ರಾಯಚೂರು: ಮೋಸ ಹೋಗೋರು ಎಲ್ಲಿಯತನಕ ಇರುತ್ತಾರೋ ಮೋಸ ಮಾಡೋರು ಅಲ್ಲಿಯವರೆಗೂ ಇದ್ದೇ ಇರ್ತಾರೆ ಎಂಬುದಕ್ಕೆ ರಾಯಚೂರಿನ ಈ ಘಟನೆ ಸಾಕ್ಷಿಯಾಗಿದೆ.
ಚೀಟಿ ಹಣ ಹಾಕಿದ್ರೆ ಮದುವೆ, ಮನೆ ನಿರ್ಮಾಣ ಸೇರಿ ನಾನಾ ಕೆಲಸಕ್ಕೆ ಸಮಯಕ್ಕೆ ಬೇಗ ಹಣ ಸಿಗುತ್ತೆ ಎಂಬ ಆಸೆಯಿಂದ 175 ಮಂದಿ ರೈಲ್ವೇ ಇಲಾಖೆ ಸಿಬ್ಬಂದಿ ಇಲ್ಲಿನ ಟೈಪಿಸ್ಟ್ ರಾಘವೇಂದ್ರ ಬಳಿ ಚೀಟಿ ಹಾಕಿದ್ರು.
ಆಂಧ್ರಪ್ರದೇಶದ ಕಡಪ ಮೂಲದ ಈ ರಾಘವೇಂದ್ರ ಸುಮಾರು 25 ವರ್ಷಗಳಿಂದ ನಿಯತ್ತಾಗಿ ಚೀಟಿ ವ್ಯವಹಾರ ಮಾಡುತ್ತಿದ್ದ. ಆದ್ರೆ ಕಳೆದ 2 ತಿಂಗಳಿನಿಂದ ರಜೆ ಮೇರೆಗೆ ಆಂಧ್ರಕ್ಕೆ ತೆರಳಿರುವ ರಾಘವೇಂದ್ರ, ಈಗ ನನ್ನ ಬಳಿ ಹಣವಿಲ್ಲ ಅಂತಿದ್ದು ಇರೋದು ಕೇವಲ 75 ಲಕ್ಷ ರೂಪಾಯಿ ಆಸ್ತಿ ಅದನ್ನೇ ಮಾರಿ ಬಂದಷ್ಟು ಕೊಡುತ್ತೇನೆ ಅಂತಿದ್ದಾನೆ.
ಆದ್ರೆ ಸಿಬ್ಬಂದಿ ಸೇರಿ ಹಾಕಿರುವ ಒಟ್ಟು ಚೀಟಿ ಹಣ 8 ಕೋಟಿ ದಾಟುತ್ತೆ. ಇದಲ್ಲದೇ ತನ್ನ ಪತ್ನಿ ಸುಜಾತ ಹೆಸರಿನಲ್ಲಿ ಕೋರ್ಟ್ ನೊಟೀಸ್ ನೀಡಿರೋ ರಾಘವೇಂದ್ರ ಹಣಕ್ಕಾಗಿ ಕಿರಿಕಿರಿ ಮಾಡದಂತೆ ರೈಲು ಇಲಾಖೆ ಸಿಬ್ಬಂದಿಗೆ ಎಚ್ಚರಿಸಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews