ಬೆಂಗಳೂರು: ಬಿಸಿಲಿನಿಂದ ಬಸವಳಿದಿದ್ದ ಸಿಲಿಕಾನ್ ಸಿಟಿ ಜನತೆಗೆ ವರುಣ ತಂಪೆರೆದಿದ್ದಾನೆ. ಬೆಂಗಳೂರಿನ ಹಲವೆಡೆ ಮಳೆಯ ಸಿಂಚನವಾಗಿದೆ.
ಲಗ್ಗೆರೆಯಲ್ಲಿ ಡಿಕೆ ಸುರೇಶ್ ಪರ ಪ್ರಚಾರ ಸಭೆಗೆ ನೂರಾರು ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ಮಾತನಾಡುವಾಗ ಮಳೆಯಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು ತಾವು ಕುಳಿತ್ತಿದ್ದ ಚೇರ್ ಗಳನ್ನು ಮೇಲಕ್ಕೆ ಎತ್ತಿ ಮಳೆಯಿಂದ ಆಶ್ರಯ ಪಡೆದರು.
- Advertisement 2
ಮಳೆ ಜೋರಾದ ಹಿನ್ನೆಲೆಯಲ್ಲಿ ಪರಮೇಶ್ವರ್ ಅರ್ಧದಲ್ಲೇ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು. ಲಗ್ಗೆರೆ ಮಾತ್ರವಲ್ಲದೆ, ಯಶವಂತಪುರ ಹಾಗೂ ಇನ್ನೂ ಹಲವೆಡೆ ತುಂತುರು ಮಳೆಸುರಿದಿದೆ.
- Advertisement 3