ನವದೆಹಲಿ: 10 ಸಾವಿರ ಕೋಟಿ ಬೆಲೆಬಾಳುವ ಪತಂಜಲಿ ಸಮೂಹಕ್ಕೆ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವುದನ್ನು ಬಾಬಾ ರಾಮ್ದೇವ್ ಮೊದಲ ಬಾರಿಗೆ ಬಹಿರಂಗವಾಗಿ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ರಾಮ್ದೇವ್ ಮಾತನಾಡುತ್ತಾ, ಪತಂಜಲಿ ಸಂಸ್ಥೆಯಲ್ಲಿ 500 ಜನ ಸಾಧುಗಳು ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರಾಧಿಕಾರಿಗಳನ್ನಾಗಿ ನೇಮಿಸಲು ಇವರಿಗೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಮುಂದಿನ 2 ವರ್ಷಗಳಲ್ಲಿ 1 ಲಕ್ಷ ಕೋಟಿಯಷ್ಟು ಸರಕು ಉತ್ಪಾದನಾ ಸಾಮಥ್ರ್ಯವನ್ನು ಹೊಂದಿದೆ. ಸದ್ಯ ಹರಿದ್ವಾರ ಘಟಕದಲ್ಲಿ 15 ಸಾವಿರ ಕೋಟಿ, ತೇಜ್ಪುರ್ನಲ್ಲಿ 25 ಸಾವಿರ ಕೋಟಿಯಷ್ಟು ಸರಕು ಉತ್ಪಾದನೆ ಮಾಡಲು ಸಾಮಥ್ರ್ಯ ಹೊಂದಿದ್ದೇವೆ ಎಂದರು.
ಈ ಹಿಂದೆ 1 ಲಕ್ಷ ಕೋಟಿ ಉತ್ಪನ್ನಗಳನ್ನು ಉತ್ಪಾದನೆ ಮಾಡಿ ಜನರಿಗೆ ನೀಡುತ್ತಿದ್ದೇವೆ. ತದನಂತರ ಶೇ.10ರಷ್ಟು ಅಂದರೆ 10 ಲಕ್ಷ ಕೋಟಿ ಉತ್ಪಾದನೆಯ ಗುರಿ ಹೊಂದಲು ಸಾಧ್ಯವಾಯಿತು. ಕಂಪನಿಯ ಬೆಳವಣಿಗೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ನೋಯ್ಡಾ, ನಾಗ್ಪುರ, ಇಂದೋರ್ ಮತ್ತು ಆಂಧ್ರಪ್ರದೇಶದಲ್ಲಿ 50 ಚಿಕ್ಕ ತಯಾರಿಕಾ ಘಟನಗಳನ್ನು ಸ್ಥಾಪಿಸಿ ತೈಲ, ಉಪ್ಪು ಸೇರಿದಂತೆ ಹಲವು ವಸ್ತುಗಳನ್ನು ತಯಾರಿಸುವ ಗುರಿ ಹೊಂದಿದ್ದೇವೆ ಎಂದರು.
