ಜೈಪುರ: ಬೆಳ್ಳಿಯ ಕಾಲ್ಗೆಜ್ಜೆ ಕದ್ದಿದ್ದಕ್ಕೆ 29 ವರ್ಷದ ಮಹಿಳೆಯೊಬ್ಬಳು ನಾಲ್ಕು ವರ್ಷದ ಬಾಲಕಿಯ ಕತ್ತು ಹಿಸುಕಿ ಹತ್ಯೆಗೈದು, ಆಕೆಯ ಶವವನ್ನು ಮನೆಯ ಹಿಂಬದಿಯ ಜಾಗದಲ್ಲಿ ಹೂತು ಹಾಕಿರುವ ಘಟನೆ ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಾಲಕಿ ಮಧ್ಯಪ್ರದೇಶದ ಸುವಾಸ್ರಾ ನಿವಾಸಿಯಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ರಾಜಸ್ಥಾನದ ಝಲಾವರ್ ಜಿಲ್ಲೆಯ ಮೆಹರ್ಪುರ ಗ್ರಾಮದಲ್ಲಿ ತನ್ನ ಅಜ್ಜಿ ಮನೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗಿದ್ದ ಯುವತಿಯ ಮೇಲೆ ಗ್ಯಾಂಗ್ರೇಪ್
ಶನಿವಾರ ಸಂಜೆ ಟೋಫಿ ಕೊಡಿಸಿಕೊಂಡು ಬಾಲಕಿಯನ್ನು ಮಹಿಳೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು. ಈ ವೇಳೆ ಕಾಲ್ಗೆಜ್ಜೆ ಕದ್ದಿದ್ದಕ್ಕೆ ಬಾಲಕಿಯ ತಲೆಗೆ ಕಲ್ಲಿನಿಂದ ಹೊಡೆದು ನಂತರ ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ ಕಾಲ್ಗೆಜ್ಜೆ ತೆಗೆದುಕೊಂಡು ಬಾಲಕಿ ಶವವನ್ನು ಮನೆಯ ಹಿಂಭಾಗದಲ್ಲಿದ್ದ ಜಾಗದಲ್ಲಿ ಹೂತು ಹಾಕಿದ್ದಾಳೆ.
ಮತ್ತೊಂಡೆದೆ ಬಾಲಕಿಯ ಕುಟುಂಬಸ್ಥರು ಆಕೆ ಕಾಣಿಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ತನಿಖೆ ಆರಂಭಿಸಿದ ಪೊಲೀಸರು ನೆರೆಮನೆಯಲ್ಲಿದ್ದ ಮಹಿಳೆಯನ್ನು ಬಂಧಿಸಿ, ಶವವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕುಣಿಗಲ್ನಲ್ಲಿ ಭೀಕರ ಅಪಘಾತ- ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಸಾವು
ಆರೋಪಿಯನ್ನು ತರುಣಾ ಎಂದು ಗುರುತಿಸಲಾಗಿದ್ದು, ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಇದೀಗ ಆಕೆಯ ಬಳಿ ಇದ್ದ ಕಾಲ್ಗೆಜ್ಜೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭವಾನಿಮಂಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಸಿಂಗ್ ಹೇಳಿದ್ದಾರೆ.