Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

7 ಪುತ್ರರಿರೋ ದಂಪತಿಗೆ ಅನಾಥ ಹೆಣ್ಣುಮಗುವನ್ನ ಇಟ್ಕೊಳ್ಳೊ ಆಸೆ- ಆದ್ರೆ ಸರ್ಕಾರ ಬಿಡ್ತಿಲ್ಲ

Public TV
Last updated: September 26, 2017 11:42 am
Public TV
Share
2 Min Read
rajasthan baby
SHARE

ಜೈಪುರ: 7 ಗಂಡು ಮಕ್ಕಳನ್ನ ಹೊಂದಿರೋ ರಾಜಸ್ಥಾನದ ದಂಪತಿ ತಮಗೆ ಸಿಕ್ಕ ಅನಾಥ ಹೆಣ್ಣುಮಗುವನ್ನ ಸಾಕಲು ಬಯಸಿದ್ದು ಇದಕ್ಕೆ ಇಲ್ಲಿನ ಸರ್ಕಾರ ಅಡ್ಡಿಪಡಿಸಿದೆ.

ತುಂಬಾ ವರ್ಷಗಳಿಂದ ಒಂದು ಹೆಣ್ಣು ಮಗುವಿಗಾಗಿ ಹಂಬಲಿಸಿದ್ದ ಧೋಲ್‍ಪುರ್‍ನ ರೈತ ಲೀಲಾಧರ್ ಕುಶ್ವಾಹಾ ಹಾಗೂ ಪತ್ನಿ ಸುಖ್‍ದೇವಿಗೆ ಕಳೆದ ವಾರ ಅನಾಥ ಹೆಣ್ಣುಮಗುವೊಂದು ಸಿಕ್ಕಿತ್ತು. ತಮ್ಮ ಪ್ರಾರ್ಥನೆಗೆ ಫಲ ಸಿಕ್ಕಿತು ಎಂದು ದಂಪತಿ ಅಂದುಕೊಂಡಿದ್ರು. ಆದ್ರೆ ಅವರ ಸಂತೋಷ ಬಹಳ ಕಾಲ ಉಳಿಯಲಿಲ್ಲ. ದಂಪತಿ ಮಗುವನ್ನ ಇಟ್ಟುಕೊಳ್ಳುವಂತಿಲ್ಲ ಎಂದು ಸರ್ಕಾರ ಹೇಳಿದ್ದು, ಮಗುವನ್ನು ಹಿಂದಿರುಗಿಸದಿದ್ರೆ ಕಾನೂನು ಕ್ರಮ ಕೈಗೊಳ್ಳೊದಾಗಿ ಎಚ್ಚರಿಕೆ ನೀಡಿದೆ.

ದತ್ತು ಪಡೆಯಲು ಕಾನೂನು ಪ್ರಕ್ರಿಯೆ ಇದೆ. ಅನಾಥ ಮಕ್ಕಳನ್ನ ಯಾರೂ ಕೂಡ ಹಾಗೇ ಇಟ್ಟುಕೊಳ್ಳುವಂತಿಲ್ಲ ಎಂದು ಧೋಲ್‍ಪುರ್‍ನ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಡಾ ನರೇಶ್ ಶರ್ಮಾ ಹೇಳಿದ್ದಾರೆ. ಮಂಗಳವಾರದೊಳಗಾಗಿ ಮಗುವನ್ನ ತಮಗೆ ಒಪ್ಪಿಸಬೇಕೆಂದು ಧೋಲ್‍ಪುರ್ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿಜೇಂದ್ರ ಪಾರ್ಮರ್ ಪೊಲೀಸರಿಗೆ ಸೂಚಿಸಿದ್ದಾರೆ.

ತಮ್ಮ ಮಗಳಂತೆ ಭಾವಿಸಿದ್ದ ಮಗುವನ್ನ ಬಲವಂತವಾಗಿ ಪೊಲೀಸರು ತಮ್ಮಿಂದ ಬೇರ್ಪಡಿಸುತ್ತಿರುವುದಕ್ಕೆ ಈಗ ದಂಪತಿ ಕಂಗಾಲಾಗಿದ್ದಾರೆ. ದಂಪತಿಗೆ ಈ ಮಗು ಅವರ ತೋಟದ ಬಳಿ ಸಿಕ್ಕಿತ್ತು. ದಂಪತಿಗೆ ಕಿರಿಯ ಮಗ ಹುಟ್ಟಿದ ಎರಡು ದಿನಗಳ ನಂತರವಷ್ಟೇ ಹೆಣ್ಣುಮಗುವನ್ನ ಮನೆಗೆ ತಂದಿದ್ದರು. ಅಂದಿನಿಂದ ಸುಖ್ ದೇವಿ ಎರಡೂ ಮಕ್ಕಳಿಗೆ ಎದೆಹಾಲು ನೀಡುತ್ತಿದ್ದರು.

rajasthan baby 1

ಇದು ಸರಿಯಲ್ಲ. ದೇವಿ ದುರ್ಗಾ ನಮ್ಮ ಪ್ರಾರ್ಥನೆ ಈಡೇರಿಸಿದದ್ದಾಳೆ. ಮಗುವನ್ನ ಕಳಿಸುವ ಪ್ರಶ್ನೆಯೇ ಇಲ್ಲ ಎಂದು ಸುಖ್ ದೇವಿ ಹೇಳಿದ್ದಾರೆ. ರೈತ ಕುಶ್ವಾಹಾ 1.6 ಎಕರೆ ಭೂಮಿ ಹೊಂದಿದ್ದು ಅನುಕೂಲಸ್ತರಾಗಿದ್ದಾರೆ. ಮಗುವನ್ನ ಅವರಿಂದ ತೆಗೆದುಕೊಳ್ಳಲು ಹೊರಟಿರುವ ಸರ್ಕಾರದ ಅದೇಶವನ್ನ ಎದುರಿಸಲು ಕಾನೂನು ಸಲಹೆ ಪಡೆಯುತ್ತಿದ್ದಾರೆ.