ಸದ್ಯ ಪತಂಜಲಿ ಕಂಪನಿಯು ಆಯುರ್ವೇದ ವಸ್ತುಗಳ ತಯಾರಿಕೆಯಲ್ಲಿ ಹೆಸರು ವಾಸಿಯಾಗಿದ್ದು, ಫ್ಯಾಶನ್ ಹಾಗೂ ಯುವ ಸಮೂಹಕ್ಕೇ ಬೇಕಾದ ಜೀನ್ಸ್, ಪ್ಯಾಂಟ್, ಕುರ್ತಾ, ಶಟ್ರ್ಸ್, ಸೂಟಿಂಗ್ಸ್, ಸ್ಪೋಟ್ರ್ಸ್ ವೇರ್ ನ್ನು ತಯಾರಿಸುವ ಮೂಲಕ ಮುಂದಿನ ದಿನಗಳಲ್ಲಿ ಫ್ಯಾಶನ್ ಲೋಕಕ್ಕೆ ಕಾಲಿಡಲಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಹಾಗೂ ಹಣಕಾಸು ಇಲಾಖೆ ವಿಧಿಸಿರುವ ಜಿಎಸ್ಟಿ ತೆರಿಗೆಯನ್ನು ಹಸುವಿನ ತುಪ್ಪ ಹಾಗೂ ಬೆಣ್ಣೆಯ ಸರಕುಗಳಿಗೆ ಅನ್ವಯವಾಗಬೇಕು. ಬೆಣ್ಣೆ ಮತ್ತು ತುಪ್ಪದ ವಸ್ತುಗಳಲ್ಲಿ ಶೆ.5ರಷ್ಟು ತೆರಿಗೆ ಇದ್ದು ಶೇ.12ಕ್ಕೆ ಏರಿಸಬೇಕು ಎಂದು ಹಣಕಾಸು ಮಂತ್ರಿ ಅರುಣ್ ಜೆಟ್ಲಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ರಾಮ್ದೇವ್ ಹೇಳಿದರು.
ದೇಶದಲ್ಲಿ ಸ್ವದೇಶಿ ವಸ್ತುಗಳಿಗಿಂತ ವಿದೇಶಿ ವಸ್ತುಗಳ ಮಾರಾಟ ಹೆಚ್ಚಾಗಿದ್ದು ಚೀನಾ ಹಾಗೂ ವಿದೇಶಿ ಸರಕುಗಳನ್ನು ನಿಷೇಧಿಸಬೇಕು. ನಮ್ಮ ದೇಶದ ವಸ್ತುಗಳನ್ನು ಬಾಗ್ಲಾದೇಶ, ನೇಪಾಳ, ಪಾಕಿಸ್ತಾನ ಹಾಗೂ ಆಫ್ರಿಕಾ ರಾಷ್ಟ್ರಗಳಲ್ಲಿ ಮಾರಾಟ ಮಾಡಿದರೂ ನಾವು ಗಳಿಸುವ ಯಾವುದೇ ಲಾಭಗಳು ನಮ್ಮ ದೇಶಕ್ಕೆ ವಾಪಾಸ್ಸಾಗುವುದಿಲ್ಲ. ಹೀಗಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳು ರಫ್ತು ಆಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಕಂಪನಿಯು ರಾಜಕೀಯದ ಅಂಗವಾಗಿ ಇದೆಯೇ ಎಂಬ ಪ್ರಶ್ನೆಯನ್ನು ಅಲ್ಲೆಗೆಳೆದಿದ್ದಾರೆ. ನನ್ನ ಹಾಗೂ ಪತಂಜಲಿ ಯಾವುದೇ ರಾಜಕೀಯ ಸಂಪರ್ಕ ಹೊಂದಿಲ್ಲ. ಪತಂಜಲಿಯನ್ನು ಬೆಳೆಸಲು ನಾನು ಒಂದು ಸಿಂಗಲ್ ಪೈಸಾ ಕೂಡ ಮೋದಿ ಸರ್ಕಾರದಿಂದ ಪಡೆದಿಲ್ಲ. ಕೆಟ್ಟಜನರು ಯಾವುದೇ ರಾಜಕೀಯವಾಗಿ ಆಳ್ವಿಕೆ ಮಾಡಬಾರದು ಎಂಬ ಉದ್ದೇಶದಿಂದ ನಾನು ರಾಜಕೀಯದಲ್ಲಿ ಮಧ್ಯ ಪ್ರವೇಶ ಮಾಡಿದೆ. ನನ್ನ ವೃತ್ತಿ ರಾಜಕೀಯವಲ್ಲ. ನನ್ನ ಕಂಪನಿಗೆ ರಾಜಕೀಯ ಸಂಪರ್ಕಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ಹೇಳಿದರು.