ಶಿವಮೊಗ್ಗ: ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ವೃದ್ಧೆಯ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ಟಾರ್ಪಲ್ ಬಳಸಿ ನೆರವೇರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮದ ನಿವಾಸಿ ವೃದ್ಧೆ ಭವಾನಿ(70) ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆ ವೃದ್ಧೆಯ ಅಂತಿಮ ವಿಧಿ-ವಿಧಾನವನ್ನು ಅವರ ಕುಟುಂಬಸ್ಥರು ಟಾರ್ಪಲ್ ಸಹಾಯದಿಂದ ನೆರವೇರಿಸಿದ್ದಾರೆ. ಇದನ್ನೂ ಓದಿ: ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ಗೆ ಮಾತೃ ವಿಯೋಗ
ಗ್ರಾಮಸ್ಥರು ಮಳೆರಾಯನಿಗೆ ಶಾಪ ಹಾಕುತ್ತಲೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಸರಿಯಾದ ಸ್ಮಶಾನ ಇಲ್ಲದೇ ಗ್ರಾಮಸ್ಥರು ಸಂಸ್ಕಾರ ಮಾಡಲು ಪರದಾಡಿದ್ದಾರೆ.