ಸದ್ಯಕ್ಕೆ ಸ್ಥಳೀಯ ಅಧಿಕಾರಿಗಳು ಕುಶ್ವಾಹಾ ಹಾಗೂ ಪತ್ನಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಅವರು ಮಗುವನ್ನ ಹಿಂದಿರುಗಿಸಲೇಬೇಕು. ಮಗು ಬೇಕಾದ್ರೆ ದತ್ತು ಪಡೆಯುವ ಪ್ರಕ್ರಿಯೆ ಮಾಡಬೇಕಾಗಿದೆ. ಆದ್ರೆ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಕುಶ್ವಾಹಾ ಹಾಗೂ ಅವರ ಪತ್ನಿ ಮಗುವನ್ನ ದತ್ತು ಪಡೆಯಲು ಅರ್ಜಿ ಹಾಕಿದ್ರೂ ಆ ಮಗು ಅವರಿಗೆ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಯಾಕಂದ್ರೆ ಬೇರೆ ಅರ್ಜಿದಾರರೂ ಇರುತ್ತಾರೆ. ಇವರಿಗಿಂತ ಅರ್ಹರಾದವರನ್ನು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಯ ಶರ್ಮಾ ಅವರ ಪ್ರಕಾರ, ಮಗುವೊಂದು ಪತ್ತೆಯಾದ 2 ತಿಂಗಳ ಬಳಿಕವಷ್ಟೇ ದತ್ತು ಪ್ರಕ್ರಿಯೆಗೆ ಅರ್ಹವಾಗುತ್ತದೆ. ಪೊಲೀಸರು ಮಗುವಿನ ನಿಜವಾದ ತಂದೆ ತಾಯಿಯನ್ನು ಹುಡುಕಲು ಈ ಎರಡು ತಿಂಗಳಲ್ಲಿ ಪ್ರಯತ್ನಿಸುತ್ತಾರೆ. ನವಜಾತ ಶಿಶುವಿಗೆ ಅನಾರೋಗ್ಯವಿದ್ದರೆ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆಲ್ಲಾ ಎರಡು ತಿಂಗಳು ಬೇಕಾಗುತ್ತದೆ. ಅದಾದ ನಂತರ ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿಗೆ ಮಾಹಿತಿ ನೀಡಿದ ಬಳಿಕವಷ್ಟೇ ಮಗು ದತ್ತು ಪಡೆಯಲು ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.

ಹೀಗಾಗಿ ಕಾನೂನು ಪ್ರಕ್ರಿಯೆಯ ನಂಬಿಕೆಯ ಜೊತೆಗೆ ಕುಶ್ವಾಹಾ ದಂಪತಿ ದೇವರನ್ನ ಪ್ರಾರ್ಥಿಸುತ್ತಿದ್ದಾರೆ.

TAGGED:abandoned girladoptioncouplerajasthanಅನಾಥ ಹೆಣ್ಣುಮಗುದತ್ತು ಪ್ರಕ್ರಿಯೆದಂಪತಿಪಬ್ಲಿಕ್ ಟಿವಿರಾಜಸ್ಥಾನ
Share This Article
Facebook Whatsapp Whatsapp Telegram

You Might Also Like

Iran
Bengaluru City

ಇರಾನ್‌ನಲ್ಲಿ ಸಿಲುಕಿದ್ದಾರೆ ಕರ್ನಾಟಕದ 9 ವಿದ್ಯಾರ್ಥಿಗಳು – ಭಾರತಕ್ಕೆ ಕರೆತರುವಂತೆ ಮನವಿ

Public TV
By Public TV
2 minutes ago
Kamal Haasan 1
Cinema

ಖಡ್ಗ ಕೊಡಲು ಬಂದ ಅಭಿಮಾನಿ ಮೇಲೆ ಕಮಲ್‌ ಹಾಸನ್‌ ಗರಂ

Public TV
By Public TV
8 minutes ago
K Gopalaiah
Latest

ಸಿಎಂ, ಡಿಸಿಎಂ, ರಾಜೀನಾಮೆಗೆ ಒತ್ತಾಯಿಸಿ ಜೂ. 17 ರಂದು ಬೃಹತ್ ಪ್ರತಿಭಟನೆ: ಗೋಪಾಲಯ್ಯ

Public TV
By Public TV
45 minutes ago
Bike Theft
Crime

ಕದ್ದ ಸ್ಕೂಟರ್ ಅಪಘಾತ ಮಾಡಿಕೊಂಡು ಸಿಕ್ಕಿ ಬಿದ್ದ ಕಳ್ಳ!

Public TV
By Public TV
56 minutes ago
Kodagu
Crime

ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಸಂಶಯಾಸ್ಪದ ಸಾವು – DRF, RFO ಸೇರಿ ಐವರ ವಿರುದ್ಧ ಎಫ್‌ಐಆರ್‌

Public TV
By Public TV
1 hour ago
Chopper Crash Rajveer Singh Chauhan
Latest

ಉತ್ತರಾಖಂಡ್‌ ಹೆಲಿಕಾಪ್ಟರ್‌ ಪತನ – 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್‌ಗಿತ್ತು ಅಪಾರ ಅನುಭವ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?