ಎಚ್‍ಡಿ ಕೋಟೆ, ಮಧುಗಿರಿಯಲ್ಲಿ ಭಾರೀ ಮಳೆ

Public TV
1 Min Read
RAIN KARNATAKA 1
ತುಮಕೂರು, ಮಧುಗಿರಿ

ಮೈಸೂರು: ಬಿಸಿಲ ಧಗೆಯಿಂದ ಬೆಂದು ಹೋಗಿರೋ ಕರುನಾಡಿಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಇವತ್ತು ಮೈಸೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಮಳೆರಾಯ ಪ್ರತ್ಯಕ್ಷಗೊಂಡು ತಂಪೆರೆದಿದ್ದಾನೆ.

ಮೈಸೂರಿನ ಎಚ್.ಡಿ.ಕೋಟೆಯ ಅರಣ್ಯ ಭಾಗ ಸೇರಿದಂತೆ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಸಂಜೆ 3 ಗಂಟೆಗೆ ಆರಂಭವಾದ ಮಳೆ ಅರ್ಧಗಂಟೆ ಸುರಿದಿದೆ.

ತುಮಕೂರು ಜಿಲ್ಲೆಯ ಮಧುಗಿರಿಯಲ್ಲೂ ಮಳೆಯಾಗಿದೆ. ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಭಾನುವಾರ ರಾಮನಗರದ ಸುತ್ತಮುತ್ತಾ ತುಂತುರು ಮಳೆಯಾಗಿತ್ತು.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಮೂರು ದಿನಗಳ ಕಾಲ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೂಡ ನೀಡಿತ್ತು. ಮಳೆ ಬಿದ್ದ ಕಾರಣ ಜನ ಈಗ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಾರೆ.

RAIN KARNATAKA 1
ತುಮಕೂರು, ಮಧುಗಿರಿ
RAIN KARNATAKA 5
ತುಮಕೂರು, ಮಧುಗಿರಿ
RAIN KARNATAKA 4
ತುಮಕೂರು, ಮಧುಗಿರಿ
RAIN KARNATAKA 3
ಎಚ್‍ಡಿ ಕೋಟೆ, ಮೈಸೂರು
RAIN KARNATAKA 2
ಎಚ್‍ಡಿ ಕೋಟೆ, ಮೈಸೂರು

 

Share This Article
Leave a Comment

Leave a Reply

Your email address will not be published. Required fields are marked *