ಸಂಸಾರದ ಜಂಜಾಟವೇ ಬೇಡವೆಂದು ದೇವರನ್ನೇ ವರಿಸಿದ ಚೆಲುವೆ

Public TV
2 Min Read
Rajasthan Women

ಜೈಪುರ: ಮದುವೆ (Marriage) ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ತಿರುವು ನೀಡುವ ಸಂಗತಿ. ಎಷ್ಟೋ ಹೆಣ್ಣುಮಕ್ಕಳು ತಮ್ಮಿಷ್ಟದ ಪ್ರೇಮಿಗಾಗಿ ನೂರಾರು ಕಿಲೋಮೀಟರ್ ಅರಸಿ ಹೋಗುತ್ತಾರೆ. ಆದ್ರೆ ಇಲ್ಲೊಬ್ಬಳು ವಿಷ್ಣು ದೇವರನ್ನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾಳೆ.

ಹೌದು, ರಾಜಸ್ಥಾನದ (Rajasthan) ಗೋವಿಂದಗಢ ಸಮೀಪದ ಪುಟ್ಟ ಗ್ರಾಮ ನರಸಿಂಘಪುರದ ನಿವಾಸಿ ಪೂಜಾ ಸಿಂಗ್ (30) ಸಂಸಾರದ ಜಂಟಾಟವೇ ಬೇಡವೆಂದು ದೇವರನ್ನೇ ಪತಿಯೆಂದು ಸ್ವೀಕಾರ ಮಾಡಿದ್ದಾಳೆ. ಇದನ್ನೂ ಓದಿ: ದೀಪಿಕಾ ಅಸಭ್ಯ ನೃತ್ಯ ಸಿನಿಮಾ ನೋಡದಂತೆ ಮಾಡಿದೆ – `ಪಠಾಣ್’ ಹೆಸರು ಬಳಕೆಗೆ ಮುಸ್ಲಿಂ ಧರ್ಮಗುರು ಆಕ್ಷೇಪ

MARRIAGE 1

ಬಾಲ್ಯದಿಂದಲೂ ದೇವರ ಮೇಲೆ ಅಪಾರ ಭಕ್ತಿ ಬೆಳೆಸಿಕೊಂಡಿದ್ದ ಪೂಜಾ, ದೇವರ ಶಕ್ತಿಯ ಮುಂದೆ ಎಲ್ಲವೂ ಶೂನ್ಯ ಎಂದು ವಾದಿಸುತ್ತಿದ್ದಳು. ಇಷ್ಟಾದರೂ ಮನೆಯವರು ಮದುವೆ ಆದ್ಮೇಲೆ ಸರಿ ಹೋಗ್ತಾಳೆ ಅಂತಾ ಸುಮ್ಮನಿದ್ದರು. 30 ವರ್ಷ ತುಂಬುತ್ತಿದ್ದಂತೆ ಮದುವೆಗೆ ಒತ್ತಾಯ ಮಾಡಿದ್ರೂ, ಸುತ್ತಮುತ್ತಲಿನವರೆಲ್ಲಾ `ನಿಮ್ಮ ಹುಡುಗಿ ದೊಡ್ಡವಳಾಗಿದ್ದಾಳೆ, ಚೆಲುವೆ ಇದ್ದಾಳೆ, ಒಳ್ಳೆಯ ವರ ಸಿಗುವುದು ಕಷ್ಟವೇ ಅಲ್ಲ, ಮದುವೆ ಮಾಡಿ’ ಕಿವಿ ಚುಚ್ಚತೊಡಗಿದರು. ಇದನ್ನೂ ಓದಿ: ಸಿಟಿ ರವಿಗಿಂತ ಹೆಚ್ಚಿನ ಹಿಂದೂ ನಾನು – ಕರಾವಳಿಯಲ್ಲಿ ಸಿದ್ದರಾಮಯ್ಯ ಹಿಂದೂ ಜಪ

marriage 2

ಯುವತಿ ಮಾತ್ರ ದೇವರನ್ನು ಬಿಟ್ಟು ಯಾರೂ ಬೇಡ ಎಂದು ಹಠ ಹಿಡಿದು ಕುಳಿತಿದ್ದಳು. ಮದುವೆ ಮಾಡಿಕೊಳ್ಳುವಂತೆ ಯಾರಾದ್ರೂ ಒತ್ತಾಯ ಮಾಡಿದ್ರೆ, ನೀವೆಲ್ಲ ಸಂಸಾರ ಮಾಡೋದನ್ನು ನಾನು ಕಂಡಿದ್ದೇನೆ. ದಿನಾ ಕಿತ್ತಾಟ. ಬೇಡದ್ದಕ್ಕೆಲ್ಲ ಪರದಾಟ. ಯಾರಿಗೆ ಬೇಕು ಆ ಬದುಕು? ಕಚ್ಚಾಟ ಮಾಡದ ಭಗವಂತನೇ ನನಗೆ ಸಾಕು’ ಎಂದು ಮನೆಯಿಂದ ಎದ್ದು ಹೋಗಿದ್ದಳು. ಮರು ದಿನ ಮದುವೆ ಸಾಮಗ್ರಿಗಳೊಂದಿಗೆ ಗ್ರಾಮದ ವಿಷ್ಣು ಮಂದಿರದಲ್ಲಿ ಪ್ರತ್ಯಕ್ಷ ಆದ ಪೂಜಾ, ಒಡ್ಡೋಲಗದ ಆಡಂಬರವಿಲ್ಲದೇ ಹಸೆ ಮಣೆ ಏರಿದಳು. ಆಕೆ ಈಗ ವಿಷ್ಣು ಪರಮಾತ್ಮನನ್ನು ಮದುವೆಯಾಗಿದ್ದಾಳೆ.

ಇದು ಮಾನಸಿಕ ಸಮಸ್ಯೆ. ಅತಿ ಭಾವುಕ ಭಕ್ತಿಯ ಪರಿಣಾಮ. ನಿಧಾನವಾಗಿ ತಿಳಿವಳಿಕೆ ತುಂಬಿ ವಾಸ್ತವಕ್ಕೆ ಕರೆತರಬೇಕು ಎಂದು ಮಾನಸಿಕ ತಜ್ಞರು ಸಲಹೆ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *