ರಾಂಚಿ: ಹಾರ್ಮುಜ್ ಜಲಸಂಧಿ (Strait of Hormuz) ಬಳಿ ತೈಲ ಸಾಗಿಸುತ್ತಿದ್ದ ಹಡಗಿನಲ್ಲಿ ರಾಂಚಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಳಿ ತರಲು ಕೇಂದ್ರ ಮತ್ತು ಜಾರ್ಖಂಡ್ ಸರ್ಕಾರಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ರಾಂಚಿ (Ranchi) ಮೂಲದ ಕ್ಯಾಪ್ಟನ್ ರಾಕೇಶ್ ರಂಜನ್ ಮೃತ ವ್ಯಕ್ತಿ. ಫೆಬ್ರವರಿ 2 ರಂದು ಖಾಸಗಿ ಕಂಪನಿಯ ಒಡೆತನದ ‘ASP ಅವನಾ- RPSL-MUM-172’ ಹಡಗನ್ನು ಸೇರಿಕೊಂಡಿದ್ದರು. ರಂಜನ್ ಮಾರ್ಚ್ 18 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ LNG ಘಟಕ ದುರಸ್ತಿಗೆ 5 ವರ್ಷ ಬೇಕು!
ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಈ ಪ್ರದೇಶದಲ್ಲಿ ಹಡಗು ಸಂಚಾರ ಸ್ಥಗಿತಗೊಂಡ ನಂತರ, ಫೆಬ್ರವರಿ 28 ರಿಂದ ಹಾರ್ಮುಜ್ ಜಲಸಂಧಿಯಿಂದ ಸುಮಾರು 14 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ಹಡಗು ಸಿಲುಕಿಕೊಂಡಿತ್ತು.
ನನ್ನ ಸಹೋದರನ ಮೃತದೇಹವನ್ನು ಆದಷ್ಟು ಬೇಗ ವಾಪಸ್ ತರಲು ಸಹಾಯ ಮಾಡುವಂತೆ ನಾನು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ವಿನಂತಿಸುತ್ತೇನೆ. ಕಂಪನಿಯು ಅವರ ಹಣಕಾಸಿನ ಬಾಕಿ ಬಿಡುಗಡೆ ಮಾಡುವಲ್ಲಿ ಯಾವುದೇ ಅಡೆತಡೆ ಆಗಬಾರದು. ಸರ್ಕಾರವು ಈ ವಿಷಯವನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಅವರ ಹಿರಿಯ ಸಹೋದರ ಉಮೇಶ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದ ಫೈಟರ್ ಜೆಟ್ ಲ್ಯಾಂಡಿಂಗ್ ನಿರಾಕರಿಸಿ ನಮ್ಮದು ತಟಸ್ಥ ದೇಶ ಎಂದ ಶ್ರೀಲಂಕಾ
ಮೃತದೇಹವನ್ನು ಮರಳಿ ತರಲು ಸಹಾಯ ಕೋರಿ ಸಿಎಂ ಸೊರೇನ್ ಮತ್ತು ರಾಂಚಿ ಸಂಸದ ಸಂಜಯ್ ಸೇಠ್ ಅವರಿಗೆ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

