Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸುಮಾರು 13 ತಿಂಗಳಿಂದ ಒಂದು ಕೆಲಸವನ್ನೂ ಸರ್ಕಾರ ಮಾಡಿಕೊಟ್ಟಿಲ್ಲ- ಮುನಿರತ್ನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸುಮಾರು 13 ತಿಂಗಳಿಂದ ಒಂದು ಕೆಲಸವನ್ನೂ ಸರ್ಕಾರ ಮಾಡಿಕೊಟ್ಟಿಲ್ಲ- ಮುನಿರತ್ನ

Bengaluru City

ಸುಮಾರು 13 ತಿಂಗಳಿಂದ ಒಂದು ಕೆಲಸವನ್ನೂ ಸರ್ಕಾರ ಮಾಡಿಕೊಟ್ಟಿಲ್ಲ- ಮುನಿರತ್ನ

Public TV
Last updated: July 8, 2019 11:38 am
Public TV
Share
2 Min Read
MUNIRATNA
SHARE

ಬೆಂಗಳೂರು: ನಿಮ್ಮ ಜೊತೆ ನಾವಿದ್ದೀವಿ, ಬನ್ನಿ ನಿಮ್ಮ ಕ್ಷೇತ್ರದ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಕೇಳುವವರಿಲ್ಲ. ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನಮಗೆ ಸಂಬಂಧವಿಲ್ಲ ಎಂಬಂತೆ ನಡೆದುಕೊಂಡು ಹೋಗುತ್ತಿದೆ. ಈ ಸರ್ಕಾರ ಎಷ್ಟು ದಿನ ಇರುತ್ತದೆ ಎಂದು ದಿನಾ ಬೆಳಗ್ಗೆ ಆದರೆ ಸಾರ್ವಜನಿಕರಲ್ಲಿ ಗೊಂದಲವಿದೆ ಎಂದು ಅತೃಪ್ತ ಶಾಸಕ ಮುನಿರತ್ನ ತಿಳಿಸಿದ್ದಾರೆ.

rebel final

ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಎಂದರೆ ಎರಡೂ ಪಕ್ಷದವರು ಹೊಂದುಕೊಂಡು ಹೋಗುವುದು ಅವರವರ ಕರ್ತವ್ಯವಾಗಿದೆ. ಈಗ 115 ಜನ ನಮ್ಮವರು ಎಂದು ಜೆಡಿಎಸ್ ನವರು ಮತ್ತು ಕಾಂಗ್ರೆಸ್ ನವರು ಭಾವಿಸಬೇಕು. ಆದರೆ ಕಾಂಗ್ರೆಸ್ 87 ಮಾತ್ರ ನಮ್ಮವರು, ಜೆಡಿಎಸ್‍ನವರು 37 ಜನ ಮಾತ್ರ ನಮ್ಮವರು ಅಂದುಕೊಳ್ಳುತ್ತಿದ್ದಾರೆ. ಇವರ ಮಧ್ಯೆ ಅಭಿವೃದ್ಧಿ ಬಗ್ಗೆ ಯಾರನ್ನು ಕೇಳಬೇಕು ಎಂದು ಪ್ರಶ್ನೆ ಮಾಡಿದ ಅವರು ಸುಮಾರು 13 ತಿಂಗಳಿಂದ ಒಂದು ಕೆಲಸವನ್ನು ಸಹ ಸರ್ಕಾರ ಮಾಡಿಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Rebel MLA

ನಮ್ಮ ಭಾಗದಲ್ಲಿ ಮೆಟ್ರೋಗೆ ಅನುಕೂಲ ಇಲ್ಲ. ಹೀಗಾಗಿ ನನಗೆ ಒಂದು ಲಿಂಕ್ ಕೊಡಿ ಎಂದು ಕೇಳಿದ್ದೆ. ಇದು ಬಹಳ ದೊಡ್ಡ ಕೆಲಸವೇನು ಅಲ್ಲ. ಇಂದು ನಾವು ಮೆಟ್ರೋಗೆ ಬಹಳಷ್ಟು ಹಣವನ್ನು ಕೊಡುತ್ತಿದ್ದೇವೆ. ಇದು ನನ್ನ ಒಂದು ಕ್ಷೇತ್ರಕ್ಕೆ ಮಾತ್ರ ಅನುಕೂಲವಲ್ಲ. ಇದರಿಂದ ಐದು ಕ್ಷೇತ್ರಗಳಿಗೆ ಅನುಕೂಲವಾಗುತ್ತದೆ ಎಂದರು.

