ಚಲಿಸುತ್ತಿದ್ದ ರೈಲಿನಲ್ಲಿ ಓಡಿ ಹೋಗಿ ಕಳ್ಳನನ್ನು ಹಿಡಿದ ರೈಲ್ವೇ ಪೊಲೀಸ್ ಪೇದೆ!

Public TV
1 Min Read
BIJ ARREST AV

ವಿಜಯಪುರ: ಬಸವ ಎಕ್ಸ್ ಪ್ರೆಸ್ ರೈಲಿನಲ್ಲಿ ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ರೈಲ್ವೇ ಪೇದೆಯೊಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ.

ಶ್ರೀಶಾಂತ ರಾಠೋಡ್ ಬಂಧಿತ ಆರೋಪಿ. ವಿಜಯಪುರ ತಾಲೂಕಿನ ಅತಾಲಟ್ಟಿ ಗ್ರಾಮದ ನಿವಾಸಿ ಬಾಳಕ್ಕ ಮನಗೂಳಿ ಸರ ಕಳೆದುಕೊಂಡಿದ್ದ ಮಹಿಳೆ. ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ ರೈಲ್ವೇ ನಿಲ್ದಾಣ ಸಮೀಪದಲ್ಲಿ ಘಟನೆ ನಡೆದಿದೆ.

ಶುಕ್ರವಾರ ಸಂಜೆ ಬಾಳಕ್ಕ ಅವರು ಬಸವ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಗಲಕೋಟೆಯಿಂದ ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದರು. ಚಲಿಸುತ್ತಿರುವ ರೈಲಿನಲ್ಲಿಯೇ ಶ್ರೀಕಾಂತ, ಬಾಳಕ್ಕ ಅವರು ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರ ಕಳೆದುಕೊಳ್ಳುತ್ತಿದ್ದಂತೆ ಬಾಳಕ್ಕ ಕಿರುಚಿದ ಧ್ವನಿ ಕೇಳಿ ಎಚ್ಚೆತ್ತುಕೊಂಡ ರೈಲ್ವೇ ಪೇದೆ ಅರುಣಕುಮಾರ್ ಕಳ್ಳನ ಹಿಂದೆ ವೇಗವಾಗಿ ಓಡಿ ಹೋಗಿ ಬಂಧಿಸಿದ್ದಾರೆ.

ಪೇದೆ ಅರುಣಕುಮಾರ್ ಅವರ ಸಮಯಪ್ರಜ್ಞೆ ಮೆಚ್ಚಿ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀಕಾಂತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *