲಿ ಆರೋಪಿ ಸುನೀಲನ ಬಂಧನವಾಗಿದೆ.

ಸತ್ಯ ಕಕ್ಕಿದ ಕಾಮುಕ:
ಅನುಮಾನಾಸ್ಪದವಾಗಿ ಬಂಧಿತನಾಗಿದ್ದ ಸುನೀಲ್ ನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತಾನು ಹಿಂದೆ ಮಾಡಿದ್ದ ಕೃತ್ಯಗಳ ಬಗ್ಗೆಯೂ ಮಾಹಿತಿಯನ್ನು ಹೊರ ಹಾಕಿದ್ದಾನೆ. ಬಾಲಕಿಯರಿಗೆ ಚಾಕಲೇಟ್ ನೀಡುತ್ತೇನೆ ಎಂದು ಕರೆದುಕೊಂಡು ಹೋಗಿ ಮೊದಲಿಗೆ ಅವರ ಕಾಲುಗಳನ್ನು ಊನಗೊಳಿಸುತ್ತಿದ್ದ. ಬಾಲಕಿಯರು ಓಡಿ ಹೋಗಲು ನಿಸ್ಸಾಹಾಯಕರಾದ ಅತ್ಯಾಚಾರ ಎಸಗುತ್ತಿದ್ದನು. ನಂತರ ಕಲ್ಲಿನಿಂದ ಮುಖವನ್ನು ಜಜ್ಜಿ ಕೊಲೆಗೈದು ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗುತ್ತಿದ್ದನು. ಕೊನೆಗೆ ಮದ್ಯ ಸೇವಿಸಿ ಎಂಜಾಯ್ ಮಾಡುತ್ತಿದ್ದನು.

Master 1

ಯಾರಿವನು ಸುನಿಲ್?
8 ವರ್ಷಗಳ ಹಿಂದೆ ಸುನಿಲ್ ತಂದೆ ಸಾವನ್ನಪ್ಪುತ್ತಾರೆ. ಇದಾದ ಬಳಿಕ ಮನೆಯಿಂದ ಹೊರ ಉಳಿದ ಗುರುದ್ವಾರ, ಮಂದಿರ, ಮಠಗಳಲ್ಲಿ ಊಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಹೆಚ್ಚಾಗಿ ಮನೆಯಿಂದ ಹೊರಗೆ ಉಳಿದುಕೊಳ್ಳುತ್ತಿದ್ದ ಸುನಿಲ್ ಹಣದ ಅವಶ್ಯಕತೆಯಿದ್ದಾಗ ಮಾತ್ರ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ಕಳೆದ ಎರಡು ವರ್ಷಗಳಲ್ಲಿ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಎಸೆಗಿ ಕೊಲೆ ಮಾಡಲು ಆರಂಭಿಸಿದ್ದ ಎಂಬುವುದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ದೆಹಲಿ ಅಪರಾಧ ವಿಭಾಗದ ಡಿಸಿಪಿ ಸುಮಿತ್ ಕುಮಾರ್, ನವೆಂಬರ್ 11ರನ್ನು ಬಾಲಕಿತಯನ್ನು ಕೊಲೆಗೈದ ಬಳಿಕ ಆರೋಪಿ ಸುನಿಲ್, ಗುರುಗ್ರಾಮದಲ್ಲಿರುವ ಗುರುದ್ವಾರದಲ್ಲಿ ಊಟ ಮಾಡಿ, ಕಮಲಾ ನೆಹರು ಪಾರ್ಕ್ ನಲ್ಲಿ ಮಲಗಿದ್ದಾನೆ. ನವೆಂಬರ್ 12ರ ಬೆಳಗ್ಗೆ ರೈಲಿನ ಮುಖಾಂತರ ದೆಹಲಿ ತಲುಪಿದ್ದಾನೆ. ನವೆಂಬರ್ 13ರವರೆಗೆ ದೆಹಲಿ ಸುತ್ತಾಡಿ, ನಿಜಾಮುದ್ದೀನ್ ರೈಲ್ವೇ ನಿಲ್ದಾಣದ ಸೇತುವೆಯ ಕೆಳಗೆ ಮಲಗಿದ್ದಾನೆ. ನವೆಂಬರ್ 14 ಝಾನ್ಸಿ ನಗರಕ್ಕೆ ತೆರಳುವ ರೈಲನ್ನು ಹತ್ತಿದ್ದಾನೆ. ಆ ಒಂದು ದಿನ ಝಾನ್ಸಿಯಲ್ಲಿ ತಿರುಗಾಡಿದ್ದಾನೆ. ಖಚಿತ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

थाना सेक्टर-65 के एरिया में 3 साल की बच्ची की हत्या के केस को गुरुग्राम पुलिस ने गंभीरता से लिया है। इस मामले में आरोपी को जल्द पकड़ने व केस का जल्द निपटारा करने के उद्देश्य से श्री के0के0 राव IPS, पुलिस आयुक्त गुरुग्राम द्वारा एक SIT का गठन किया गया है। https://t.co/Uzb0MP5zBL

— Gurugram Police (@gurgaonpolice) November 13, 2018

ಕೊಲೆಗಳಲ್ಲಿ ಸಾಮ್ಯತೆ:
ಸುನಿಲ್ ಮಾಡಿದ ಒಂಭತ್ತು ಕೊಲೆಗಳಲ್ಲಿ ಒಂದು ಅಂಶ ಸಾಮ್ಯತೆ ಎಲ್ಲ ಪ್ರಕರಣಗಳಲ್ಲಿ ದಾಖಲಾಗಿತ್ತು. ಬಾಲಕಿಯರನ್ನು ಅಪಹರಿಸಿದ ಬಳಿಕ ಓಡಿ ಹೋಗಬಾರದೆಂದು ಮೊದಲಿಗೆ ಪುಟ್ಟ ಕಂದಮ್ಮಗಳ ಕಾಲುಗಳನ್ನೇ ಊನಗೊಳಿಸುತ್ತಿದ್ದನು. 2016ರಲ್ಲಿ ಮೊದಲ ಬಾರಿಗೆ ಗುರುಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆಗೈದಿದ್ದ. ಬಳಿಕ ಬಾಲಕಿಯ ದೇಹವನ್ನು ನಗರದ ಓಮ್ಯಾಕ್ಸ್ ಮಾಲ್ ಹಿಂದೆ ಎಸೆದಿದ್ದನು. ಮೊದಲ ಘಟನೆಯ ಎರಡು ತಿಂಗಳ ನಂತರ ಅಂದ್ರೆ 2017 ಜನವರಿಯಲ್ಲಿ 5 ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದನು. ಹೀಗೆಯೇ ತನ್ನ ಕ್ರೌರ್ಯವನ್ನು ಮೆರೆಯುತ್ತಾ, ಗುರುಗ್ರಾಮದಲ್ಲಿ 3, ಗ್ವಾಲಿಯರ್ 1, ಝಾನ್ಸಿ 1 ಮತ್ತು ದೆಹಲಿಯಲ್ಲಿ 4, ಒಟ್ಟು 9 ಕಂದಮ್ಮಗಳ ಸಾವಿಗೆ ಕಾರಣನಾಗಿದ್ದಾನೆ.

ಪೊಲೀಸರಿಂದ ನಾನಾ ಕಸರತ್ತು:
ಸುನಿಲ್ ಕುಟುಂಬಸ್ಥರ ಹೇಳಿಕೆ ಪಡೆದಿದ್ದ, ಪೊಲೀಸರ ಆತನ ನಡವಳಿಕೆ ಮತ್ತು ವರ್ತನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಆತ ಹೆಚ್ಚಾಗಿ ಮಠ, ಮಂದಿರಗಳಲ್ಲಿ ನೀಡಲಾಗುವ ಉಚಿತ ಊಟವನ್ನು ಸೇವಿಸುತ್ತಾನೆ ಎಂಬ ವಿಚಾರ ತಿಳಿದಿತ್ತು. ಸುನಿಲ್ ಬಂಧನಕ್ಕಾಗಿಯೇ ಪೊಲೀಸರು ಗುರುಗ್ರಾಮದಲ್ಲಿ ಮಂಗಳವಾರ ಹನುಮಾನ್ ಮಂದಿರ, ಗುರುವಾರ ಸಾಯಿ ಮಂದಿರ ಮತ್ತು ಶನಿವಾರ ಶನಿ ದೇವಸ್ಥಾನದಲ್ಲಿ ಉಚಿತ ಊಟವನ್ನು ಏರ್ಪಡಿಸಿದ್ದರು. ಈ ಮೂರು ದಿನ ಪೊಲೀಸರು ಬರೋಬ್ಬರಿ 2 ಸಾವಿರಕ್ಕೂ ಅಧಿಕ ಜನರನ್ನು ಪರಿಶೀಲನೆ ನಡೆಸಿದ್ದರು. ಆದರೆ ಸುನಿಲ್ ಯಾವ ಊಟದ ಕಾರ್ಯಕ್ರಮಕ್ಕೂ ಹಾಜರಾಗಿರಲಿಲ್ಲ.

थाना सेक्टर-65 के एरिया में 3 साल की बच्ची की हत्या के केस को गुरुग्राम पुलिस ने गंभीरता से लिया है। इस मामले में आरोपी को जल्द पकड़ने व केस का जल्द निपटारा करने के उद्देश्य से श्री के0के0 राव IPS, पुलिस आयुक्त गुरुग्राम द्वारा एक SIT का गठन किया गया है। https://t.co/7eV7qXWPNo pic.twitter.com/vj06Hx29Yf

— Gurugram Police (@gurgaonpolice) November 13, 2018

ಆರೋಪಿ ಪತ್ತೆಯಾಗಿದ್ದು ಹೇಗೆ?
ಎಂಟು ಪ್ರಕರಣದಿಂದ ತಪ್ಪಿಸಿಕೊಂಡಿದ್ದ ಸುನಿಲ್ ನವೆಂಬರ್ 12ರಂದು ನಡೆದ ಕೊಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ, ಕೆಲ ಕೂಲಿ ಕಾರ್ಮಿಕರು ಗಮನಿಸಿದ್ದರು. ಈ ಕೂಲಿ ಕಾರ್ಮಿಕರು ಸುನಿಲ್ ಕುಟುಂಬಸ್ಥರು ವಾಸವಾಗಿದ್ದ ಸ್ಲಂನಲ್ಲಿಯೇ ಇದ್ದರು. ಹೀಗಾಗಿ ಕೆಲವರು ಆರೋಪಿಯನ್ನು ಮುಖ ಚಹರೆಯನ್ನು ಗುರುತು ಹಿಡಿದಿದ್ದರು. ಬಾಲಕಿ ಕಾಣೆಯಾಗಿದ್ದ ದಿನ ಆರೋಪಿ ಸೆಕ್ಟರ್ 66ರಲ್ಲಿ ಅನುಮಾನಾಸ್ಪದವಾಗಿ ತಿರುಗಾಡಿದ್ದು ಕೆಲ ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು.

पिछले सप्ताह सैक्टर-66 एरिया मे 3 वर्षीय बच्ची के साथ बलात्कार करने व उसकी हत्या करने के मामले का आरोपी गिरफ्तार।https://t.co/0k7yHbNid1 pic.twitter.com/6gIGpQUfqB

— Gurugram Police (@gurgaonpolice) November 20, 2018

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

TAGGED:arrestkidnapMurderpolicePublic TVrapeಅತ್ಯಾಚಾರಅಪಹರಣಕೊಲೆಪಬ್ಲಿಕ್ ಟಿವಿಪೊಲೀಸ್ಬಂಧನ
Share This Article
Facebook Whatsapp Whatsapp Telegram

Cinema news

Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema
Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories

You Might Also Like

subbareddy 1
Bengaluru City

ಬಾಗೇಪಲ್ಲಿ `ಕೈ’ ಶಾಸಕ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು – ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ 

Public TV
By Public TV
19 seconds ago
vinay kulkarni
Court

ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ – ಸುಪ್ರೀಂ ಕೋರ್ಟ್‌ನಿಂದ ಜಾಮೀನು ಮಂಜೂರು

Public TV
By Public TV
10 minutes ago
PM Modi Arvind Bellad
Bengaluru City

ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸುವಂತೆ ಮನವಿ – ಪ್ರಧಾನಿ ಮೋದಿ, ರಾಜ್ಯಪಾಲರಿಗೆ ಪತ್ರ ಬರೆದ ಅರವಿಂದ ಬೆಲ್ಲದ್‌

Public TV
By Public TV
19 minutes ago
Hatti Gold Mine 2
Districts

ಹಟ್ಟಿ ಚಿನ್ನದ ಗಣಿ ಮುಖ್ಯ ದ್ವಾರದ ಬಳಿ 15ಕ್ಕೂ ಹೆಚ್ಚು ಸ್ಫೋಟಕಗಳು ಪತ್ತೆ!

Public TV
By Public TV
37 minutes ago
ಸಾಂರ್ದಭಿಕ ಚಿತ್ರ
Bengaluru City

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ – ಅಕ್ರಮ ತಡೆಗೆ ಪರೀಕ್ಷಾ ಬೋರ್ಡ್ ಹದ್ದಿನ ಕಣ್ಣು

Public TV
By Public TV
44 minutes ago
Arvind Kejriwal Manish Sisodia
Latest

ಮದ್ಯನೀತಿ ಹಗರಣ ಕೇಸ್‌ನಲ್ಲಿ ಕೇಜ್ರಿವಾಲ್‌, ಸಿಸೋಡಿಯಾ ಕಳಂಕ ಮುಕ್ತ – ಕಣ್ಣೀರಿಟ್ಟ ಮಾಜಿ ಸಿಎಂ

Public TV
By Public TV
50 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?