ಪಾಟ್ನಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಶುರುವಾಗಲಿದ್ದು ಮುಂದಿನ ದೀಪಾವಳಿ ವೇಳೆಗೆ ಭಕ್ತರು ಭೇಟಿ ನೀಡಬಹುದು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ವಿರಾಟ್ ಹಿಂದೂಸ್ತಾನ್ ಸಂಗಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ಈ ವಾರದಲ್ಲಿ ದೀಪಾವಳಿ ಹಬ್ಬ ಇದ್ದು ಮುಂದಿನ ದೀಪಾವಳಿ ವೇಳೆಗೆ ರಾಮಮಂದಿರಕ್ಕೆ ಭಕ್ತರು ಭೇಟಿ ನೀಡಬಹುದು ಎಂದು ಅವರು ಹೇಳಿದರು.
ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಹಲವಾರು ಅಡೆತಡೆಗಳಿದ್ದು ಅವುಗಳನ್ನು ಬಗೆಹರಿಸಿರುವುದಾಗಿ ಅವರು ತಿಳಿಸಿದರು.
ರಾಮನ ಪತ್ನಿಯಾಗಿರುವ ಸೀತಾ ದೇವಿಯ ಜನ್ಮ ಸ್ಥಳವಾದ ಉತ್ತರ ಬಿಹಾರದ ಸೀತಾಮಾರ್ಹಿ ಎಂಬಲ್ಲಿ ವಿಶ್ವ ಹಿಂದೂ ಸಂಗಮದಿಂದ ದೇವಾಲಯವನ್ನು ನಿರ್ಮಾಣ ನಡೆಯಲಿದೆ ಎಂದು ತಿಳಿಸಿದರು.