Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಳೆಯೆಂಬ ವ್ಯಾಘ್ರ ಹಸಿದಿದ್ದಾನೆ. ಪುಣ್ಯಕೋಟಿ ಆರ್ತನಾದ ಇಡುತ್ತಿದ್ದಾಳೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಳೆಯೆಂಬ ವ್ಯಾಘ್ರ ಹಸಿದಿದ್ದಾನೆ. ಪುಣ್ಯಕೋಟಿ ಆರ್ತನಾದ ಇಡುತ್ತಿದ್ದಾಳೆ

Bengaluru City

ಮಳೆಯೆಂಬ ವ್ಯಾಘ್ರ ಹಸಿದಿದ್ದಾನೆ. ಪುಣ್ಯಕೋಟಿ ಆರ್ತನಾದ ಇಡುತ್ತಿದ್ದಾಳೆ

Public TV
Last updated: August 17, 2018 9:26 pm
Public TV
Share
2 Min Read
MDK RAIN DRON CAM 2
SHARE

ನಾನಿಂದು ಅಸಹಾಯಕಳಾಗಿದ್ದೇನೆ. ಕಣ್ಣೆದುರೇ ನನ್ನ ಕರುಳ ಬಳ್ಳಿಗಳು ನರಕಯಾತನೆ ಅನುಭವಿಸ್ತಾ ಇದ್ರೂ ಏನೂ ಮಾಡಲಾಗದಂತಹಾ ಸ್ಥಿತಿಯಲ್ಲಿ ನಾನಿದ್ದೇನೆ. ನನ್ನನ್ನ ನೀವು ಕರುನಾಡ ಕಾಶ್ಮೀರ ಅಂದ್ರಿ. ಚುಮು ಚುಮು ಚಳಿ, ಕಾಫೀ ಘಮಲು, ಕರಿ ಮೆಣಸಿನ ಘಾಟು, ಕೊಡವರ ವೀರಗಾಥೆ, ಅಬ್ಬಿ, ರಾಜಾಸೀಟ್, ಓಂಕಾರೇಶ್ವರನ ಸಾನಿಧ್ಯ, ಬ್ರಹ್ಮಗಿರಿ ಬೆಟ್ಟ ಹೀಗೆ ನನ್ನನ್ನ ನೀವು ಮನಸಾರೆ ಹೊಗಳಿದ್ರಿ. ಆದ್ರೆ.ಆದ್ರೆ, ಇಂದು ನನಗೇನಾಗಿದೆ? ಇಂದಿನ ನನ್ನ ದುಸ್ಥಿತಿ ಯಾರಿಗೂ ಬರೋದು ಬೇಡ. ನನ್ನ ಮಕ್ಕಳನ್ನು ನಾನೇ ರಕ್ಷಿಸಿಕೊಳ್ಳಲಾಗದಷ್ಟು ಸೋತು ಹೋಗಿದ್ದೇನೆ. ಯಾಕೋ ನನ್ನ ಮೇಲೆ ಮಳೆರಾಯ ಮುನಿಸಿಕೊಂಡಿದ್ದಾನೆ. ನನ್ನವರ ಆರ್ತನಾದ, ನರಳಾಟ, ದುಃಖಕ್ಕೆ ಅರಣ್ಯರೋದನೆ ಮಾಡೋದಷ್ಟೇ ನನಗುಳಿದಿರೋದು.

Mdk Rain

ಮಳೆಗೆ ಹತ್ತಾರು ಮನೆಗಳು ಕುಸೀತಂತೆ. ಸಾಕಷ್ಟು ಜನ ಮನೆ ಮಠ ಕಳೆದುಕೊಂಡು ಬೀದಿಗೆ ಬಂದ್ರಂತೆ. ರಕ್ಷಣೆಗೆ ನಿಂತಿದ್ದ ಬೆಟ್ಟ ಗುಡ್ಡಗಳೇ ನಾಮಾವಶೇಷವಾದ್ವು. ನೂರಾರು ವರ್ಷಗಳಿಂದ ತಲೆ ಎತ್ತಿ ಆಕಾಶ ನೋಡಿ ಬೆಳೆದಿದ್ದ ಮರಗಳು ನೆಲಕ್ಕುರುಳಿದಾಗ ಹೆತ್ತ ಕರುಳು ನನಗೆ ಅದೆಷ್ಟು ಸಂಕಟವಾಗಿದ್ದಿರಬೇಡ. ತಾಯಿ ಯಾವತ್ತಿಗೂ ಕೆಟ್ಟವಳಾಗಿರೋಕೆ ಸಾಧ್ಯವೇ ಇಲ್ವಂತೆ. ಆದ್ರೆ, ಕಾವೇರಿ ತಾಯಿಯ ಮಡಿಲಲ್ಲಿ ಆಡಿ ಕುಣಿದ ಮಕ್ಕಳಿಗೆ ಅದೆಂಥಾ ಶಿಕ್ಷೆ? ಮನೆಯಲ್ಲಿ ಇರೋಣ ಅಂದ್ರೆ ಅಲ್ಲೂ ಪ್ರವಾಹ. ಇದನ್ನು ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ

ಹೊರಗೆ ಹೋಗೋಣ ಅಂದ್ರೂ ಮತ್ತೆ ವಾಪಾಸ್ ಬರೋ ಗ್ಯಾರಂಟಿ ಇಲ್ಲ. ಪುಟ್ಟ ಪುಟ್ಟ ಕಂದಮ್ಮಗಳು, ವೃದ್ಧರು, ಜನಸಾಮಾನ್ಯರು ತಮ್ಮ ಜೀವ ಉಳಿದ್ರೆ ಸಾಕಪ್ಪಾ ಅನ್ನೋ ಸ್ಥಿತಿಯಲ್ಲಿದ್ದಾರೆ. ಇದು ಯಾರು ಮಾಡಿದ ತಪ್ಪಿಗೆ ಶಿಕ್ಷೆ? ನನ್ನ ಮಕ್ಕಳು ಮಾಡಿದ ಮಹಾಪರಾಧವಾದ್ರೂ ಏನು? ಹೇಳಿ ನಾನು ಯಾರಲ್ಲಿ ನ್ಯಾಯ ಕೇಳಲಿ? ಹೆಲಿಕಾಪ್ಟರ್ ಗಳ ಮೂಲಕ ರಕ್ಷಣೆ ಮಾಡ್ತಾರಂತೆ. ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆದಿದ್ದಾರಂತೆ. ಪುನರ್ವಸತಿಗೆ ತಾತ್ಕಾಲಿಕ ವ್ಯವಸ್ಥೆಯಾಗಿದೆಯಂತೆ. ಈ ಸುದ್ದಿಗಳನ್ನು ಕೇಳುವಾಗ ಬಹುಶಃ ನೀವು ದಿಗ್ಭ್ರಾಂತರಾಗಿರ್ತೀರೇನೋ. ಆದ್ರೆ, ನಾನೋ ಹೆತ್ತಬ್ಬೆ. ನನ್ನ ಕರುಳಿಗೇ ಕೊಡಲಿ ಏಟು ಹಾಕಿದಂತಾಗಿದೆ. ಅಯ್ಯೋ.ಅಮ್ಮಾ ಅನ್ನೋ ಆರ್ತನಾದ ಕೇಳಿದಾಗ ನನ್ನ ಕರುಳ ಕುಡಿಗಳನ್ನು ತಬ್ಬಿಕೊಂಡು ಅಳಲಾ? ಅಥ್ವಾ ದೂರದಲ್ಲೆಲ್ಲೋ ಕುಳಿತ ನಿಮ್ಮ ಸಹಾಯಕ್ಕಾಗಿ ತುಂಬಿದ ಕಣ್ಣಾಲಿಗಳಲ್ಲಿ ನಿರೀಕ್ಷೆ ಇಟ್ಟುಕೊಂಡು ಕಾಯಲಾ..? ಒಂದೂ ಅರ್ಥವಾಗುತ್ತಿಲ್ಲ. ಸೂರಿಲ್ಲ, ಸಾರಿಗೆ ಇಲ್ಲ,ಸಂಚಾರ ಇಲ್ಲ,ವಿದ್ಯುತ್ ಇಲ್ಲ, ಹೊಟ್ಟೆಗೆ ಕೂಳಿಲ್ಲ,ಯಾವುದೋ ಅಜ್ಞಾತ ಸ್ಥಳದಲ್ಲಿ ಜೀವವನ್ನ ಒತ್ತೆ ಇಟ್ಟು ಬದುಕೋ ಅನಿವಾರ್ಯತೆ ಯಾಕೆ ಸೃಷ್ಟಿಸಿಬಿಟ್ಟೆ ದೇವ್ರೇ?

mdk raina 1

ನನಗೀಗ ನಿಮ್ಮ ಸಹಾಯ ಬೇಕಿದೆ. ಅಂದು ಪುಣ್ಯ ಕೋಟಿ ತನ್ನ ಕಂದಮ್ಮನನ್ನ ಉಳಿಸೋಕೆ ತನ್ನ ಓರಗೆಯವ್ರ ಮಡಿಲಿಗೆ ಹಾಕಿ ವ್ರಾಘ್ರನ ಹಸಿವನ್ನು ತಣಿಸೋಕೆ ಹೋದಳಂತೆ. ಇಂದು ನಾನು ಅದೇ ಪುಣ್ಯಕೋಟಿಯ ಸ್ಥಾನದಲ್ಲಿದ್ದೇನೆ. ಮಳೆ ಅನ್ನೋ ವ್ಯಾಘ್ರ ಹಸಿದಿದ್ದಾನೆ ಅನ್ಸುತ್ತೆ. ನನ್ನ ಕಥೆ ಏನೋ ಗೊತ್ತಿಲ್ಲ. ಆದ್ರೆ, ನನ್ನ ಸೆರಗಿನಲ್ಲಿ ಅಡಗಿರೋ ನನ್ನ ಮಕ್ಕಳ ಕೈ ಬಿಡಬೇಡಿ. ನಿಮಗೆ ತೋಚಿದಷ್ಟು ಸಹಾಯ ಮಾಡಿ. ಕೊಡಗಿನ ಮಕ್ಕಳು ಮಾತ್ರವೇ ಅಲ್ಲ. ಇಡೀ ರಾಜ್ಯದ ಜನರಿಗೆ ಸ್ಪಂದಿಸಿ. ಪಕ್ಕದ ಕೇರಳದ ಪರಿಸ್ಥಿತಿಯೂ ನಿಮಗೆ ಗೊತ್ತೇ ಇದೆ. ಮಾನವೀಯತೆಗಿಂತ ದೊಡ್ಡದು ಈ ಪ್ರಪಂಚದಲ್ಲಿ ಬೇರೆ ಏನಿರೋದಕ್ಕೆ ಸಾದ್ಯ ಹೇಳಿ. ನನ್ನನ್ನ ಮತ್ತಷ್ಟು ಕಮರಿಸಬೇಡಿ..ಕೈ ಜೋಡಿಸಿ..ನೆರವಾಗಿ.. ಇಂತೀ ನಿಮ್ಮ ಕೊಡಗು.

ಕ್ಷಮಾ ಭಾರದ್ವಾಜ್ 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

MDK KERALA ROAD BUND AV 1

TAGGED:KodaguPublic TVrainಆರ್ಭಟಕೊಡಗುಪಬ್ಲಿಕ್ ಟಿವಿಮಳೆ
Share This Article
Facebook Whatsapp Whatsapp Telegram

Cinema news

Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema

You Might Also Like

iran israel war
Latest

30 ಬಾಂಬ್‌ಗಳಿಂದ ದಾಳಿ – ತನ್ನ ಮನೆಯಲ್ಲೇ ಖಮೇನಿ ಹತ್ಯೆಗೆ ಅಮೆರಿಕ-ಇಸ್ರೇಲ್‌ ರೂಪಿಸಿದ್ದ ರಣತಂತ್ರ ಹೇಗಿತ್ತು?

Public TV
By Public TV
22 minutes ago
Pakistan
Latest

ಖಮೇನಿ ಹತ್ಯೆಗೆ ಆಕ್ರೋಶ – ಕಾಶ್ಮೀರದಲ್ಲಿ ಪ್ರತಿಭಟನೆ, ಪಾಕ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ

Public TV
By Public TV
2 hours ago
Iran Troop
Latest

ಇಸ್ರೇಲ್‌-ಅಮೆರಿಕ ಆರ್ಭಟಕ್ಕೆ ಖಮೇನಿ ಗ್ಯಾಂಗ್ ಖಲ್ಲಾಸ್ – ಇರಾನ್‌ನ ಟಾಪ್‌ ಕಮಾಂಡರ್‌ಗಳೇ ಉಡೀಸ್‌

Public TV
By Public TV
2 hours ago
Udupi SI Death
Districts

ಪೊಲೀಸ್ ಮ್ಯಾರಥಾನ್ ವೇಳೆ ಕುಸಿದು ಬಿದ್ದು ಎಸ್‌ಐ ಸಾವು

Public TV
By Public TV
3 hours ago
Ayatollah Ali Khamenei
Latest

ಪವಾಡವೇ ನಡೆದಿತ್ತು… ಬಾಂಬ್‌ ದಾಳಿಯಲ್ಲೂ ಬದುಕುಳಿದಿದ್ದ ಖಮೇನಿ – ಜೀವನದ ಪ್ರಮುಖ ಘಟ್ಟಗಳು ಹೇಗಿತ್ತು?

Public TV
By Public TV
3 hours ago
UAE Ballistic Missiles
Latest

ಗಲ್ಫ್ ರಾಷ್ಟ್ರಗಳ ಮೇಲೆ ಸಮರ ಸಾರಿದ ಇರಾನ್‌ – ಯುಎಇ ಮೇಲೆ 208 ಡ್ರೋನ್‌, 137 ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?