muniratna 2

ಗೊರಗುಂಟೆಪಾಳ್ಯ, ಬೆಂಗಳೂರಿಗೆ ಅತೀ ಹೆಚ್ಚು ವಾಹನ ಬರುವ ಪ್ರದೇಶವಾಗಿದೆ. ಅರ್ಧ ಬೆಂಗಳೂರಿನಲ್ಲಿ ಟ್ರಾಫಿಕ್ ಇದೆ. ಅಲ್ಲಿ ಸಿಗ್ನಲ್ ಫ್ರಿ ಕಾರ್ ಡಾರ್ ಮಾಡಬೇಕು, ಜೊತೆ ಅಂಡರ್ ಪಾಸ್ ಮಾಡಬೇಕು. ಇದರ ಬಗ್ಗೆ ಮಾತನಾಡಬೇಕು ಮೀಟಿಂಗ್ ಕರೆಯಿರಿ ಎಂದಿದ್ದೆ. ಆದರೆ ಯಾರು ಕೂಡ ಗಮನ ಹರಿಸಿಲ್ಲ. ಇದಕ್ಕೆ ಸಂಬಂಧ ಪಟ್ಟಂತೆ ನಾನು ರೇವಣ್ಣ ಅವರನ್ನು ಭೇಟಿ ಮಾಡಿದ್ದೆ. ಈ ಬಗ್ಗೆ ಸಿಎಂ, ಡಿಸಿಎಂ ಗಮನಕ್ಕೆ ತಂದರೂ ಗಮನ ಹರಿಸಿಲ್ಲ. ಬೆಂಗಳೂರಿಗೆ 24 ಸಾವಿರ ಕೋಟಿ ಕೊಡುತ್ತೇನೆ ಎನ್ನುತ್ತಾರೆ. 24 ಸಾವಿರವನ್ನು ಎಲ್ಲಿ, ಯಾವ ಕ್ಷೇತ್ರಕ್ಕೆ ಕೊಟ್ಟಿದ್ದೀರಿ ಒಂದು ಗೊತ್ತಿಲ್ಲ ಎಂದು ಗರಂ ಆದರು.

revanna

ಬೆಂಗಳೂರಿಗೆ ಸಂಬಂಧಿಸಿದಂತೆ ರೇವಣ್ಣ ಅವರು 24 ಸಾವಿರ ಕೊಟ್ಟು ಡಿಪಿಆರ್ ಮಾಡಿದ್ದಾರೆ. ಆದರೆ ರೇವಣ್ಣ ಅವರನ್ನು ಕೇಳಿದ್ರೆ ನಮಗೆ ಕೆಲಸ ಆಗುತ್ತಿಲ್ಲ ಎಂದು ಹೇಳುತ್ತಾರೆ. ಹಾಗಿದ್ರೆ ನಾವು ಯಾರನ್ನು ಕೇಳಬೇಕು. ರೇವಣ್ಣ ಅವರು ಹೊಳೆನರಸೀಪುರಕ್ಕೋ ಅಥವಾ ಹಾಸನಕ್ಕೆ ಅನುಕೂಲ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ಅವರವರ ಕ್ಷೇತ್ರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿ ಮಾಡಿಕೊಳ್ಳಲಿ. ಕೊನೆ ಪಕ್ಷ ಬನ್ನಿ ಒಂದು ದಿನ ಮಾತಾಡೋಣ ಎಂದು ಇಂದಿನವರೆಗೂ ಕರೆದಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

