ರಾಮನಗರ: ಟ್ರ್ಯಾಕ್ಟರ್ ಹಾಗೂ ಮೊಪೆಡ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಗಡಿ ತಾಲೂಕಿನ ಮಾಗಡಿ-ಕುಣಿಗಲ್ ಮುಖ್ಯರಸ್ತೆಯ ಹುಚ್ಚ ಹನುಮೇಗೌಡ ಪಾಳ್ಯದ ಬಳಿ ನಡೆದಿದೆ.
ಮಾಗಡಿ ತಾಲೂಕಿನ ಅಮೃತೂರಿನ ನಿವಾಸಿ ಗೋವಿಂದ (28) ಮೃತ ಯುವಕ. ಅಪಘಾತದಲ್ಲಿ ಮೊಪೆಡ್ನ ಹಿಂಬದಿ ಸವಾರ ಕೆಂಚನಹಳ್ಳಿಯ ರವಿಕುಮಾರ್(33) ಗಾಯಗೊಂಡಿದ್ದು, ಅವರನ್ನು ಸಮೀದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಜ್ಜಿ ಮನೆಗೆ ಹೋಗಿದ್ದ ಗೋವಿಂದ ಮಾಗಡಿಯಿಂದ ವಾಪಸ್ ಕೆಂಚನಹಳ್ಳಿ ಹೋಗುತ್ತಿದ್ದರು. ಈ ವೇಳೆ ಗೋವಿಂದ ಅವರ ನಿಯಂತ್ರಣ ತಪ್ಪಿದ ಮೊಪೆಡ್ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಗೋವಿಂದ ಅವರ ಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಮಾಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ನಂತರ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕಾಗಿ ಹುಡುಕಾಟ ನಡೆಸಿದ್ದಾರೆ.