dcm 1

ಡಿಸಿಎಂ ವಿರುದ್ಧ ಕಿಡಿ:
ಉಪಮುಖ್ಯಮಂತ್ರಿಯವರನ್ನು ಕೇಳೋಣ ಅಂದ್ರೆ ಅವರಿಗೆ ಯಾವ ಅಧಿಕಾರನೂ ಇಲ್ಲ. ಅವರಿಗೆ ಝೀರೋ ಟ್ರಾಫಿಕ್ ಬಿಟ್ಟರೆ ಅವರಿಗೆ ಯಾವುದೇ ಅಧಿಕಾರವಿಲ್ಲ. ಆದರೆ ಹೆಸರಿಗೆ ಮಾತ್ರ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಅವರು ತಮ್ಮ ಅಧಿಕಾರವನ್ನು ಯಾವುದಕ್ಕೂ ಬಳಸಿಕೊಂಡಿಲ್ಲ. ಈ ಎಲ್ಲಾ ವಿಚಾರಗಳು ಬೇಸರ ತರಿಸಿದೆ. ಹೀಗಾಗಿ ಇನ್ನು ಮುಂದೆ ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂದರೆ ಒಂದು ಪಕ್ಷಕ್ಕೆ ಮತ ಕೊಟ್ಟು ಗೆಲ್ಲಿಸಿ, ರಾಜ್ಯವನ್ನು ಅಭಿವೃದ್ಧಿ ಪಡಿಸೋಕೆ ಚಿಂತನೆ ಮಾಡಬೇಕು ಅಂದರು.

TAGGED:bengalurucongressMLAMuniratnaPublic TVresignಕಾಂಗ್ರೆಸ್ಪಬ್ಲಿಕ್ ಟಿವಿಬೆಂಗಳೂರುಮುನಿರತ್ನರಾಜೀನಾಮೆಶಾಸಕ
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Karnataka PUC Result Student passes with 111 marks out of 100 Hindi
Bengaluru City

ಪಿಯಸಿ ರಿಸಲ್ಟ್‌ ಎಡವಟ್ಟು – 100ಕ್ಕೆ 111 ಅಂಕ ನೀಡಿದ ಪಿಯು ಬೋರ್ಡ್‌!

Public TV
By Public TV
49 seconds ago
Peenya Flyover
Bengaluru City

ಮುಂದಿನ ವಾರ ತುಮಕೂರು ರಸ್ತೆ ಫ್ಲೈಓವರ್‌ ಬಂದ್‌ ಸಾಧ್ಯತೆ

Public TV
By Public TV
2 hours ago
lokayukta police arrest chief officer of sirwara town panchayat for accepting bribe of rs 1 lakh
Crime

1 ಲಕ್ಷ ಲಂಚ ಪಡೆದು ಪರಾರಿಗೆ ಯತ್ನ – ಅಧಿಕಾರಿಯನ್ನು ಚೇಸ್ ಮಾಡಿ ಹಿಡಿದ ʻಲೋಕಾʼ ಪೊಲೀಸರು

Public TV
By Public TV
2 hours ago
CJ Roy
Bengaluru City

ಮಾನಸಿಕ ಖಿನ್ನತೆಯಿಂದ ಸಿಜೆ ರಾಯ್‌ ಆತ್ಮಹತ್ಯೆ – ಎಸ್‌ಐಟಿ ತನಿಖೆ ಪೂರ್ಣ

Public TV
By Public TV
3 hours ago
Heat Waves Beach
Dakshina Kannada

ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಎಚ್ಚರಿಕೆ – ಯೆಲ್ಲೋ ಅಲರ್ಟ್‌ ಜಾರಿ

Public TV
By Public TV
3 hours ago
Tejasvi Surya
Bengaluru City

TCS World 10K: 10 ಕಿ.ಮೀ. ರಸ್ತೆಯನ್ನು ಶೀಘ್ರವೇ ರಿಪೇರಿ ಮಾಡಿ – ಸರ್ಕಾರಕ್ಕೆ ತೇಜಸ್ವಿ ಸೂರ್ಯ ಮನವಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?